ವಿಜಯ ದರ್ಪಣ ನ್ಯೂಸ್…..
CSIR-CFTRI, ಮೈಸೂರಿಗೆ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ತಂಡಭೇಟಿ

ತಾಂಡವಪುರ ಆಗಸ್ಟ್ 25 ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ಗೌರವಾನ್ವಿತ ರಾಜ್ಯಸಭಾ ಸದಸ್ಯರಾದ ಡಾ. ಮೇಧಾ ವಿಶ್ರಾಮ್ ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ 24 ಆಗಸ್ಟ್ 2026ರಂದು CSIR-CFTRI, ಮೈಸೂರಿಗೆ ಅಧ್ಯಯನ ತಂಡ ಭೇಟಿ ನೀಡಿತು.
ಈ ನಿಯೋಗದಲ್ಲಿ ಹಲವಾರು ಸಂಸದರು, ರಾಜ್ಯಸಭಾ ಸಚಿವಾಲಯದ ಅಧಿಕಾರಿಗಳು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆ (DSIR) ಅಧಿಕಾರಿಗಳು ಹಾಗೂ CSIR ಅಧಿಕಾರಿಗಳು ಉಪಸ್ಥಿತರಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,
ಭೇಟಿಯ ಸಂದರ್ಭದಲ್ಲಿ ಸಮಿತಿಯು “ ಸೇರಿದಂತೆ ಸಿರಿಧಾನ್ಯಗಳ ಶ್ರೇಷ್ಠತಾ ಕೇಂದ್ರ (Centre of Excellence on Millets)”ಕ್ಕೆ ಭೇಟಿ ನೀಡಿತು. ಇಲ್ಲಿ ಸಿರಿಧಾನ್ಯಗಳ ಸ್ವಚ್ಛತೆ ಮತ್ತು ಸಂಸ್ಕರಣೆಯಿಂದ ಹಿಡಿದು ಪ್ಯಾಕೇಜಿಂಗ್ವರೆಗೆ ವಿವಿಧ ಹಂತಗಳನ್ನು ಒಳಗೊಂಡ ನೇರ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು. ನಂತರ CSIR-CFTRIಯ ಪ್ರಮುಖ ಚಟುವಟಿಕೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವೀಡಿಯೊ ಪ್ರದರ್ಶನ ನಡೆಯಿತು. ಇದಾದ ಬಳಿಕ ಸಮಿತಿ ಸದಸ್ಯರೊಂದಿಗೆ ಸಂವಾದಾತ್ಮಕ ಅಧಿವೇಶನವನ್ನು ಆಯೋಜಿಸಲಾಯಿತು.
CSIR-CFTRIಯ ನಿರ್ದೇಶಕರಾದ ಡಾ. ಗಿರಿಧರ್ ಪರ್ವತಮ್ ಅವರು ಸಂಸ್ಥೆಯ ಪ್ರಮುಖ ಚಟುವಟಿಕೆಗಳ ಸಮಗ್ರ ಅವಲೋಕನವನ್ನು ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಾಮಾಜಿಕ ಬದ್ಧತೆ ಮತ್ತು ಜನಸಂಪರ್ಕ ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಹಯೋಗಗಳು, ತಂತ್ರಜ್ಞಾನ ಅಭಿವೃದ್ಧಿ ಮತ್ತು ವರ್ಗಾವಣೆ, ಸಾಮರ್ಥ್ಯ ನಿರ್ಮಾಣ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಶೇಷ ಒತ್ತು ನೀಡಲಾಯಿತು.
ಸಮಿತಿಗಾಗಿ CSIR-CFTRIಯ ತಂತ್ರಜ್ಞಾನಗಳು, ಉತ್ಪನ್ನಗಳು ಮತ್ತು ನವೀನ ಆವಿಷ್ಕಾರಗಳನ್ನು ಪರಿಚಯಿಸುವ ವಿಶೇಷ ಪ್ರದರ್ಶನ ಮಳಿಗೆಯನ್ನೂ ಆಯೋಜಿಸಲಾಗಿತ್ತು. ಸಮಿತಿ ಸದಸ್ಯರು ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಸಂಸ್ಥೆ ನೀಡುತ್ತಿರುವ ಮಹತ್ವದ ಕೊಡುಗೆಗಳನ್ನು ಶ್ಲಾಘಿಸಿದರು. ದೇಶದ ಆಹಾರ ಭದ್ರತೆ, ಆಹಾರ ಸುರಕ್ಷತೆ ಮತ್ತು ಪೌಷ್ಟಿಕ ಸುಸ್ಥಿತಿಯನ್ನು ಬಲಪಡಿಸುವ ನಿಟ್ಟಿನಲ್ಲಿ CSIR-CFTRI ನಿರಂತರವಾಗಿ ತೋರುತ್ತಿರುವ ಬದ್ಧತೆಯನ್ನು ಸದಸ್ಯರು ಪ್ರಶಂಸಿಸಿದರು.











