ವಿಜಯ ದರ್ಪಣ ನ್ಯೂಸ್…
ಶ್ರದ್ಧಾ ಭಕ್ತಿಯಿಂದ ನಡೆದ ಶ್ರೀ ವೀರಾಂಜನೇಯಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಶಿಲಾವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ

ಶಿಡ್ಲಘಟ್ಟ:ತಾಲ್ಲೂಕಿನ ಚೀಮನಹಳ್ಳಿಯ ಶ್ರೀವೀರಾಂಜನೇಯ ಸ್ವಾಮಿ ದೇವಾಲಯದ ಜೀರ್ಣೋದ್ಧಾರ, ಶಿಲಾವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.
ಗಂಗೆಪೂಜೆ, ಯಾಗಶಾಲಾ ಪ್ರವೇಶ, ಶ್ರೀವಿಷಕ್ಷೇನ ಆರಾಧನೆ, ಶ್ರೀಭಗವದ್ ವಾಸುದೇವ ಪುಣ್ಯಾಹ, ಅಂಕುರಾರ್ಪಣ ಹೋಮ , ಸುಪ್ರಭಾತ ಸೇವೆ, ಪಿಂಡಿಕಾ ಪೂಜೆ, ರತ್ನನ್ಯಾಸ, ಶಿಲಾ ಅಷ್ಟಬಂಧನ, ವೇದಪಾರಾಯಣ,ಧ್ವಜ ಕುಂಭಾರಾಧನೆ, ಕಳಶಾರಾಧನೆ,ಗೋ ಪೂಜೆ, ಸರ್ವ ದೇವರಿಗೆ ನೇತ್ರೋನ್ನಿಲನ ಪ್ರಸಾದ, ಮಹಾಭಿಷೇಕ, ಮಹಾಮಂಗಳಾರತಿ, ಪೂಜಾ ಕಾರ್ಯಗಳು ಸನ್ಮಾನ,
ಅನ್ನಸಂತರ್ಪಣೆ ವಿನಿಯೋಗ ನಡೆದವು.
ಶಾಸಕ ಬಿ.ಎನ್.ರವಿಕುಮಾರ್, ಚಿಮುಲ್ ನಿರ್ದೇಶಕರಾದ ಬಂಕ್ ಮುನಿಯಪ್ಪ, ಹುಜಗೂರು ರಾಮಣ್ಣ, ಮುಖಂಡರಾದ ಬಿ.ವಿ.ರಾಜೀವ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ಗೌಡ, ಆಂಜಿನಪ್ಪ(ಪುಟ್ಟು),ತಾಲ್ಲೂಕು ಪಂಚಾಯತಿ
ಮಾಜಿ ಅಧ್ಯಕ್ಷ ಕೆ.ಲಕ್ಷ್ಮೀನಾರಾಯಣರೆಡ್ಡಿ, ತಾದೂರು ರಘು, ಎಚ್.ಎನ್.ವಿಜಯಕುಮಾರ್ ವಿವಿಧ ಮುಖಂಡರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.










