--Ads--

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ

On: August 24, 2026 4:13 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವ

ಬೆಂಗಳೂರು : ‘ಕಲಿಯುಗದ ಕಾಮಧೇನು’ ಶ್ರೀ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವವು ವಿವಿಧ ಬಡಾವಣೆಗಳ ರಾಯರ ಮಠಗಳಲ್ಲಿ ಬೆಳಗಿನ ಪೂಜಾ ಕಾರ್ಯಕ್ರಮಗಳಲ್ಲಿ ಫಲ-ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನೆ ಮತ್ತು ರಥೋತ್ಸವಗಳು ಜರುಗುತ್ತವೆ.

ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಂಜೆ 6-30ಕ್ಕೆ 

ಜಯನಗರ 5ನೇ ಬ್ಲಾಕ್ : ಆಗಸ್ಟ್ 28-ಶ್ರೀಮತಿ ರಂಜಿತಾ ಪ್ರಸಾದ್ ಮತ್ತು ಸಂಗಡಿಗರಿಂದ “ದಾಸರ ಪದಗಳ ಗಾಯನ”, ಆಗಸ್ಟ್ 31-ನಾದಸ್ವಾದ ತಂಡದಿಂದ “ವಾದ್ಯ ಸಂಗೀತ”, ಸೆಪ್ಟೆಂಬರ್ 1-ಡಾ|| ರಾಯಚೂರು ಶೇಷಗಿರಿದಾಸ್ ಮತ್ತು ಸಂಗಡಿಗರಿಂದ “ಹರಿದಾಸವಾಣಿ”, ಆಗಸ್ಟ್2-‘ಕಲಾಭೂಷಿಣಿ’ ಡಾ|| ದರ್ಶಿನಿ ಮಂಜುನಾಥ್ ಅವರ ನಿರ್ದೇಶನದಲ್ಲಿ ನೃತ್ಯ ದಿಶಾ ಟ್ರಸ್ಟಿನ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”.
ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 45ನೇ ಅಡ್ಡರಸ್ತೆ, ಜಯನಗರ 5ನೇ ಬಡಾವಣೆ, ಬೆಂಗಳೂರು-560041

ಪ್ರಕಾಶನಗರ : ಆಗಸ್ಟ್ 26-ಶ್ರೀಮತಿ ಅಂಜನಾ ಪಿ. ರಾವ್ ಮತ್ತು ಸಂಗಡಿಗರಿಂದ “ದಾಸರ ಪದಗಳ ರಸಧಾರೆ”, ಆಗಸ್ಟ್ 27-ಶ್ರೀ ಮೈಸೂರು ರಾಮಚಂದ್ರಾಚಾರ್ ಮತ್ತು ಸಂಗಡಿಗರಿಂದ “ದಾಸವಾಣಿ”, ಆಗಸ್ಟ್ 28-ಶ್ರೀಮದಾನಂದತೀರ್ಥ, ಕು|| ಅವನಿ ಭಟ್ ಮತ್ತು ಸಂಗಡಿಗರಿಂದ “ವೇಣು ಗಾನ ತರಂಗ ಲಹರಿ”, ಆಗಸ್ಟ್ 29-ಶ್ರೀ ರಜತ್ ಕುಲಕರ್ಣಿ ಮತ್ತು ಸಂಗಡಿಗರಿಂದ “ದಾಸ ನಮನ”, ಆಗಸ್ಟ್ 30-ಶ್ರೀ ಪ್ರಸನ್ನ ಕೊರ್ತಿ ಮತ್ತು ಸಂಗಡಿಗರಿಂದ “ಹರಿನಾಮ ಸಂಕೀರ್ತನೆ”, ಆಗಸ್ಟ್ 31-ಶ್ರೀಮತಿ ನಂದಿನಿ ಗುಜಾರ್ ಮತ್ತು ಸಂಗಡಿಗರಿಂದ “ಹರಿದಾಸ ಮಂಜರಿ”. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು-560021

