ರೇಷ್ಮೆ ಗೂಡು ಮಾರುಕಟ್ಟೆಯ ಎಲ್ಲ ಗೋದಾಮುಗಳಲ್ಲಿ ಸುತ್ತಾಡಿ ರೇಷ್ಮೆಗೂಡಿನ ಗುಣಮಟ್ಟ ವೀಕ್ಷಣೆ ಮಾಡಿದ ಮಹಿಳಾ ರೈತರು
ವಿಜಯ ದರ್ಪಣ ನ್ಯೂಸ್…..
ರೇಷ್ಮೆ ಗೂಡು ಮಾರುಕಟ್ಟೆಯ ಎಲ್ಲ ಗೋದಾಮುಗಳಲ್ಲಿ ಸುತ್ತಾಡಿ ರೇಷ್ಮೆಗೂಡಿನ ಗುಣಮಟ್ಟ ವೀಕ್ಷಣೆ ಮಾಡಿದ ಮಹಿಳಾ ರೈತರು

ಶಿಡ್ಲಘಟ್ಟ : ಕೃಷಿ ಅಧ್ಯಯನ ಪ್ರವಾಸಕ್ಕೆಂದು ಬಂದಿದ್ದ 50ಕ್ಕೂ ಹೆಚ್ಚು ಮಂದಿ ಮಹಿಳಾ ರೈತರು ರೇಷ್ಮೆ ಗೂಡು ಮಾರುಕಟ್ಟೆಯ ಎಲ್ಲ ಗೋದಾಮುಗಳಲ್ಲಿ ಸುತ್ತಾಡಿ ರೇಷ್ಮೆಗೂಡಿನ ಗುಣಮಟ್ಟ, ಹರಾಜಿನಲ್ಲಿ ಸಿಕ್ಕ ಬೆಲೆ ಬಗ್ಗೆ ರೈತರಿಂದ, ರೀಲರ್ ದಂತೆ ಚಿತ್ರದುರ್ಗ ಜಿಲ್ಲೆಯ ಆಸು ಪಾಸಿನಲ್ಲಿ ಬಿತ್ತನೆಗೂಡು ಬೆಳೆಯಲಿದ್ದು, ನಮ್ಮಲ್ಲಿ ಮಿಶ್ರತಳಿ ರೇಷ್ಮೆಗೂಡು ಬೆಳೆಯು ವುದಿಲ್ಲ, ಇಲ್ಲಿ ಉತ್ತಮ ಗುಣಮಟ್ಟದ ಗೂಡು ಬೆಳೆದಿದ್ದಾರೆ ಎಂದು ಖುಷಿಪಟ್ಟರು.
ನಗರದಲ್ಲಿರುವ ಏಷ್ಯಾ ಪ್ರಸಿದ್ದ ರೇಷ್ಮೆಗೂಡು ಮಾರುಕಟ್ಟೆಗೆ ಚಿತ್ರದುರ್ಗ ಜಿಲ್ಲೆಯ ಹೊಸ ದುರ್ಗ ತಾಲ್ಲೂಕಿನ ಮಹಿಳಾ ರೇಷ್ಮೆ ಬೆಳೆಗಾರರು ಭೇಟಿ ನೀಡಿದ್ದರು ರೀಲರ್ ಮತ್ತು ರೇಷ್ಮೆ ಬೆಳೆಗಾರರು ಹಾಗೂ ಮಾರುಕಟ್ಟೆ ಅಧಿಕಾರಿಗೆ ಳೊಂದಿಗೆ ಮಾತನಾಡಿ, ಮಾಹಿತಿ ವಿನಿಮಯ ಮಾಡಿಕೊಂಡರು.
ರೀಲರ್ಸ್ ಅಸೋಸಿಯೇಷನ್ ಸಂಘದ ಅಧ್ಯಕ್ಷ ಅನ್ವರ್ ಖಾನ್ ಸೇರಿದಂತೆ ರೇಷ್ಮೆ ಗೂಡು ಬೆಳೆಗಾರರು ಮಾಹಿತಿ ಹಂಚಿಕೊಂಡರು.
