--Ads--

ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ  ಅಭಿವೃದ್ಧಿಗೆ ಸಹಕಾರ ನೀಡಿದ ಮುಖಂಡರಿಗೆ ಗ್ರಾಮಸ್ಥರಿಂದ ಸನ್ಮಾನ

On: March 9, 2026 3:21 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ  ಅಭಿವೃದ್ಧಿಗೆ ಸಹಕಾರ ನೀಡಿದ ಮುಖಂಡರಿಗೆ ಗ್ರಾಮಸ್ಥರಿಂದ ಸನ್ಮಾನ

ತಾಂಡವಪುರ ಮಾರ್ಚ್ 9 ಮೈಸೂರು ತಾಲ್ಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಪಿಲ್ಲಳ್ಳಿ ಗ್ರಾಮದಲ್ಲಿ ಶ್ರೀ ಆದಿಶಕ್ತಿ ದಂಡಿ ಮಾರಮ್ಮನ ದೇವಾಲಯ ನೂತನವಾಗಿ ನಿರ್ಮಾಣವಾಗಲು ಸಹಕಾರ ಸಹಾಯ ಮಾಡಿದ ಮುಖಂಡರುಗಳಿಗೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಗೌರವ ಸ್ಪೀಕರ್ಸಿ ಮಾತನಾಡಿದ ಕರ್ನಾಟಕ ರಾಜ್ಯ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ರಘು ರವರು ಮಾತನಾಡಿ ಪಿಲ್ಲಹಳ್ಳಿ ಒಂದು ಪುಟ್ಟ ಗ್ರಾಮ ವಾದರೂ ಈ ಗ್ರಾಮದಲ್ಲಿ ಆದಿಶಕ್ತಿ ದಂಡಿನ ಮಾರಮ್ಮನವರ ದೇವಸ್ಥಾನ ನಿರ್ಮಾಣ ಮಾಡಿ ದೇವಾಲಯ ಉದ್ಘಾಟನೆಗೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಮಾನದ ಮೂಲಕ ಈ ಗ್ರಾಮಕ್ಕೆ ಬಂದು ದಂಡಿ ಮಾರಮ್ಮನವರ ದೇವಾಲಯ ಲೋಕಾರ್ಪಣೆ ಮಾಡಿರುವುದು ನೋಡಿದರೆ ಶ್ರೀ ದಂಡಿ ಮಾರಮ್ಮನವರ ಶಕ್ತಿ ಅಪಾರವಾಗಿದೆ ಎಂದು ನಾವು ನಂಬಬಹುದೇ ಎಂದು ಮುಖ್ಯಮಂತ್ರಿಗಳು ಈ ಗ್ರಾಮಕ್ಕೆ ಬಂದು ದೇವಾಲಯ ಉದ್ಘಾಟಿಸಿ ಲೋಕಾರ್ಪಣೆ ಮಾಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೆ ವೇಳೆ ದೇವರತ್ನ ಫೌಂಡೇಶನ್ ಸಂಸ್ಥಾಪಕ ಹಾಗೂ ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ವಕೀಲರು ಆದ ಎಂಸಿ ಹುಂಡಿ ಎಂ ಶಿವಪ್ರಸಾದ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಗ್ರಾಮದ ಹಿರಿಯರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಸಪಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ರಘು ಮೈಸೂರು ಜಿಲ್ಲಾ ಕಾನೂನು ಘಟಕದ ಎಂಸಿ ಹುಂಡಿ ಶಿವಪ್ರಸಾದ್ ಗ್ರಾಮ ಪಂಚಾಯಿತಿ ಸದಸ್ಯ ಎಸ್ ಶಿವಕುಮಾರ್ ಗ್ರಾಮದ ಯಜಮಾನರಾದ ರಂಗಸ್ವಾಮಿ ಲೋಕೇಶ ಸ್ವಾಮಿ ಮಹದೇವಸ್ವಾಮಿ ರಾಮ ಮಧು ಸುರೇಶ್ ಹಾಗೂ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now