ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜನಪದ
ವಿಜಯ ದರ್ಪಣ ನ್ಯೂಸ್ ಮೈಸೂರು: ಜಾನಪದ ಎಂಬುದು ತರತಮ ಭಾವಗಳನ್ನು ತೊಡೆದುಹಾಕುವ ಸಮಸಮಾಜ ನಿರ್ಮಾಣದ ರಹದಾರಿ. ಮನಸ್ಸು ಮನಸ್ಸುಗಳನ್ನು ಹತ್ತಿರ ತರುವ ಸಾಧನ ಜಾನಪದ. ಜನಪದರ ಎಲ್ಲ ಅಳಲುಗಳನ್ನು ವಿವಿಧ ಬಗೆಯ ಸಾಹಿತ್ಯಕ ಮತ್ತು ಪ್ರದರ್ಶಕ ನೆಲೆಯಲ್ಲಿ ತೆರೆದಿಡುವ ಕೆಲಸ ಮಾಡುತ್ತದೆ. ಧರ್ಮ, ಜಾತಿ, ಲಿಂಗತಾರತಮ್ಯಗಳನ್ನು ಅಳಿಸಿಹಾಕುವ ದಿವ್ಯೌಷಧಿ ಎಂದು ಸಂಸ್ಕೃತಿ ಚಿಂತಕ, ಜಾನಪದ ವಿದ್ವಾಂಸ ಹಿ.ಶಿ. ರಾಮಚಂದ್ರೇಗೌಡ ನುಡಿದರು. ಅವರು ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್, ಜಾನಪದ ವಿಭಾಗ ಮಹಾರಾಜ ಕಾಲೇಜು, ಇಫ್ರೋ ಜಾನಪದ…
