ವಿಜಯ ದರ್ಪಣ ನ್ಯೂಸ್….
ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಎರಡನೇ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ

ಶಿಡ್ಲಘಟ್ಟ : ತಾಲ್ಲೂಕಿನ ಚೌಡಸಂದ್ರ ಗ್ರಾಮದಲ್ಲಿ ನೆಲೆಸಿ ಭಕ್ತಾದಿಗಳು ಬೇಡಿದ ಕಷ್ಟಗಳನ್ನು ಈಡೇರಿಸುತ್ತಿರುವ ವಿಜಯನಗರ ಕಾಲದ, ವ್ಯಾಸರಾಯರು ಪ್ರತಿಷ್ಟಾಪಿಸಿದ ಸುಪ್ರಸಿದ್ಧ ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಎರಡನೇ ಶ್ರಾವಣ ಶನಿವಾರ ಪ್ರಯುಕ್ತ ಮೂಲ ದೇವರ ವಿಗ್ರಹಕ್ಕೆ ಹೂವಿನ ಅಲಂಕಾರ ಹಾಗು ನೂತನ ದೇವರ ವಿಗ್ರಹಕ್ಕೆ ಶ್ರೀಗಂಧವನ್ನು ಬಳಸಿ ವಿಶೇಷ ಅಲಂಕಾರ ,ಮಹಾಮಂಗಳಾರತಿ, ತೀರ್ಥ,ಪ್ರಸಾದ ಸೇವೆಗಳು ನಡೆದವು,ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ಇಂದಿನ ಪೂಜಾಕಾರ್ಯಗಳನ್ನು ಕೈವಾರದವರ ಶ್ರೀಮತಿ ಪಿಳ್ಳಮ್ಮ ಹಾಗು ಹನುಮಂತರಾಯಪ್ಪ ಅವರ ಕುಟುಂಬದವರು ಚೌಡಸಂದ್ರ ಇವರಿಂದ ನಡೆಯಿತು.
ದೇವಾಲಯದ ಅರ್ಚಕರೋದ ವೇಣುಗೋಪಾಲಚಾರ್ ಹಾಗು ಶ್ಯಾಮ್ ಸುಂದರ್ ಅವರ ತಂಡ ಸ್ವಾಮಿಗೆ ಶ್ರೀ ಗಂಧದ ಮತ್ತು ಹೂವಿನ ಅಲಂಕಾರ ಮಾಡಿದ್ದು ಭಕ್ತಾದಿಗಳ ಮನತಣಿಸಿತು.