ಮಾರುಕಟ್ಟೆ ವೀಕ್ಷಣೆ ಮಾಡಿದ ನಂತರ ಹೊಸದುರ್ಗ ರೇಷ್ಮೆ ವಿಸ್ತರಣಾ ಕೇಂದ್ರದ ವಿಸ್ತರಣಾಧಿಕಾರಿ ಬಿ.ಉಮಾಪತಿ ಮಾತನಾಡಿ, ಕಾರ್ಯಕ್ರಮದಡಿ ಎರಡು ದಿನಗಳ ಕಾಲ ಮಹಿಳಾ ರೈತರ ಕೃಷಿ ಅಧ್ಯಯನ ಪ್ರವಾಸ ಅಧ್ಯಯನ ಪ್ರವಾಸ ಕೈಗೊಂಡಿದ್ದು ರೇಷ್ಮೆಗೂಡು ಘಟಕಗಳಿಗೆ ಭೇಟಿ ನೀಡಲಾಯಿತು.
ಈ ಮಾರುಕಟ್ಟೆ ಹಿಪ್ಪುನೇರಳೆ ತೋಟ, ರೀಲಿಂಗ್ ಭಾಗದ ರೈತರು, ರೀಲರ್ಗಳು, ಅಧಿಕಾರಿಗಳ ವೀಕ್ಷಣೆ ಮೂಲಕ ಎಲ್ಲ ವಿಚಾರ ಹಾಗೂ ಜತೆ ಚರ್ಚೆ, ಸಂವಾದ, ಪ್ರಾತ್ಯಕ್ಷಿಕೆ, ಖುದ್ದು ಮಾಹಿತಿ ಪಡೆದುಕೊಳ್ಳಲಾಯಿತು ಎಂದು ವಿವರಿಸಿದರು.
ಈ ವೇಳೆ ಶೋಭಾ ಇನ್ನಿತರರು ಹಾಜರಿದ್ದರು.
ಭಯ ಆತಂಕ ಬಿಟ್ಟು ಪರೀಕ್ಷೆ ಎದುರಿಸಿ ಯು ಆರ್ ಅನಂತಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ

ಶಿಡ್ಲಘಟ್ಟ : ಭಯ ಆತಂಕ ಬಿಟ್ಟು ಪರೀಕ್ಷೆ ಎದುರಿಸಿ ಯಾರಲ್ಲೇ ಆಗಲಿ ಭಯ ಆತಂಕ ಎಂಬುದು ಅವರಲ್ಲಿನ ಮನೋಸ್ಥೈರ್ಯ ಹಾಗು ಆಲೋಚನೆಯ ಶಕ್ತಿಯನ್ನು ಕೂಡ ಕುಗ್ಗಿಸುತ್ತದೆ ಎಂದು
ಯು.ಆರ್.ನವೀನ್ ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನ ಜ್ಞಾನ ಜ್ಯೋತಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಆಶ್ರಯದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ, ಅಧ್ಯಯನ ಕೌಶಲ್ಯ ಇನ್ನಿತರೆ ವಿಷಯಗಳ ಕುರಿತಾದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಶ್ರದ್ಧೆಯಿಂದ ಅಭ್ಯಾಸ ಮಾಡಿ ಕಲಿತರೆ ಯಾವ ವಿಷಯವೂ ಕಷ್ಟವಲ್ಲ ನಾವು ಓದಿದ್ದು ಅಭ್ಯಾಸ ಮಾಡಿದ್ದು ಬಿಟ್ಟು ಬೇರೆ ಪ್ರಶ್ನೆಗಳು ಪರೀಕ್ಷಾ ಪ್ರಶ್ನೆ ಪತ್ರಿಕೆಯಲ್ಲಿ ಬರುವುದಿಲ್ಲ. ಹಾಗಾಗಿ ಎಲ್ಲ ವಿಷಯಗಳನ್ನು ಶ್ರದ್ಧೆಯಿಂದ ಓದಿ ಅಭ್ಯಾಸ ಮಾಡಿ ಎಂದು ಹೇಳಿದರು.
ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲೆಂದು ಓದಬೇಡಿ, ಎಲ್ಲವನ್ನೂ ಅರ್ಥಮಾಡಿಕೊಂಡು ಓದಿ, ತಂತಾನೆ ಉತ್ತಮ ಅಂಕಗಳನ್ನು ಪಡೆದುಕೊಳ್ಳಬಹುದು ಎಂದು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಬಗ್ಗೆ ಉದಾಹರಣೆ ಸಮೇತ ವಿವರಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಸಾಮಾನ್ಯವಾಗಿ ಗಣಿತ, ಇಂಗ್ಲೀಷ್, ವಿಜ್ಞಾನ ಕಷ್ಟ ಎಂಬ ಮನೋಭಾವ ಬೇರೂರಿರುತ್ತದೆ. ಅದನ್ನೇ ನಾವು ನೀವೆಲ್ಲರೂ ಹೇಳಿಕೊಂಡು ಬರುವ ಕಾರಣ ಈ ವಿಷಯಗಳು ಕಷ್ಟವೇನೋ ಎಂಬ ಭಾವನೆ ನಿಮ್ಮಲ್ಲಿ ಮನೆ ಮಾಡಿರುತ್ತದೆ.
