--Ads--

ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ: “ಸ್ಥಳಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ – ‘ನಿಮ್ಮ ಬೇಡಿಕೆ ಶೀಘ್ರ ಪರಿಹರಿಸುವ ಭರವಸೆ’

On: August 16, 2026 3:20 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ : “ಸ್ಥಳಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ – ‘ನಿಮ್ಮ ಬೇಡಿಕೆ ಶೀಘ್ರ ಪರಿಹರಿಸುವ ಭರವಸೆ'”

ಮಂಡ್ಯ, ಆಗಸ್ಟ್ 15,
80ನೇ ಸ್ವಾತಂತ್ರ್ಯ ದಿನದಂದೇ *ರಾಜ್ಯ ರೈತ ಸಂಘ*ದ ನೇತೃತ್ವದಲ್ಲಿ ರೈತರು ಮಂಡ್ಯದ *ಸಂಜಯ್ ವೃತ್ತದಲ್ಲಿ* ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರ ಮತ್ತು ನೀರಾವರಿ ಇಲಾಖೆ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಪ್ರಮುಖ ಬೇಡಿಕೆಗಳು

ನಾಲೆಗಳಿಗೆ ನೀರು ಬಿಡುಗಡೆ, ಬರ ಪರಿಹಾರ, ರಸಗೊಬ್ಬರ ಪೂರೈಕೆ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಮುಂದಿಟ್ಟರು, ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡಲಾಗುತ್ತಿದೆ* ಎಂದು ಆಕ್ರೋಶ ವ್ಯಕ್ತಪಡಿಸಿದರು. “ನಮ್ಮಲ್ಲೇ ಕುಡಿಯುವ ನೀರಿನ ಕೊರತೆ ಇದೆ. ಆದರೂ ಸರ್ಕಾರ ತಮಿಳುನಾಡಿನ ಪರವಾಗಿ ನಿಂತಿದೆ” ಎಂದು ಘೋಷಣೆ ಕೂಗಿದರು.

ಸಚಿವರ ಭೇಟಿ ಮತ್ತು ಮನವಿ ಸ್ವೀಕಾರ

ಪ್ರತಿಭಟನಾ ಸ್ಥಳಕ್ಕೆ ಬೃಹತ್ ಮತ್ತು ಮಧ್ಯಮ ಜಲಸಂಪನ್ಮೂಲ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ* ಅವರು ಭೇಟಿ ನೀಡಿ ರೈತರ ಮನವಿಯನ್ನು ಸ್ವೀಕರಿಸಿದರು.

“ರೈತರ ಪರ ನಮ್ಮ ಸರ್ಕಾರ” – ಸಚಿವ

ಈ ವೇಳೆ ಮಾತನಾಡಿದ ಸಚಿವರು, “ಹಲವು ಸಮಸ್ಯೆ ಇಟ್ಟುಕೊಂಡು ಮಂಡ್ಯದಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಆದರೆ ನಮ್ಮ ಸರ್ಕಾರ ನಿರಂತರವಾಗಿ ರೈತರ ಪರ ಯೋಜನೆಗಳನ್ನು ಕೊಟ್ಟಿದೆ. ಹೇಮಾವತಿ ಅಚ್ಚುಕಟ್ಟಿಗೆ ನೀರು ಬಿಡುಗಡೆಗೆ ನೀವು ಮನವಿ ಮಾಡಿದ್ದೀರಿ. ನಿಮ್ಮೆಲ್ಲಾ ಬೇಡಿಕೆಗಳನ್ನು ಶೀಘ್ರವಾಗಿ ಬಗೆಹರಿಸುತ್ತೇವೆ” ಎಂದು ಭರವಸೆ ನೀಡಿದರು.

“ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ರೈತರ ಪರವಾಗಿದ್ದಾರೆ. ಕೇಂದ್ರ ಸರ್ಕಾರ ಕೊಡದಿದ್ದರೂ ನಮ್ಮ ರಾಜ್ಯ ಸರ್ಕಾರದಿಂದಲೇ ಬರ ಪರಿಹಾರ ಕೊಟ್ಟಿದ್ದೇವೆ. ಕಳೆದ ಬಾರಿ NDRF ಗಿಂತ ಹೆಚ್ಚು ಪರಿಹಾರ ನೀಡಲಾಗಿದೆ. ICC ಸಭೆ ನಡೆಸಿ ನಾಲೆಗಳಿಗೆ ನೀರು ಬಿಡುವ ಬಗ್ಗೆ ತೀರ್ಮಾನ ಮಾಡಲಾಗುವುದು. ಸಿಎಂ ಡಿಕೆಶಿ ಮತ್ತು ನಾನು ಇಬ್ಬರೂ ರೈತರ ಜೊತೆ ಇದ್ದೇವೆ. ರೈತರು ಯಾವುದೇ ಸಮಸ್ಯೆಗೆ ಆತಂಕ ಪಡುವ ಅವಶ್ಯಕತೆ ಇಲ್ಲ” ಎಂದು ತಿಳಿಸಿದರು.

ಬರ ಘೋಷಣೆ ಬಗ್ಗೆ ಸ್ಪಷ್ಟನೆ

ಬರ ಘೋಷಣೆ ಮಾಡುವಂತೆ ರೈತರು ಪಟ್ಟು ಹಿಡಿದಾಗ ಪ್ರತಿಕ್ರಿಸಿದ ಸಚಿವರು, “ಬರ ಘೋಷಣೆ ಮಾಡಲು ಗೈಡ್‌ಲೈನ್ಸ್ ಇದೆ. ಈಗಾಗಲೇ ಒಂದು ರಿಪೋರ್ಟ್ ಕೇಂದ್ರಕ್ಕೆ ಕಳಿಸಿದ್ದೇವೆ. ಆಗಸ್ಟ್ ತಿಂಗಳ ಕೊನೆಯವರೆಗೂ ಮುಂಗಾರು ಅವಧಿ ಇದೆ. ಕೇಂದ್ರಕ್ಕೆ ರಿಪೋರ್ಟ್ ಕಳಿಸಿದ್ದೇವೆ. ರೈತರು ಆತಂಕ ಪಡಬೇಡಿ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರವಿಕುಮಾರ್ ಗಣಿಗ ಜಿಲ್ಲಾಧಿಕಾರಿ ಡಾ. ಕುಮಾರ್, ಜಿ.ಪಂ. ಸಿಇಓ ನಂದಿನಿ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು.

ಸಚಿವರ ಜೊತೆ ಮಾತುಕತೆ ನಡೆದ ಬಳಿಕ ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

WhatsApp

Join Now

Telegram

Join Now

Instagram

Join Now