ನಂಜನಗೂಡು ತಾಲೂಕಿನಲ್ಲಿ  ಮಳೆ: ಜನಜೀವನ ಅಸ್ತವ್ಯಸ್ತ

ವಿಜಯ ದರ್ಪಣ ನ್ಯೂಸ್….

 ನಂಜನಗೂಡು ತಾಲೂಕಿನಲ್ಲಿ  ಮಳೆ: ಜನಜೀವನ ಅಸ್ತವ್ಯಸ್ತ

ತಾಂಡವಪುರ ಮೇ 28 : ನಂಜನಗೂಡು ತಾಲೂಕಿನ ತಾಂಡವಪುರ ಸುತ್ತಮುತ್ತ ಕಳೆದ ಮೂರು ದಿನಗಳಿಂದ ಜಿಡಿ ಜಿಡಿ ಮಳೆಯಿಂದಾಗಿ ಜನಜೀವನ ಹಸ್ತವ್ಯಸ್ತಗೊಂಡಿದೆ.

ತಾಲೂಕಿನ ಗ್ರಾಮಗಳಾದ ತಾಂಡವಪುರ ಕೆಂಪಿ ಸಿದ್ದನ ಹುಂಡಿ ಹುಳಿಮಾವು ಮರಡಿಹುಂಡಿ ಹಳ್ಳಿ ದಿಡ್ಡಿ ಏಚಗಳ್ಳಿ ಮರಳೂರು ಬಿದರಗೋಡು ರಾಂಪುರ ಬಂಚಳ್ಳಿ ಹುಂಡಿ ಚಿಕ್ಕಯ್ಯನ ಛತ್ರ ಬಸವನಪುರ ಹೆಜ್ಜಿಗೆ ತೊರೆಮಾವು ಅಡಕನಹಳ್ಳಿ ಕಡಕೋಳ ಕೋಚನಹಳ್ಳಿ ಕೂಡನಹಳ್ಳಿ ಮಾಕನಹುಂಡಿ ಸಜ್ಜೆಹುಂಡಿ ರಾಯನ ಹುಂಡಿ ಸೋಮೇಶ್ವರಪುರ ಹ ಬ್ಯಾ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ ಈ ತುಂತುರು ಮಳೆಯಿಂದಾಗಿ ಜಲಜೀವನ ಸಂಪೂರ್ಣವಾಗಿ ಹಸ್ತವ್ಯಸ್ತವಾಗಿದೆ.

ಗ್ರಾಮೀಣ ಭಾಗದಲ್ಲಿ ರೈತಾಪಿ ವರ್ಗದ ಜನರಲ್ಲಿ ಸ್ವಲ್ಪಮಟ್ಟಿಗಾದರೂ ನಗು ಕಂಡುಬಂದರು ಈ ದಿಡಿ ಮಳೆಯಿಂದ ದನ ಕರುಗಳಿಗೆ ಮೇವು ತರುವುದು ಸೇರಿದಂತೆ ಮುಂತಾದ ರೈತರ ಕೆಲಸಗಳಿಗೆ ತೊಂದರೆ ಉಂಟಾಗಿದೆ, ಅದರಲ್ಲೂ ಕೈಗಾರಿಕಾ ಪ್ರದೇಶಗಳಲ್ಲಿ ಉದ್ಯೋಗ ಅರಸಿ ಹೋಗುವಂತ ಕೆಲಸಗಾರರಿಗೂ ಸಹ ಈ ಜಿಡಿಜಿಡಿ ಮಳೆಯಿಂದಾಗಿ ತುಂಬಾ ತೊಂದರೆಯಾಗಿದ್ದು ಮಳೆ ಜೊತೆಗೆ ಶೀತ ಗಾಳಿಯು ಬೀಸತೊಡಗಿದ್ದು ಈ ಶೀತಗಾಳಿಯ ಕೊಡತಕ್ಕೆ ಜನರು ಕುಗ್ಗಿ ಹೋಗಿದ್ದು ಈ ಶೀತ ಗಾಳಿಯಿಂದ ಅನಾರೋಗ್ಯ ಸಮಸ್ಯೆ ಕೂಡ ಜಾಸ್ತಿ ಯಾಗ ತೊಡಗಿದ್ದು ಜನರು ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ ಇನ್ನಾದರೂ ಈ ಜಿಡಿ ಜಿಡಿ ಮಳೆ ನಿಂತು ಸಾರ್ವಜನಿಕರಿಗೆ ಆಗುವ ಅವ್ಯವಸ್ಥೆ ತಪ್ಪುವುದೇ ಕಾದು ನೋಡೋಣ