ಜನಸಾಮಾನ್ಯರ ಜ್ಞಾನ ವಿಕಾಸಕ್ಕೆ ಕೃಷ್ಣ ಚರಿತ್ರೆಯು ಶಾಶ್ವತ ಪರಿಹಾರ ನೀಡುವ ದೈವ : ಚಂದ್ರಶೇಖರ ಹಡಪದ್
ವಿಜಯಪುರ: ಜನಸಾಮಾನ್ಯರ ಜ್ಞಾನ ವಿಕಾಸಕ್ಕೆ ಕೃಷ್ಣ ಚರಿತ್ರೆಯು ಮಾರ್ಗ ದರ್ಶನ ಮಾನವನ ಸಾಂದರ್ಭಿಕ ಶಿಶು ಆಕ್ಷಣದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ದೈವ ಕೃಷ್ಣ ಪರಮಾತ್ಮ ” ಬರೆಹಗಾರರ ಬಳಗ ದ ಜಿಲ್ಲಾಧ್ಯಕ್ಷ ಚಂದ್ರಶೇಖರ ಹಡಪದ ಹೇಳಿದರು .
ಅವರು ಇಲ್ಲಿನ ದೇವನಹಳ್ಳಿ ತಾಲ್ಲೂಕು ವಿಜಯಪುರ ಪಟ್ಟಣದ ಸಮೀಪದ ಕೊಮಸಂದ್ರದ ಗ್ರಾಮದ ಕೃಷ್ಣ ಧ್ಯಾನ ಮಂದಿರದಲ್ಲಿ ನಡೆದ ಕೃಷ್ಣಾಷ್ಟಮಿ ಪ್ರಯುಕ್ತ ನಡೆದ ಕಲಾವಿದರ ಸಂಘದ ಕಾರ್ಯಕ್ರಮ ಕುರಿತ ಮಾತನಾಡುತ್ತ ಮಾನವನ ಎಲ್ಲ ಗುಣಗಳಿಗೆ ಎಲ್ಲ ಅಹಂಕಾರಗಳಿಗೆ ಎಲ್ಲ ಮದಗಳಿಗೆ ಕೃಷ್ಣ ಮಂತ್ರ ಒಂದೆ ಪರಿಹಾರ ಎಂದುತಿಳಿಸಿದರು.
ಕೃಷ್ಣ ಧ್ಯಾನ ಮಂದಿರದ ಬಲಮುರಿ ಶ್ರೀನಿವಾಸ ಮಾತನಾಡಿ ಕೃಷ್ಣ ನೆನೆದರೆ ಕಷ್ಟ ಒಂದಿಷ್ಟಿಲ್ಲ ಹಾಗಾಗಿ ಪರಮಾತ್ಮ ನ ಸೇವೆ ನಮಗೆ ಒಳಿತು ಮಾಡಿ ಶ್ರೇಷ್ಠ ವೆಕ್ತಿತ್ವ ನೀಡುವ ದೈವ ಎಂದು ಹೇಳಿದರು.
ಅಧ್ಯಕ್ಷ ಮೋಹ ಬಾಬು ದೇವರ ಸಾನಿಧ್ಯದಲ್ಲಿ ಕಲಾವಿದರ ಸಂಘದ ಕಾರ್ಯಕ್ರಮ ನೀಡುವುದು ಒಂದು ದೈವ ಕೃಪೆ ಎಂದರು ಹಾಗೂ ನಮ್ಮ ಬಹುತೇಕ ನಾಟಕ ಕೃಷ್ಣ ಕತೆಯೆ ಆಗಿರುತ್ತೆ ಎಂದರು ಹಿರಿಯ ಕಲಾವಿದ ಜಿಲ್ಲೆಯ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಕಲಾವಿದರ ಕಲೆ ಸಾಂಸ್ಕೃತಿಕ ಕಾರ್ಯಕ್ರಮ ಗಳಿಂದ ಹೆಚ್ಚಿನ ಮರೆಗು ಪಡೆಯುವುದು ಎಂದರು.