ಮಹಿಳೆಯರಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಹೊಲಿಗೆ ಯಂತ್ರ ವಿತರಣೆ

ವಿಜಯ ದರ್ಪಣ ನ್ಯೂಸ್…..

ಮಹಿಳೆಯರಿಗೆ ಶಾಸಕ ದರ್ಶನ್ ಧ್ರುವ ನಾರಾಯಣ್ ಹೊಲಿಗೆ ಯಂತ್ರ ವಿತರಣೆ

ತಾಂಡವಪುರ ಫೆಬ್ರವರಿ 23 ನಂಜನಗೂಡು ವಿಧಾನಸಭಾ ಕ್ಷೇತ್ರಸಿರುವ ಎ.ಪಿ.ಎಂ.ಸಿ ಆವರಣದ ಪ್ರೋ ನಂಜುಂಡಸ್ವಾಮಿ ಸಭಾಂಗಣದಲ್ಲಿ 2024-25 ನೇ ಸಾಲಿನಲ್ಲಿ ಶ್ರೀ ಡಿ ದೇವರಾಜ ಅರಸು ರವರ ಅಭಿವೃದ್ಧಿ ನಿಗಮದಲ್ಲಿ ಹೊಲಿಗೆ ಯಂತ್ರ ಯೋಜನೆ ಅಡಿ ಆಯ್ಕೆಯಾದ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳನ್ನು ಶಾಸಕ ದರ್ಶನ್ ಧ್ರುವ ನಾರಾಯಣ ವಿತರಣೆ ಮಾಡಿದರು

ನಂತರ ಮಾತನಾಡಿ ಸರ್ಕಾರ ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ತಂದಿದ್ದಾರೆ ಇದನ್ನು ಸದುಪಯೋಗ ಪಡಿಸಿಕೊಳ್ಳಿ ಅದರಲ್ಲಿ ಒಂದು ಹೊಲಿಗೆ ಯಂತ್ರ ವಿತರಣೆ ಅಧಿಕಾರಿಗಳು ಕೂಡ ಸರ್ಕಾರದಿಂದ ಬಂದಂತ ಯೋಜನೆಗಳನ್ನು ತಲುಪಿಸುವಂತಹ ಕೆಲಸ ಮಾಡಬೇಕು

ಇದರಿಂದ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ ಇದರಿಂದ ಕುಟುಂಬ ನಿರ್ವಹಣೆಗೆ ಹೆಚ್ಚು ಅನುಕೂಲವಾಗುತ್ತದೆ ಯಾರ ಮೇಲೆ ಹೆಚ್ಚು ಅವಲಂಬನೆ ಆಗದಂತೆ ಇರಬಹುದು ಎಂದರು ಅಲ್ಲದೆ ಈ ಸರ್ಕಾರದ ಯೋಜನೆಗಳನ್ನು ಮಹಿಳೆಯರು ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಮುಂದೆ ಬನ್ನಿ ಎಂದು ಹೇಳಿದರು

ಈ ವೇಳೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ , ನಗರ ಬ್ಲಾಕ್ ಅಧ್ಯಕ್ಷ ಸಿ. ಎಂ ಶಂಕರ್ ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ರವರು, ಶ್ರೀಧರ್ , ಗಾಯತ್ರಿ ಮೋಹನ್ , ಜೈ ರಾಮ್ ಸೇರಿದಂತೆ ಫಲಾನುಭವಿಗಳು ಹಾಜರಿದ್ದರು.