ವಿಜಯ ದರ್ಪಣ ನ್ಯೂಸ್….
ಪವಮಾನಪುರ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ” 1008 ಶ್ರೀ ವಿಜಯೀಂದ್ರತೀರ್ಥ ಶ್ರೀಪಾದಂಗಳವರ “ಆರಾಧನಾ” ಮಹೋತ್ಸವ

ಬೆಂಗಳೂರು : ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶ ಆಜ್ಞಾನುಸಾರ ಶ್ರೀಮಠದ ವಿಚಾರಣಾಕರ್ತರಾದ ಗಿರಿರಾಜ ಆಚಾರ್ ಹಾಗೂ ನೂತನ ವ್ಯವಸ್ಥಾಪಕರಾದ ನಂದಕಿಶೋರ್ ಆಚಾರ್ಯರ ನೇತೃತ್ವದಲ್ಲಿ
ಶ್ರೀ ಶ್ರೀ ವಿಜಯೀಂದ್ರತೀರ್ಥ ಶ್ರೀಪಾದಂಗಳವರ ಆರಾಧನಾ ಮಹೋತ್ಸವವು ನೆರವೇರಿತು.

ಈ ಸಂದರ್ಭದಲ್ಲಿ ಗುರುರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಕನಕಾಭಿಷೇಕನ್ನು ಅರ್ಚಕರಾದ ಶ್ರೀ ಇಂದಿರೇಶ ಆಚಾರ್ಯರು ನೆರವೇರಿಸಿದರು.
ಈ ಉತ್ಸವದ ಸಂದರ್ಭದಲ್ಲಿ ವಿದ್ವಾನ್ ರಾಜಾ ಬಂಡಿ ಆಚಾರ್ಯರು ಉಪಸ್ಥಿತರಿದ್ದು, ಮಹಾ ಮಂಗಳಾರತಿಯನ್ನುನೆರವೇರಿಸಿದರು.

ಈ ಆರಾಧನಾ ಮಹೋತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ ತೀರ್ಥಪ್ರಸಾದವನ್ನು ಸ್ವೀಕರಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು.









