ವಿಜಯ ದರ್ಪಣ ನ್ಯೂಸ್…..
ಅಂತಾರಾಷ್ಟ್ರೀಯ ದೇಹಧಾರ್ಢ್ಯ ಪಟು ಜಿಮ್ ರವಿ ಅವರ “ರವಿ ನೀನು ಆಗಸದಲ್ಲಿ” ಕೃತಿ ಬಿಡುಗಡೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ

ತಾಂಡವಪುರ ಸೆಪ್ಟೆಂಬರ್ 8 ಅಂತಾರಾಷ್ಟ್ರೀಯ ದೇಹಧಾರ್ಢ್ಯ ಪಟು ಜಿಮ್ ರವಿ ಅವರ ಜೀವನ ಆಧರಿಸಿ ಬರೆದಿರುವ “ರವಿ ನೀನು ಆಗಸದಲ್ಲಿ” ಕೃತಿ ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು.
ಸಮಾರಂಭದಲ್ಲಿ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಸಚಿವ ನರೇಂದ್ರಸ್ವಾಮಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ಹಿರಿಯ ಸಾಹಿತಿಗಳಾದ ಪ್ರೊ. ಎಸ್.ಜಿ. ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್ ಮತ್ತಿತರರು ಈ ಸಮಾರಂಭದಲ್ಲಿ ಭಾಗವಹಿಸಿ ರವಿ ನೀನು ಆಗಸದಲ್ಲಿ ಎಂಬ ಕೃತಿಯ ಬಗ್ಗೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು
ರಾಜಾಜಿನಗರದ ಪುಣ್ಯಧಾಮದಲ್ಲಿ
ಟಿಟಿಡಿ ಕಾರ್ಯಕ್ರಮ

ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ
ಸೆಪ್ಟೆಂಬರ್ 8 ರಿಂದ 11ರ ವರೆಗೆ ಜರುಗುವ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳು :
ಭಜನಾ ಕಾರ್ಯಕ್ರಮ (ಪ್ರತಿದಿನ ಸಂಜೆ 6-00 ರಿಂದ 7-00) : ಸೆಪ್ಟೆಂಬರ್ 8-ಮತ್ತಿಕೆರೆಯ
ಶ್ರೀ ಲಕ್ಷ್ಮೀ ವೆಂಕಟೇಶ್ವರ ಭಜನಾ ಮಂಡಳಿ, ಸೆಪ್ಟೆಂಬರ್ 9-ವಿಜಯನಗರದ
ಪವಿತ್ರ ಗಾನ ವೃಂದ, ಸೆಪ್ಟೆಂಬರ್ 10-ಬಸವೇಶ್ವರನಗರದ
ಶ್ರೀ ಹಯವದನ ಭಜನಾ ಮಂಡಳಿ.
ಪ್ರವಚನ ಕಾರ್ಯಕ್ರಮ
(ಪ್ರತಿದಿನ ಸಂಜೆ 7-00 ರಿಂದ 8-00) : ಸೆಪ್ಟೆಂಬರ್ 8, 9 ಮತ್ತು 10ರಂದು ಶ್ರೀ ಕಂಬಾಲೂರು ಶ್ರೀವತ್ಸಾಚಾರ್ಯ ಇವರಿಂದ “ಭಾಗವತ ಮಹಾತ್ಮೆ” ಧಾರ್ಮಿಕ ಪ್ರವಚನ.
ಹರಿನಾಮ ಸಂಕೀರ್ತನೆ :
ಸೆಪ್ಟೆಂಬರ್ 11, ಶುಕ್ರವಾರ, ಸಂಜೆ 6-30 ರಿಂದ 8-00. ಗಾಯನ : ಕು|| ರಚನಾ ಶರ್ಮಾ, ಪಿಟೀಲು : ಶ್ರೀ ಎಂ.ಎನ್. ಸತ್ಯನಾರಾಯಣ, ಮೃದಂಗ : ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಇವರುಗಳು ನಡೆಸಿಕೊಡಲಿದ್ದಾರೆ ಎಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ಮಾರುತಿ ಮಹಾಗಣಪತಿ ದೇವಸ್ಥಾನ (ಪುಣ್ಯಧಾಮ), 1ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010.











