ವಿಜಯ ದರ್ಪಣ ನ್ಯೂಸ್….
ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ : ಮುಖ್ಯೋಪಾಧ್ಯಾಯ ಎನ್.ಸತೀಶ್

ಶಿಡ್ಲಘಟ್ಟ : ದೇಶದ ಭವ್ಯ ನಾಗರಿಕರಾಗಲು ಶಿಬಿರಗಳು ಸಹಕಾರಿಯಾಗಲಿದ್ದು, ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳನ್ನು ಕಲಿತ ವಿದ್ಯಾರ್ಥಿಗಳು ಅವುಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು
ಶಾಲೆಯ ಮುಖ್ಯೋಪಾಧ್ಯಾಯ ಎನ್.ಸತೀಶ್ ತಿಳಿಸಿದರು.
ನಗರದ S.R.Citizen ಶಾಲೆಯಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ನ ಮೂರು ದಿನಗಳ ಬೇಸಿಗೆ ಶಿಬಿರ ಹಾಗೂ ರಾಜ್ಯಪಾಲರ ಪ್ರಶಸ್ತಿ ತಯಾರಿ ಶಿಬಿರದಲ್ಲಿ ಅವರು ಮಾತನಾಡಿದರು.
2023-24ರ ಸಾಲಿನಲ್ಲಿ ಮೂರು ವಿದ್ಯಾರ್ಥಿಗಳು ಹಾಗೂ 2024 – 25 ರ ಸಾಲಿನಲ್ಲಿ ಒಂಬತ್ತು ಜನ ವಿದ್ಯಾರ್ಥಿಗಳು ರಾಜ್ಯಪಾಲರ ಪ್ರಶಸ್ತಿ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ, ಈ ವರ್ಷ ಈ ವರ್ಷ ಒಟ್ಟು 27 ಸೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಶಾಲೆಗೆ ಕೀರ್ತಿ ತನ್ನಿ ಎಂದು ಹಾರೈಸಿದರು.
ಈ ವೇಳೆ ಶಿಬಿರದಲ್ಲಿ ನಾನಾ ವಿಧದ ಜೀವನ ಕೌಶಲ್ಯಗಳ ಬಗ್ಗೆ ತಿಳಿಸಲಾಯಿತು ಮತ್ತು ಮುಂಬರುವ ರಾಜ್ಯಪಾಲರ ಪ್ರಶಸ್ತಿಗೆ ಸಂಬಂಧಿಸಿದ ತಯಾರಿ ಶಿಬಿರ ಹಮ್ಮಿಕೊಳ್ಳಲಾಗಿತ್ತು ,ಶಿಬಿರದಲ್ಲಿ ಸೈಟ್ ನಾಯಕರಾಗಿ ಆರ್.ನಾಗರಾಜು, ಗೈಡ್ ಶಿಕ್ಷಕಿಯಾಗಿ ಸತ್ಯ ಜ್ಯೋತಿ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಚಂದ್ರಶೇಖರ್,ಹರ್ಷಿತ, ರೂಪ, ಮಂಜುನಾಥ್ ಹಾಗು ಶಿಕ್ಷಕರು ಹಾಜರಿದ್ದರು.










