--Ads--

ಸಾಲು ಸಾಲು ಹಬ್ಬಗಳು ಹಿನ್ನಲೆಯಲ್ಲಿ  ಮಾರ್ಕೆಟ್ ನಲ್ಲಿ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ

On: August 7, 2025 5:37 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸಾಲು ಸಾಲು ಹಬ್ಬಗಳು ಹಿನ್ನಲೆಯಲ್ಲಿ  ಮಾರ್ಕೆಟ್ ನಲ್ಲಿ ಬಟ್ಟೆ ಬ್ಯಾಗ್ ವಿತರಿಸಿ ಜಾಗೃತಿ

ಮೈಸೂರು ತಾಂಡವಪುರ ಆಗಸ್ಟ್ 07 : ಕರ್ನಾಟಕ ಹಿತರಕ್ಷಣಾ ವೇದಿಕೆ ಹಾಗೂ ಚಾಮುಂಡೇಶ್ವರಿ ಬಳಗ ವತಿಯಿಂದ
ನಗರದ ದೇವರಾಜ ಮಾರ್ಕೆಟ್ ಮುಂಭಾಗ ಶ್ರಾವಣ ಮಾಸದಹಬ್ಬಗಳು ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ
ಚಾಮುಂಡೇಶ್ವರಿ ಬಳಗದ ವತಿಯಿಂದ ಬಟ್ಟೆ ಬ್ಯಾಗ್ ಗಳನ್ನು ವಿತರಿಸಿ ಪರಿಸರ ಕಾಳಜಿ ಮೆರೆದರು ಹಬ್ಬಗಳನ್ನು ಭಕ್ತಿ ಶ್ರದ್ಧ ಪೂರ್ವಕವಾಗಿ ಸಾರ್ವಜನಿಕರು ಆಚರಿಸುತ್ತಿದ್ದು
ಹಬ್ಬಗಳನ್ನು ಆಚರಿಸಲು ಮಾರ್ಕೆಟ್ ನಲ್ಲಿ ಹಬ್ಬಕ್ಕೆ
ವಸ್ತುಗಳನ್ನು ಖರೀದಿಸಲು ಬರುವಾಗ ಬಟ್ಟೆ ಬ್ಯಾಗನ್ನು ಬಳಸುವಂತೆ ಬಟ್ಟೆ ಬ್ಯಾಗ್ ವಿತರಿಸುವ ಮೂಲಕ ಪ್ಲಾಸ್ಟಿಕ್ ಬ್ಯಾಕ್ ತ್ಯಜಿಸಿ ಬಟ್ಟೆ ಬ್ಯಾಗ್ ಬಳಸಿ ಎಂಬ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಚಾಮುಂಡೇಶ್ವರಿ ಯುವ ಬಳಗದ ಅಧ್ಯಕ್ಷ ನಜರ್ಬಾದ್ ನಟರಾಜ್ ಹಿಂದಿನ ಕಾಲದಂತೆ ಈ ಕಾಲದಲ್ಲೂ ನಾವು ಬಟ್ಟೆಯಲ್ಲಿ ಹೆಣೆದ ಅಥವಾ ಬಟ್ಟೆಯ ಕೈ ಚೀಲಗಳನ್ನು ಹಿಡಿದು ಮಾರುಕಟ್ಟೆಗೆ ಹೋಗುವುದನ್ನು ರೂಢಿ ಮಾಡಿಕೊಳ್ಳುವ ಮೂಲಕ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಹೇಳಿದರು.

ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಸಮತೋಲನಕ್ಕೆ ಧಕ್ಕೆಯಾಗುತ್ತಿದೆ ಪರಿಸರದ ಮೇಲೂ ಕೂಡ ಪರಿಣಾಮ ಬಿರಲಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಬ್ಯಾಗ್ ಬಳಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಬಟ್ಟೆ ಕೈ ಚೀಲಗಳನ್ನು ಬಳಕೆ ಮಾಡಿ ಪರಿಸರದ ಜತೆ ಜೀವ ವೈವಿದ್ಯತೆ ಸಂರಕ್ಷಿಸಲು ಜನರು ಮುಂದಾಗಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್, ಕರ್ನಾಟಕ ಹಿತರಕ್ಷಣ ವೇದಿಕೆ ಅಧ್ಯಕ್ಷ ವಿನಯ್ ಕುಮಾರ್, ಎಸ್ ಎನ್ ರಾಜೇಶ್, ಗುರುರಾಜ್ ಶೆಟ್ಟಿ, ರವಿಚಂದ್ರ ಹಾಗೂ ಇನ್ನಿತರರು ಹಾಜರಿದ್ದರು

WhatsApp

Join Now

Telegram

Join Now

Instagram

Join Now