ವಿಜಯ ದರ್ಪಣ ನ್ಯೂಸ್….
ನಂಜನಗೂಡು ತಾಲ್ಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ರಾಗಿ ಪಿ ಸತೀಶ್ ಆಯ್ಕೆ

ನಂಜನಗೂಡು ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷರಾಗಿ ಪಿ ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ನಂಜನಗೂಡು ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿದ್ದು
ನೂತನ ಅಧ್ಯಕ್ಷ ಸತೀಶ್ ಸೇರಿದಂತೆ ಉಪಾಧ್ಯಕ್ಷರು ಕಾರ್ಯದರ್ಶಿಗಳು ಖಜಾಂಜಿ ಸಹಕಾರದರ್ಶಿಗಳು ಮತ್ತು ನಿರ್ದೇಶಕರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷ ಸತೀಶ್ ಮಾತನಾಡಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಜಯಕುಮಾರ್ ಮತ್ತು ಮೋಹನ್ ಅವರು ಕೂಡ ಉತ್ತಮ ಕೆಲಸ ಮಾಡಿದ್ದಾರೆ ಸಂಘದ ಏಳಿಗೆಗಾಗಿ ದುಡಿದಿದ್ದಾರೆ ಅದೇ ರೀತಿ ನನಗೂ ಕೂಡ ಸಂಘದ ಎಲ್ಲ ಸದಸ್ಯರುಗಳು ಹಿರಿಯ ಸದಸ್ಯರುಗಳು ಮಾಜಿ ಅಧ್ಯಕ್ಷರುಗಳು ಉಪಾಧ್ಯಕ್ಷರುಗಳು ಕಾರ್ಯದರ್ಶಿಗಳು ಖಜಾಂಚಿ ಸೇರಿದಂತೆ ಎಲ್ಲಾ ನಿರ್ದೇಶಕರು ಕೂಡ ನನಗೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು ನಿಮ್ಮ ಸಹಕಾರದಿಂದ ಮುಂದಿನ ದಿನಗಳಲ್ಲಿ ಉತ್ತಮ ಕೆಲಸ ಮಾಡುತ್ತೇನೆ ಎಂದು ಸಭೆಯಲ್ಲಿ ತಿಳಿಸಿದರು
ನಮ್ಮ ಸಂಘಕ್ಕೆ ಸ್ವಂತ ಕಚೇರಿ ಇಲ್ಲ ಆದ್ದರಿಂದ ಸ್ಥಳೀಯ ಶಾಸಕರಾದ ದರ್ಶನ್ ಧ್ರುವ ನಾರಾಯಣ್ ಅವರಿಗೆ ಸಂಘದ ಕಟ್ಟಡ ನಿರ್ಮಿಸಲು ಪಟ್ಟಣದಲ್ಲೇ ಸ್ಥಳಾವಕಾಶ ನೀಡಬೇಕೆಂದು ಎಲ್ಲರೂ ಒಟ್ಟಿಗೆ ಹೋಗಿ ಮನವಿ ಸಲ್ಲಿಸೋಣ ಎಂದರು
ನಂಜನಗೂಡು ಛಾಯಾಗ್ರ ತಾಲೂಕು ಸಂಘದ ಪದಾಧಿಕಾರಿಗಳು ಆಯ್ಕೆ ಉಪಾಧ್ಯಕ್ಷರಾಗಿ ಸೋಮಶೇಖರ್ ಎಂ ಕಾರ್ಯದರ್ಶಿಯಾಗಿ ನಂಜಪ್ಪ ಎನ್ಎಸ್ ಖಜಾಂಜಿ ಮಹೇಶ್ ಎಸ್ ಎಸ್ ಸಹಕಾರದರ್ಶಿ ಹರೀಶ್ ನಿರ್ದರ್ಶಕರಾಗಿ ಚಂದ್ರು ಕುಮಾರ್ ಶ್ರೀನಿವಾಸ್ ಎಂ ರೇಣು ಚಂದ್ರು ನಾಗೇಂದ್ರ ಆದಿ ಶ್ರೀಕಾಂತ ಸಿಎನ್ ರವಿಕುಮಾರ್ ಶಿವರಾಜ್ ದಿನೇಶ್ ಉಳ್ಳಹಳ್ಳಿ ಚೇತನ್ ಮನು ಎಚ್ಎಸ್ ಆಯ್ಕೆಯಾಗಿದ್ದಾರೆ
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ವಿಜಯಕುಮಾರ ಮೋಹನ್ ಮತ್ತು ರಾಜ್ಯಶೇಖರ್ ಗಿರೀಶ್ ಮತ್ತು ಸೋಮಣ್ಣ ಸೇರಿದಂತೆ ಎಲ್ಲಾ ಛಾಯಾಗ್ರಾಹಕರು ಇದ್ದರು











