--Ads--

ಪ್ರಾದೇಶಿಕ ವಿಪತ್ತುಗಳನ್ನು ಎದುರಿಸಲು 5 ರಾಷ್ಟ್ರಗಳ ಹಿಮಾಲಯನ್ ಮಂಡಳಿ ರಚಿಸಲು ಸದ್ಗುರುಗಳಿಂದ ಕರೆ: ನೇಪಾಳ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ

On: August 31, 2026 3:32 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಪ್ರಾದೇಶಿಕ ವಿಪತ್ತುಗಳನ್ನು ಎದುರಿಸಲು 5 ರಾಷ್ಟ್ರಗಳ ಹಿಮಾಲಯನ್ ಮಂಡಳಿ ರಚಿಸಲು ಸದ್ಗುರುಗಳಿಂದ ಕರೆ: ನೇಪಾಳ ಪ್ರಧಾನಿ ವಿಪತ್ತು ಪರಿಹಾರ ನಿಧಿಗೆ  ₹ 1 ಕೋಟಿ ದೇಣಿಗೆ

ಕಠ್ಮಂಡು, 31 ಆಗಸ್ಟ್ 2026: ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ವಿನಾಶಕಾರಿ ಹಠಾತ್ ಪ್ರವಾಹದ ನಂತರ ತಮ್ಮ ಮೊದಲ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸೂಕ್ಷ್ಮ ಹಿಮಾಲಯ ಪ್ರದೇಶದಲ್ಲಿ ಎದುರಾಗುವ ವಿಪತ್ತುಗಳನ್ನು ನಿಭಾಯಿಸಲು ಹಿಮಾಲಯ ಪ್ರದೇಶದ ರಾಷ್ಟ್ರಗಳ ನಡುವೆ ಹೆಚ್ಚಿನ ಸಹಕಾರಕ್ಕೆ ಸದ್ಗುರುಗಳು ಕರೆ ನೀಡಿದರು.

ಭಾನುವಾರ ಕಠ್ಮಂಡುವಿನಲ್ಲಿ ನಡೆದ “ಇನ್ ಸಾಲಿಡಾರಿಟಿ ವಿತ್ ನೇಪಾಳ” ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಈ ಕರೆಯನ್ನು ನೀಡಿ, ನೇಪಾಳದ ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಗೆ ₹1 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದರು.

ನೇಪಾಳದ ಹಠಾತ್ ಪ್ರವಾಹ ದುರಂತದಲ್ಲಿ ಸಾವಿರಾರು ಜನರು ನಾಪತ್ತೆಯಾಗಿದ್ದು, ಹಲವರು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ದುರಂತ ಸಂಭವಿಸಿದ ಸಂದರ್ಭದಲ್ಲಿ ಗಡಿಯ ಚೀನಾ ಭಾಗದ ಗೈರಾಂಗ್ ಇಮಿಗ್ರೇಷನ್ ಕೇಂದ್ರದಲ್ಲಿದ್ದ ‘ಈಶ ಸೇಕ್ರೆಡ್ ವಾಕ್ಸ್ ಕೈಲಾಶ ಯಾತ್ರೆ’ಯ 77 ಯಾತ್ರಿಕರು ಹಾಗೂ ನೇಪಾಳದ ಭಾಗದಲ್ಲಿದ್ದ ಮೂವರು ಈಶ ಸ್ವಯಂಸೇವಕರು ಇನ್ನೂ ಪತ್ತೆಯಾಗಿಲ್ಲ.

