--Ads--

ಪ್ರತಿಷ್ಠಿತ “ಬೆಸ್ಟ್ ಜೆಂಟಲ್ಮನ್ ಅಡ್ವೋಕೇಟ್” ಪ್ರಶಸ್ತಿಯನ್ನು ಪಡೆದ ಮೈಸೂರು ವಿದ್ಯಾರ್ಥಿಗಳು 

On: May 25, 2026 2:18 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಪ್ರತಿಷ್ಠಿತ “ಬೆಸ್ಟ್ ಜೆಂಟಲ್ಮನ್ ಅಡ್ವೋಕೇಟ್” ಪ್ರಶಸ್ತಿಯನ್ನು ಪಡೆದ ಮೈಸೂರು ವಿದ್ಯಾರ್ಥಿಗಳು 

ತಾಂಡವಪುರ ಮೇ 25: ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಲಾ ಸ್ಕೂಲ್‌ ನಲ್ಲಿ ಆಯೋಜಿಸಲಾದ ಪ್ರತಿಷ್ಠಿತ 12ನೇ ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆ–2026ರಲ್ಲಿ ದ್ವಿತೀಯ ಸ್ಥಾನವನ್ನು ನಗರದ ವಿದ್ಯಾವಿಕಾಸ ಕಾನೂನು ಕಾಲೇಜು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ತಂಡದ ಜೆ.ಯಶವಂತ್ ಗೌಡ, ಎಂ.ಜೀವನ್‌, ಎನ್‌.ನಂಜುಂಡ ನಾಯಕ್, ತಂಡವು ಅತ್ಯುತ್ತಮ ಪ್ರದರ್ಶನ ನೀಡಿ ರನ್ನರ್ ಅಪ್ ಸ್ಥಾನವನ್ನು ಗಳಿಸಿದೆ. ಎಂ.ಜೀವನ್ ವಿದ್ಯಾರ್ಥಿ ತಮ್ಮ ಅತ್ಯುತ್ತಮ ವಕಾಲತ್ತು ಕೌಶಲ್ಯ ಹಾಗೂ ನ್ಯಾಯಾಲಯದ ಪ್ರಸ್ತುತಿಕರಣಕ್ಕಾಗಿ ಪ್ರತಿಷ್ಠಿತ “ಬೆಸ್ಟ್ ಜೆಂಟಲ್ಮನ್ ಅಡ್ವೋಕೇಟ್” ಪ್ರಶಸ್ತಿಯನ್ನು ಪಡೆದಿದ್ದಾರೆ.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಾ.ಸಿ.ಬಸವರಾಜು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಉಪಸ್ಥಿತರಿದ್ದರು. ಗೌರವ ಅತಿಥಿಯಾಗಿ ವಿಶಾಖಪಟ್ಟಣದ ಡಿಎಸ್‌ಎನ್‌ಎಲ್‌ಯೂ ಸಂಸ್ಥೆಯ ಕಾನೂನು ಸಹ ಪ್ರಾಧ್ಯಾಪಕ, ಐಪಿಆರ್ ಮತ್ತು ತಂತ್ರಜ್ಞಾನ ಕೇಂದ್ರದ ಅಧ್ಯಕ್ಷ ಡಾ.ಸಿ.ಪಿ.ದಯಾನಂದ ಮೂರ್ತಿ ಭಾಗವಹಿಸಿದ್ದರು

WhatsApp

Join Now

Telegram

Join Now

Instagram

Join Now