ಶೇಷಾದ್ರಿಪುರಂ : ಆಗಸ್ಟ್ 29-ಲಕ್ಷ್ಮೀ-ರಾಧಾಕೃಷ್ಣ ಇವರಿಂದ “ಭರತನಾಟ್ಯ”, ಅರ್ಪಿತಾ ಸೂರಜ್ ಇವರಿಂದ “ದೇವರನಾಮ”, ಆಗಸ್ಟ್ 30-ಡಾ|| ಚೇತನಾ ಉಪಾಧ್ಯಾಯ ಇವರಿಂದ “ವೀಣಾವಾದನ”, ಆಗಸ್ಟ್ 31-ಶ್ರೀಮತಿ ಮಾನಸಾ ಇವರಿಂದ “ದಾಸ ನಮನ”. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪ್ಲಾಟ್ ಫಾರ್ಮ್ ರಸ್ತೆ, ಮಂತ್ರಿ ಮಾಲ್ ಮೆಟ್ರೋ ಸ್ಟೇಷನ್ ಎದುರು, ಶೇಷಾದ್ರಿಪುರಂ, ಬೆಂಗಳೂರು-560020

ಸುಬ್ರಹ್ಮಣ್ಯನಗರ : ಆಗಸ್ಟ್ 29-ಶ್ರೀಕೃಷ್ಣ ವಾದಿರಾಜ (ಪುರುಷರ) ಭಜನಾ ಮಂಡಳಿಯ ಸದಸ್ಯರಿಂದ “ಭಜನೆ”, ಆಗಸ್ಟ್ 30-ಗುರುಸಾರ್ವಭೌಮರ ಭಕ್ತರ ಸಂಘದ ಸದಸ್ಯರಿಂದ “ತಾರತಮ್ಯ ಭಜನಾಮೃತ”, ಆಗಸ್ಟ್ 31-ಪದ್ಮಿನಿ ವಾಸುದೇವ್, ರಂಜಿನಿ ಹರಿಪ್ರಸಾದ್, ಮಾಧುರಿ ಅರುಣ್ ಇವರಿಂದ “ದಾಸವಾಣಿ” ಕಾರ್ಯಕ್ರಮ. ಸ್ಥಳ : ಶ್ರೀ ವ್ಯಾಸರಾಜ ಮಠ (ಸೋಸಲೆ), 5ನೇ ಮುಖ್ಯರಸ್ತೆ, ‘ಎ’ ಬ್ಲಾಕ್, ರಾಜಾಜಿನಗರ 2ನೇ ಹಂತ, ಬೆಂಗಳೂರು-560010

ಹೊಸಕೆರೆಹಳ್ಳಿ : ಆಗಸ್ಟ್ 29-ಶ್ರೀ ಮೋಹನ್ ಎಸ್. ನಿಲಗಲ್ “ದಾಸವಾಣಿ” ನಂತರ ಶ್ರೀ ಬಿ.ಕೆ. ಅನಂತರಾಮ್ ಮತ್ತು ಸಂಗಡಿಗರಿಂದ “ತಾಳವಾದ್ಯ ಕಚೇರಿ”, ಆಗಸ್ಟ್ 30-ಕು|| ಸಹನಾ ಮತ್ತು ಕು|| ಸಾನ್ವಿ ಇವರಿಂದ “ದಾಸವಾಣಿ” ನಂತರ ಶ್ರೀಮತಿ ಅನುಕೃಪ ಪುರೋಹಿತ್ ಮತ್ತು ಸಂಗಡಿಗರಿಂದ “ಹರಿದಾಸ ವೈಭವ”, ಆಗಸ್ಟ್ 31-ಶ್ರೀ ಕುಮಾರ್ ಭಟ್ ಇವರಿಂದ “ದಾಸವಾಣಿ” ನಂತರ ತತ್ಪರ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ” ಗುರುಗಳು : ಸಮುದ್ಯತಾ ಭಟ್. ಸೆಪ್ಟೆಂಬರ್ 1-ಮೋಹನಕೃಷ್ಣ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ “ದೇವರನಾಮ” ನಂತರ ಸ್ವರಾರ್ಚನೆ ತಂಡದವರಿಂದ “ದಾಸರ ಪದಗಳ ಗಾಯನ”. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಬನಶಂಕರಿ 3ನೇ ಘಟ್ಟ, 2ನೇ ಹಂತ, ಹೊಸಕೆರೆಹಳ್ಳಿ, ಬೆಂಗಳೂರು-560085