ಪ್ರಿನ್ಸಿಪಲ್ ಮನುಶ್ರೀರಾಜೀವ್ ಮಾತನಾಡಿ, ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯು ವಿದ್ಯಾರ್ಥಿಗಳು ಬದುಕಿನಲ್ಲಿ ಮುಖ್ಯವಾದ ತಿರುವು ಇಲ್ಲಿ ಯಶಸ್ಸು ಕಂಡರೆ ಮುಂದಿನ ಬದುಕಿನಲ್ಲಿ ಎಲ್ಲ ಯಶಸ್ಸು ಸಾಧನೆ ನಮ್ಮದಾಗಲು ಸಾಕಷ್ಟು ಅವಕಾಶಗಳು ಸಿಗುತ್ತವೆ ಎಂದರು.
ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನದ ಕೊರತೆ ಸಾಕಷ್ಟಿದೆ ಇದರಿಂದಾಗಿಯೆ ಬಹಳಷ್ಟು ವಿದ್ಯಾರ್ಥಿಗಳು ಪರೀಕ್ಷೆ ಅಥವಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ನಿರೀಕ್ಷೆಯಂತೆ ಸಾಧನೆ ಮಾಡಲು ಸಾಧ್ಯವಾಗದೆ ಚಡಪಡಿಸುವುದು ನಡೆಯುತ್ತಿದೆ. ಇದನ್ನು ಗಮನಿಸಿ ನಾವು ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಇತರೆ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕಾರ್ಯಾಗಾರವನ್ನು ನಡೆಸಿದ್ದೇವೆ ಎಂದು ಹೇಳಿದರು.
ಈ ವೇಳೆ ಜ್ಞಾನಜ್ಯೋತಿ ಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಲ್ಲದೆ ಸುತ್ತ ಮುತ್ತಲ 13 ಶಾಲೆಗಳ 500 ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು, ವಿಷಯಗಳನ್ನು ಅಧ್ಯಯನ ಮಾಡುವ ಬಗ್ಗೆ, ಪರೀಕ್ಷೆಯನ್ನು ಎದುರಿಸುವ ಬಗ್ಗೆ ಮಾರ್ಗದರ್ಶನ ಸಲಹೆ ನೀಡಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ನವೀನ್ ಕುಮಾರ್, ಡಾ.ಪಿ.ಎಸ್.ರಾಘವೇಂದ್ರ, ಕೆ.ಎಸ್.ವರದರಾಜನ್ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಪ್ರಿನ್ಸಿಪಲ್ ಮನುಶ್ರೀ, ಸಿಎಒ ಅಯ್ಯಪ್ಪರೆಡ್ಡಿ, ಶೈಕ್ಷಣಿಕ ಮೇಲ್ವಿಚಾರಕ ಲಕ್ಷ್ಮಿವಾಸುದೇವ, ಮುಖ್ಯ ಶಿಕ್ಷಕ ಎಂ.ಕೆ.ಅಂಜನಮೂರ್ತಿ, ಉಪ ಪ್ರಾಂಶಪಾಲೆ ಕಲ್ಪನ, ಶಶಿಕಲಾ ಹಾಜರಿದ್ದರು.

ಶಿಡ್ಲಘಟ್ಟ : ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ನವೋದಯ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು, ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ಅವರನ್ನು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಶಶಿಕುಮಾರ್ ಹಾಗು ಪದಾಧಿಕಾರಿಗಳು ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿಕಟಪೂರ್ವ ಅದ್ಯಕ್ಷ ಹಾಗು ಪ್ರಧಾನ ಕಾರ್ಯದರ್ಶಿ ಎಸ್.ಮಂಜುನಾಥ್,ಜಿಲ್ಲಾ ಕಾರ್ಯದರ್ಶಿ ಡಿ.ಜಿ.ಮಲ್ಲಿಕಾರ್ಜುನ,ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಛಾಯಾರಮೇಶ್, ತಾಲ್ಲೂಕು ಕಾ.ನಿ.ಪ.ಸಂಘದ ಮಾಜಿ ಅದ್ಯಕ್ಷ ಹಾಗು ನಿರ್ದೇಶಕ ಸಿ.ಇ.ಕರಗಪ್ಪ ಹಾಜರಿದ್ದರು.
