ವಿಜಯ ದರ್ಪಣ ನ್ಯೂಸ್…
ತಾಂಡವಪುರ ಗ್ರಾಮದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ ವೈ ವಿಜಯೇಂದ್ರ ಅದ್ದೂರಿ ಸ್ವಾಗತ

ತಾಂಡವಪುರ ಜುಲೈ 2 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಗ್ರಾಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ವೈ ವಿಜೇಂದ್ರ ರವರನ್ನು ಬಿಜೆಪಿ ಪಕ್ಷದ ಮುಖಂಡರು ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತ ಕೋರಿ ಅಭಿನಂದಿಸಿದರು
ಇಂದು ಬಿ ವೈ ವಿಜೇಂದ್ರ ರವರು ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿರುವ ದೇವನೂರು ಮಠಕ್ಕೆ ಭೇಟಿ ಕೊಡಲು ಮೈಸೂರಿನಿಂದ ನಂಜನಗೂಡು ಕಡೆಗೆ ಹೋಗುವಾಗ ತಾಂಡವಪುರದಲ್ಲಿ ಅವರನ್ನು ಸ್ವಾಗತ ಕೋರಿ ಸನ್ಮಾನಿಸಿದರು
ಈ ಸಂದರ್ಭದಲ್ಲಿ ತಾಂಡವಪುರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಅಡಕನಹಳ್ಳಿ ಹುಂಡಿ ಎಮ್ ಮಹದೇವಪ್ಪ ತಾಂಡವಪುರ ಗ್ರಾಮ ಪಂಚಾಯತಿ ಮಾಯ ಸದಸ್ಯ ಗಿರೀಶ್ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಗುರುಸ್ವಾಮಿ ಕುಂಬ್ರಹಳ್ಳಿ ಸುಬ್ಬಣ್ಣ ವರುಣ ಮಂಡಲ ಅಧ್ಯಕ್ಷ ಮಹದೇವಸ್ವಾಮಿ ಲಲಿತಾದ್ರಿಪುರ ಆರ್ ಮಹದೇವಸ್ವಾಮಿ ರಾಂಪುರ ನಾಗೇಂದ್ರ ಹುಳಿಮಾವು ಮಧು ಬೊಕ್ಕಹಳ್ಳಿ ಬಸವರಾಜ ನಾಯಕ ಏಚಗಳ್ಳಿ ಗುರುಸ್ವಾಮಿ ಅಹಲ್ಯ ಶಿವಶಂಕರ್ ತಾಂಡವಪುರದ ಶಿವಕುಮಾರ್ ಹಾಗೂ ಕಾರ್ಯಕರ್ತರು ಮುಖಂಡರು ಹಾಜರಿದ್ದರು