ಜಯನಗರ 4ನೇ ‘ಟಿ’ ಬಡಾವಣೆ : ಆಗಸ್ಟ್ 29- ಡಾ|| ಮೀನಾ ಗಣಪತಿ ಮತ್ತು ಸಂಗಡಿಗರಿಂದ 5-30ಕ್ಕೆ “ದಾಸವಾಣಿ”, ನಂತರ ಶ್ರೀಮತಿ ಕಾವ್ಯ, ಶ್ರೀ ನಿಶ್ಚಯ್ ವಿಶ್ವಸೇನ ಮತ್ತು ಸಂಗಡಿಗರಿಂದ 7-30ಕ್ಕೆ “ದಾಸವಾಣಿ”. ಆಗಸ್ಟ್ 30-ಅಂಜನಾ ಪಿ. ರಾವ್ ಮತ್ತು ಸಂಗಡಿಗರಿಂದ 5-30ಕ್ಕೆ “ದಾಸವಾಣಿ” ಹಾಗೂ ತನು ದೇಶಪಾಂಡೆ ಮತ್ತು ಸಂಗಡಿಗರಿಂದ 7-30ಕ್ಕೆ “ದಾಸವಾಣಿ”, ಆಗಸ್ಟ್ 31-ಶ್ರೀ ರಾವ್ ಆರ್ ಶರತ್ ಮತ್ತು ಸಂಗಡಿಗರಿಂದ “ದಾಸವಾಣಿ” ಹಾಗೂ ಶ್ರೀಮತಿ ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರಿಂದ 7-30ಕ್ಕೆ “ದಾಸವಾಣಿ”. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 13ನೇ ಮುಖ್ಯರಸ್ತೆ, 4ನೇ ಟಿ ಬ್ಲಾಕ್, ಜಯನಗರ, ಬೆಂಗಳೂರು-560041

ರಾಜಾಜಿನಗರ : ಆಗಸ್ಟ್ 29-ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಸಂಗಡಿಗರಿಂದ “ದಾಸರ ಪದಗಳ ರಸಧಾರೆ”, ಆಗಸ್ಟ್ 30-ಶ್ರೀ ಕೆ.ಪಿ. ಶಿಶಿರ್ ಮತ್ತು ಸಂಗಡಿಗರಿಂದ “ದಾಸ ನಮನ”, ಆಗಸ್ಟ್ 31-ಶ್ರೀಮತಿ ರೂಪಾ, ಶ್ರೀಮತಿ ದೀಪಾ ಮತ್ತು ಸಂಗಡಿಗರಿಂದ “ದಾಸಲಹರಿ”. ಸ್ಥಳ : ಶ್ರೀ ವಿಠಲ ಮಂದಿರ, 45ನೇ ಅಡ್ಡರಸ್ತೆ (ಸಿಂಡಿಕೇಟ್ ಬ್ಯಾಂಕ್ ಹತ್ತಿರ), 3ನೇ ವಿಭಾಗ, ರಾಜಾಜಿನಗರ, ಬೆಂಗಳೂರು-560010

ತ್ಯಾಗರಾಜನಗರ : ಆಗಸ್ಟ್ 28-ಶ್ರೀ ಲಕ್ಷ್ಮಣರಾವ್ ಮತ್ತು ಸಂಗಡಿಗರಿಂದ “ವೀಣಾ ವಾದನ”, ಆಗಸ್ಟ್ 29-ಶ್ರೀ ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ವಾದನ”, ಆಗಸ್ಟ್ 30-ಶ್ರೀ ಅನಂತರಾಜ್ ಮಿಸ್ತ್ರಿ ಮತ್ತು ಸಂಗಡಿಗರಿಂದ “ದಾಸವಾಣಿ”, ಆಗಸ್ಟ್ 31-ಶ್ರೀ ಅನಂತ ಕುಲಕರ್ಣಿ ಮತ್ತು ಸಂಗಡಿಗರಿಂದ “ದಾಸವಾಣಿ”. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಅಡ್ಡರಸ್ತೆ, ತ್ಯಾಗರಾಜನಗರ, ಬೆಂಗಳೂರು-28

