ಕನ್ನಡಿಗರು ವಿದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಿ ನೆಲೆ ಟ್ರಸ್ಟಿನ ನಿಯೋಗ ಮನವಿ
ವಿಜಯ ದರ್ಪಣ ನ್ಯೂಸ್
ಕನ್ನಡಿಗರು ವಿದೇಶದಲ್ಲಿ ಉತ್ತಮ ವಿದ್ಯಾಭ್ಯಾಸ ಪಡೆದುಕೊಳ್ಳಲು ಅನುಕೂಲ ಮಾಡಿಕೊಡಿ ನೆಲೆ ಟ್ರಸ್ಟಿನ ನಿಯೋಗ ಮನವಿ
ತಾಂಡವಪುರ ಮೇ 27 ಕರ್ನಾಟಕದ ಕನ್ನಡಿಗರು ವಿದೇಶದಲ್ಲಿ ಉತ್ತಮ ವ್ಯಾಸಂಗ ವಿದ್ಯಾಭ್ಯಾಸ ಪಡೆದುಕೊಳ್ಳಲು ಅವರಿಗೆ ಕನ್ನಡಕದಿಂದ ಒಳ್ಳೆಯ ಅವಕಾಶ ಮಾಡಿಕೊಡಿ ಎಂದು ರವಿ ಮಹಾದೇವ ನೇತೃತ್ವದಲ್ಲಿ ನೆಲೆ ಟ್ರಸ್ಟ್ ನಿಯೋಗ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು
ನೆಲೆ ಟ್ರಸ್ಟಿನ ರವಿ ಮಹದೇವ ಅವರ ನೇತೃತ್ವದಲ್ಲಿ ನಿಯೋಗವು ಬೆಂಗಳೂರಿನ ಅನಿವಾಸಿ ಭಾರತೀಯರ ಕೋಶದ ಉಪಾಧ್ಯಕ್ಷ ಡಾ. ಆರತಿ ಕೃಷ್ಣ ರವರನ್ನು ಭೇಟಿಯಾಗಿ ಈ ಬಗ್ಗೆ ಹಲವು ಒತ್ತುಗಳ ಕಾಲ ಮಾತುಕತೆ ನಡೆಸಿ ಚರ್ಚೆ ಮಾಡಿ ಕನ್ನಡಿಗರಿಗೆ ಯಾವುದೇ ರೀತಿಯನ್ನು ತೊಂದರೆಯಾಗದಂತೆ ಅನುಕುಲ ಮಾಡಿಕೊಡಿ ಎಂದು ಮನವಿ ಮಾಡಿದರು ವಿಕಾಸ ಸೌಧದಲ್ಲಿ ಭೇಟಿಮಾಡಿ ವಿದೇಶಕ್ಕೆ ವೃತ್ತಿ / ಉನ್ನತ ವ್ಯಾಸಂಗಕ್ಕೆ ತೆರಳುವ ಕನ್ನಡಿಗರಿಗೆ ಎನ್ ಆರ್ ಐ ಫೋರಂ ಕರ್ನಾಟಕದ ವತಿಯಿಂದ ದಾಖಲೆ ಪತ್ರಗಳ ಧೃಡೀಕರಣ ಸೇವೆಯನ್ನು ಪ್ರಾರಂಭಿಸಲು ಮನವಿ ಮಾಡಲಾಯಿತು.
ಈ ಕುರಿತು ಪ್ರಸ್ತಾಪ ಸಲ್ಲಿಸಲು ತಿಳಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು ಈ ಸಂದರ್ಭದಲ್ಲಿ ನೆಲೆ ಟ್ರಸ್ಟಿನ ಎಲ್ಲ ಸದಸ್ಯರು ಮುಂತಾದವರು ಹಾಜರಿದ್ದರು