ವಿಜಯ ದರ್ಪಣ ನ್ಯೂಸ್….
ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ.ಬಿ ಜೆ ವಿಜಯ್ ಕುಮಾರ್ ರವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ಪಕ್ಷದ ವರಿಷ್ಠರಲ್ಲಿ ಮನವಿ

ತಾಂಡವಪುರ ಸೆಪ್ಟೆಂಬರ್ 10 ಮೈಸೂರು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಾ ಬಿ ಜೆ ವಿಜಯ್ ಕುಮಾರ್ ರವರಿಗೆ ರಾಜ್ಯಸಭಾ ಸದಸ್ಯರು ಅಥವಾ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಬೇಕೆಂದು ರಾಷ್ಟ್ರ ಹಾಗೂ ರಾಜ್ಯ ನಾಯಕರಿಗೆ ಶಾಸಕರು ಮುಖಂಡರುಗಳು ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ
ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ದುಡಿದ ಕೈಗೆ ಕೂಲಿ ಕೊಡಿ ಎಂದು ಸದಾ ಹೇಳುತ್ತಾರೆ ಅದರಂತೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ವಿದ್ಯಾರ್ಥಿ ಕಾಂಗ್ರೆಸ್ ಯುವ ಕಾಂಗ್ರೆಸ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮೈಸೂರು ಜಿಲ್ಲಾ ಅಧ್ಯಕ್ಷರಾಗಿ ಸುದೀರ್ಘವಾಗಿ ಪಕ್ಷದ ಒಬ್ಬ ನಿಷ್ಠಾವಂತ ನಾಯಕರಾಗಿ ಕಾರ್ಯಕರ್ತರಾಗಿ ಹಗಲಿರುಳು ದುಡಿದಿರುವ ನಾಯಕರಿಗೆ ಪಕ್ಷ MLC ಮಾಡುವ ಮೂಲಕ ಅವಕಾಶ ಕಲ್ಪಿಸಿ ಕೊಡಬೇಕು. ಇಂದು ನಮ್ಮ ಬೇಡಿಕೆಯಾಗಿದೆ ಎಂದು ಶಾಸಕರಾದ ಅನಿಲ್ ಚಿಕ್ಕಮಾದು ದರ್ಶನ್ ಧ್ರುವನಾರಾಯಣ್ ರವರು ಹಾಗೂ ಮುಖಂಡರುಗಳು ಒತ್ತಾಯಿಸಿದ್ದಾರೆ
ಮೈಸೂರು ಭಾಗದಲ್ಲಿ ಸದೃಢ ಕಾಂಗ್ರೆಸ್ ಪಕ್ಷ ಕಟ್ಟುವ ಕೆಲಸ ಮಾಡಿದ ದೊಡ್ಡ ದೊಡ್ಡ ನಾಯಕರುಗಳಾದ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರ ಕೆಪಿಸಿಸಿ ಕಾರ್ಯಧ್ಯಕ್ಷರು ಆಗಿದ್ದ ಆರ್ ಧ್ರುವನಾರಾಯಣ್ ಸಾಹೇಬರ HC ಮಹದೇವಪ್ಪ ರಂತಹ ಅನೇಕ ಹಿರಿಯರ ದಿಗ್ಗಜರ ಜೊತೆಗೆ ದುಡಿದು ಪಕ್ಷ ಕಟ್ಟುವ ನಿಟ್ಟಿನಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ,
ಹೋರಾಟದ ಹಾದಿಯಲ್ಲೇ ಸಾಗುತ್ತಾ ಬಂದಿರುವ BJ ವಿಜಯ ಕುಮಾರ್ ರವರು ಪ್ರಗತಿಪರ ಚಿಂತನೆ ಉಳ್ಳ ಒಬ್ಬ ನಾಯಕರಾಗಿ ಪ್ರಗತಿಪರ, ರೈತರ ಪರ, ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತ ಜನ ಮನ್ನಣೆ ಪಡೆದಿದ್ದಾರೆ, ಪಕ್ಷದಲ್ಲಿ ಜಿಲ್ಲಾ ಅಧ್ಯಕ್ಷ ಎನ್ನುವ ಚೂರು ಗರ್ವ ವಿಲ್ಲದೆ ಸಾಮಾನ್ಯ ಕಾರ್ಯಕರ್ತರಂತೆ ಎಲ್ಲ ಸಮಾಜದ ನಾಯಕರನ್ನು ತಳಮಟ್ಟದ ಕಾರ್ಯಕರ್ತರನ್ನ ಹಿರಿಯ ಕಿರಿಯ ನಾಯಕರನ್ನು ಸಮಾನವಾಗಿ ಕರೆದುಕೊಂಡು ಹೋಗುವಲ್ಲಿ ಬಹಳ ಯಶಸ್ವಿ ಯಾಗಿದ್ದಾರೆ ಮತ್ತು 2023 ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರನ್ನು ಗೆಲ್ಲಿಸುವಲ್ಲಿ ಇವರು ಕೂಡ ಒಬ್ಬರು ಎನ್ನುವುದು ಪಕ್ಷದ ವರಿಷ್ಟರಿಗೆ ತಿಳಿದಿರುವ ವಿಚಾರ.
ಈ ಬಗ್ಗೆ ನಾನು ಹೆಚ್ಚೆನು ಹೇಳಬೇಕಿಲ್ಲ ಇಂತ ನಾಯಕರನ್ನು ಪಕ್ಷ ರಾಜ್ಯಸಭಾ ಅಥವಾ ವಿಧಾನ ಪರಿಷತ್ ಸದಸ್ಯರಾಗಿ ಮಾಡಬೇಕೆಂದು ಒತ್ತಾಯ ಮಾಡುತೇನೆ. ಪಕ್ಷ ಇಂತಹ ಕೆಲಸವನ್ನ ಮಾಡಿದ್ದೆ ಆದಲ್ಲಿ ತಳಮಟ್ಟದ ಕಾರ್ಯಕರ್ತರು ಬಹಳ ವಿಶ್ವಾಸದಿಂದ ದುಡಿಯುವುದಕ್ಕೆ ಕಾರ್ಯಕರ್ತರಿಗೆ ಮತ್ತಷ್ಟು ಶಕ್ತಿ ಬಂದಂತಾಗುತ್ತದೆ ಎಂದು ಮುಖಂಡರು ಹೇಳಿದರು