ಮಲ್ಲೇಶ್ವರಂ (ಫಲಿಮಾರು ಮಠ) : ಸಮಯ : ಪ್ರತಿದಿನ 5 ರಿಂದ 7 : ಆಗಸ್ಟ್ 29-ಕು|| ಪ್ರಮತಿ, ಕು|| ಶ್ರೇಯಾ ಮತ್ತು ಶ್ರೀಮತಿ ನೃತ್ಯಶ್ರೀ ಇವರಿಂದ “ಭರತನಾಟ್ಯ ಪ್ರದರ್ಶನ”, ಆಗಸ್ಟ್ 30-ಶ್ರೀ ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ವಾದನ”, ಆಗಸ್ಟ್ 31-ಶ್ರೀಮತಿ ಗಾಯತ್ರಿ ಶ್ರೀಧರ್ ಮತ್ತು ಸಂಗಡಿಗರಿಂದ “ದಾಸವಾಣಿ”. ಸ್ಥಳ : ಉಡುಪಿ ಫಲಿಮಾರು ಮಠ, ಸಂಪಿಗೆ ರಸ್ತೆ, ಗ್ಯಾರಂಟಿ ಟಿವಿ ಚಾನೆಲ್ ಎದುರು, ಸಂಪಿಗೆ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003

ಪವಮಾನಪುರ : ಆಗಸ್ಟ್ 29-ನೃತ್ಯಾಂಜಲಿ ಕಲಾ ನಿಕೇತನ ವೃಂದದವರಿಂದ “ಭರತನಾಟ್ಯ ಪ್ರದರ್ಶನ”, 30-ವೇಣು ವೃಂದದವರಿಂದ “ಕೊಳಲು ವಾದನ” ನಂತರ ಶ್ರೀ ಭರತಾಂಜಲಿ ನಾಟ್ಯ ಶಾಲೆಯ ವಿದ್ಯಾರ್ಥಿಗಳಿಂದ “ಭರತನಾಟ್ಯ ಪ್ರದರ್ಶನ”. ನಿರ್ದೇಶನ ; ಶ್ರೀಮತಿ ಸೀತಾ ಗುರುಪ್ರಸಾದ್, ಆಗಸ್ಟ್ 31-ಶ್ರೀ ಶ್ರೀನಿಧಿ ಆಚಾರ್ ಮತ್ತು ಸಂಗಡಿಗರಿಂದ “ಗಾಯನ” ನಂತರ ನಾಟ್ಯಶ್ರೀ ವೃಂದದವರಿಂದ “ನೃತ್ಯ ಪ್ರದರ್ಶನ”. ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಪವಮಾನಪುರ, ಬನಶಂಕರಿ 6ನೇ ಹಂತ, ಬೆಂಗಳೂರು-560106

ಸುಧೀಂದ್ರನಗರ : ಆಗಸ್ಟ್ 27 ರಿಂದ ಸೆಪ್ಟೆಂಬರ್ 1ರ ವರೆಗೆ ಕ್ರಮವಾಗಿ ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಶ್ರೀ ವೆಂಕಟ ನರಸಿಂಹಾಚಾರ್, ಶ್ರೀ ಮರುತಾಚಾರ್, ಶ್ರೀ ಮಾಳಗಿ ಆನಂದತೀರ್ಥಾಚಾರ್, ಶ್ರೀ ದ್ವೈಪಾಯನಾಚಾರ್ ಮತ್ತು ಶ್ರೀ ಕಲ್ಯಾ ಶ್ರೀಕಾಂತಾಚಾರ್ ಇವರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಬಗ್ಗೆ ಪ್ರವಚನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಸುಧೀಂದ್ರನಗರ, ಬೆಂಗಳೂರು-560003

