ಶಿಡ್ಲಘಟ್ಟ : ತಾಲ್ಲೂಕಿನ ಬಸವಾಪಟ್ಟಣ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.)ಅವರ ವಿಶೇಷ ತಂಡ ಗುಪ್ತ ಮಾಹಿತಿ ಸಂಗ್ರಹಿಸಿ ದಿಢೀರ್ ದಾಳಿ ನಡೆಸಿ,7 ಮಂದಿಯನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣದ ಬಳಿ ಜೂಜಾಟದ ಅಡ್ಡೆಯಲ್ಲಿ ಪಣಕ್ಕೆ ಇಟ್ಟಿದ್ದ 2,02,800 ರೂ.ಗಳ ನಗದು, 7ಮೊಬೈಲ್ ಫೋನ್ ಹಾಗೂ 3 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಿದ ಮಾಲನ್ನು ಮುಂದಿನ ಕ್ರಮಕ್ಕಾಗಿ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಲಾಗಿದೆ.
ಬಂಧಿತರನ್ನು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಮನೋಜ್ (27),ಬಸವಾಪಟ್ಟಣದ ನಿಖಿಲ್ (31) ,
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಕೆ.ದೇವರಾಜ್(43),ಚಿಂತಾಮಣಿ ತಾಲ್ಲೂಕಿನ ಕೊನಂಪಲ್ಲಿಯ ಕೆ.ಆರ್.ಮಂಜುನಾಥರೆಡ್ಡಿ(46),
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಗುಟ್ಟಹಳ್ಳಿಯ ಕೆ.ಎಂ. ಮುನಿಕೃಷ್ಣ (53), ಗುಡಿಬಂಡೆ ತಾಲ್ಲೂಕಿನ ದಿನ್ನಹಳ್ಳಿಯ ಶ್ರೀನಿವಾಸ (27), ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಗೋವಿಂದಪ್ಪ(65),ಎಂದು ಗುರುತಿಸಲಾಗಿದೆ.