ವಿಜಯ ದರ್ಪಣ ನ್ಯೂಸ್….
ಶ್ರೀ ಮಹಾ ತಪಸ್ವಿ ಫೌಂಡೇಶನ್ ವತಿಯಿಂದ ಶಿವ ಪಂಚಾಕ್ಷರಿ ಮಹಾ ಮಂತ್ರ ಪುಸ್ತಕ ವಿತರಣೆ

ಬೆಂಗಳೂರು: ಶ್ರೀ ಮಹಾ ತಪಸ್ವಿ ಫೌಂಡೇಶನ್ (ರಿ), ಹರಿಹರ”ಬೆಂಗಳೂರು ಶಾಖೆಯ ವತಿಯಿಂದ ಫೌಂಡೇಶನ್ನಿನ ಸಂಸ್ಥಾಪಕ ಅಧ್ಯಕ್ಷ ಪರಮಪೂಜ್ಯ ಅವಧೂತ ಕವಿ ಗುರುರಾಜ ಗುರೂಜಿಯವರ ಆಶೀರ್ವಾದ ಮತ್ತು ಮಾರ್ಗದರ್ಶನದೊಂದಿಗೆ
“ಶಿವ ಪಂಚಾಕ್ಷರಿ ಲಿಖಿತ ಮಹಾ ಜಪ ಯಜ್ಞ” ವನ್ನು
ಪ್ರತಿ ತಿಂಗಳಲ್ಲಿ,ಸೋಮವಾರ ಪ್ರಸಿದ್ಧ ಶಿವನ ದೇವಾಲಯದ ಆವರಣದಲ್ಲಿ
ಆಚರಿಸಲಾಗುತ್ತಿದೆ.

ಅದರಂತೆ ಈ ಬಾರಿ ಬೆಂಗಳೂರು ಶಾಖೆಯ ಅಧಿಕಾರಿಗಳು ಹಾಗೂ ಸಹ ನಿರ್ದೇಶಕರು
ಶ್ರೀ ಸೋಮೇಶ್ವರ ದೇವಸ್ಥಾನದ(ಹಳೆ ಮಡಿವಾಳ,ಬಿಟಿಎಂ)ಆವರಣದಲ್ಲಿ ಆಗಮಿಸಿದ ಭಕ್ತಾಧಿಗಳಿಗೆ ಪಂಚಾಕ್ಷರಿ ಮಹಾ ಮಂತ್ರ ಬರೆಯುವ ಪವಿತ್ರ ಪುಸ್ತಕವನ್ನು ಉಚಿತವಾಗಿ ವಿತರಿಸಿದರು.

ಸಂಸ್ಥೆಯ ಗುರಿ 1 ಕೋಟಿ ಶಿವ ಪಂಚಾಕ್ಷರಿ ಮಂತ್ರದ ಪುಸ್ತಕ ವಿತರಣೆ.ಆ ನಿಟ್ಟಿನಲ್ಲಿ ಪ್ರತಿ ತಿಂಗಳಲ್ಲಿ
ಸಂಸ್ಥೆಯ ಎಲ್ಲಾ ಶಾಖೆಗಳಲ್ಲಿ ಈ ಅಭಿಯಾನವನ್ನು ನಡೆಸಲಾಗುವುದು ಎಂದು ಸಂಸ್ಥೆಯು ಧೃಢಪಡಿಸಿದೆ.