ವಿದ್ಯಾರಣ್ಯಪುರ : ಶ್ರೀ ಮಾತಾಜಿ ಅಲಸೂರಮ್ಮ ರಾಘವೇಂದ್ರ ಸೇವಾ ಟ್ರಸ್ಟ್ ; ಆಗಸ್ಟ್ 29- ಭಾರತೀಯ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ “ಕರ್ನಾಟಕ ಶಾಸ್ತ್ರೀಯ ಸಂಗೀತ”, ಆಗಸ್ಟ್ 30-ಕು|| ಧೃತಿ, ಕು|| ಧನ್ವಿ (ಆತ್ರೇಯ ಸಿಸ್ಟರ್ಸ್) ಮತ್ತು ಸಂಗಡಿಗರಿಂದ “ಗಾಯನ ಮತ್ತು ನೃತ್ಯ”, ಆಗಸ್ಟ್ 31-ನೃತ್ಯೋದಯ ಅಕಾಡೆಮಿಯ ಶ್ರೀಮತಿ ದಿವ್ಯಶ್ರೀ ಎಸ್. ವಟಿ ಮತ್ತು ವಿದ್ಯಾರ್ಥಿಗಳಿಂದ “ಸಂಕ್ಷಿಪ್ತ ರಾಮಾಯಣ” ನೃತ್ಯ ಪ್ರದರ್ಶನ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, 3ನೇ ಬ್ಲಾಕ್, ಬಿಇಎಲ್ ಬಡಾವಣೆ, ವಿದ್ಯಾರಣ್ಯಪುರ, ಬೆಂಗಳೂರು-560097

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ವೈದ್ಯರ ದಿನಾಚರಣೆ, ಸಾಧಕ ವೈದ್ಯರುಗಳಿಗೆ ಸನ್ಮಾನ-ವಿಸಿಎನ್ ಡಾಕ್ಟರ್ಸ್ ಅಸೋಸಿಯೇಷನ್

ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜಯಂತಿ ಕಾರ್ಯಕ್ರಮದಲ್ಲಿ  ಸಚಿವರಿಂದ  ನಮನಗಳು 

ಸಿಎಂ ಡಿ.ಕೆ.ಶಿವಕುಮಾರ್ ಅವರಿಂದ KEO AI PC – 2026 ಲೋಕಾರ್ಪಣೆ

ವರಮಹಾಲಕ್ಷ್ಮಿ ವ್ರತ : ಭಕ್ತಿ ಸಂಸ್ಕೃತಿ ಮತ್ತು ಸನಾತನ ಪರಂಪರೆಯ ಮಹೋತ್ಸವ

ವಿಕಾಸ ಸೌಧದಲ್ಲಿ  ನಡೆದ ಕೆ ಆರ್ ಎಸ್ ಜಲಾಶಯದ ನೀರಾವರಿ ಸಲಹಾ ಸಮಿತಿಯ ಸಭೆ 

ಅಪೋಲೋ ಹಾಸ್ಪಿಟಲ್ಸ್‌ ನಿಂದ ‘ಆಲ್ವೇಸ್ ಓಪನ್. ಆಲ್ವೇಸ್ ಹಿಯರ್’ ಭಾರತದಿಂದ ಜಾಗತಿಕ ಆರೋಗ್ಯಸೇವೆಯಲ್ಲಿ ಪ್ರಥಮ ಉಪಕ್ರಮ ಅಪೋಲೋ ಹಾಸ್ಪಿಟಲ್ಸ್‌ ಗಳಾದ್ಯಂತ ಭಾನುವಾರದಂದೂ ವೈದ್ಯಕೀಯ ಸಮಾಲೋಚನೆಗಳು, ರೋಗನಿರ್ಣಯ ಪರೀಕ್ಷೆಗಳು, ರೋಗತಡೆಯ ಆರೋಗ್ಯ ತಪಾಸಣೆಗಳು ಮತ್ತು ನಿಗದಿತ ಚಿಕಿತ್ಸಾ ಸೇವೆಗಳನ್ನು ವಿಸ್ತರಿಸುವ ತನ್ನ ಮೊದಲ ಉಪಕ್ರಮ ಪ್ರಾರಂಭಿಸಿದೆ