ಭಾರತ, ಚೀನಾ, ಪಾಕಿಸ್ತಾನ, ನೇಪಾಳ ಮತ್ತು ಭೂತಾನ್ ಒಳಗೊಂಡಂತೆ ಐದು ರಾಷ್ಟ್ರಗಳ ‘ಹಿಮಾಲಯನ್ ಮಂಡಳಿ’ಯನ್ನು ರಚಿಸಲು ಸದ್ಗುರುಗಳು ಪ್ರಸ್ತಾಪಿಸಿದರು. ಐದೂ ದೇಶಗಳು ಹಂಚಿಕೊಂಡಿರುವ ಈ ಪರ್ವತ ಶ್ರೇಣಿಯನ್ನು ರಕ್ಷಿಸಲು ಮತ್ತು ನಿಭಾಯಿಸಲು ದೇಶಗಳು ತಮ್ಮ ರಾಜಕೀಯ ಗಡಿಗಳನ್ನು ಮೀರಿ ಯೋಚಿಸಬೇಕು ಎಂದು ಕರೆ ನೀಡಿದರು.

“ಪರ್ವತಗಳಿಗೆ ನಿಮ್ಮ ರಾಜಕೀಯ ಸಂಬಂಧಗಳು ತಿಳಿದಿಲ್ಲ. ನೀವು ಯಾವ ಭಾಷೆ ಅಥವಾ ಮಾತುಗಳನ್ನು ಆಡುತ್ತೀರಿ ಎಂಬುದು ಪರ್ವತಗಳಿಗೆ ಗೊತ್ತಿಲ್ಲ. ನೀವು ಇದನ್ನು ಒಂದು ಆಡಳಿತಾತ್ಮಕ ಮಂಡಳಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದರೂ, ಕನಿಷ್ಠ ಸಮಾಲೋಚನೆಯಾದರೂ ಒಂದಾಗಿ ನಡೆಯಬೇಕು. ನಾವು ಮಾಡುವ ಕೆಲಸಗಳಲ್ಲಿ ಹೊಂದಾಣಿಕೆ ಇರಬೇಕು, ಏಕೆಂದರೆ ಹಿಮಾಲಯವು ಭೂಮಿಯ ಮೇಲಿನ ಅತ್ಯಂತ ಅದ್ಭುತ ಮತ್ತು ಭವ್ಯವಾದ ನೈಸರ್ಗಿಕ ಗುರುತು. ಅದೇ ಸಮಯದಲ್ಲಿ, ಅತ್ಯಂತ ಸೂಕ್ಷ್ಮ ಮತ್ತು ಸುಲಭವಾಗಿ ಹಾನಿಗೊಳಗಾಗಬಲ್ಲವಾಗಿವೆ,” ಎಂದು ಸದ್ಗುರುಗಳು ಪ್ರತಿಪಾದಿಸಿದರು.

ಇಂತಹ ಮಂಡಳಿಯನ್ನು ತುರ್ತಾಗಿ ಸ್ಥಾಪಿಸುವ ಅಗತ್ಯವನ್ನು ಒತ್ತಿಹೇಳುತ್ತಾ, “ಹಿಮಾಲಯ ಪರ್ವತ ಶ್ರೇಣಿಗಳು ಹಾದುಹೋಗುವ ಈ ಎಲ್ಲಾ ದೇಶಗಳನ್ನು ಒಳಗೊಂಡ ಮಂಡಳಿಯು ಈಗಲೇ ರೂಪುಗೊಳ್ಳಬೇಕಿದೆ. ರಾಜಕೀಯ ಆಡಳಿತಗಳು ಪ್ರತ್ಯೇಕವಾಗಿದ್ದರೂ, ಪ್ರಪಂಚದ ಮುಂದಿನ ಪೀಳಿಗೆಗಾಗಿ ಸಂರಕ್ಷಿಸಬೇಕಾದ ಪ್ರಮುಖ ನೈಸರ್ಗಿಕ ಸಂಪನ್ಮೂಲವಾಗಿ ಈ ಪರ್ವತ ಶ್ರೇಣಿಗಳನ್ನು ನೋಡಬೇಕು. ನಾವು ಇದನ್ನು ಮಾಡದೆ, ‘ಸರಿ, ಇದು ನೇಪಾಳದ ಸಮಸ್ಯೆ, ಅವರೇ ನೋಡಿಕೊಳ್ಳಲಿ’ ಎಂದು ಸುಮ್ಮನಿದ್ದರೆ ಎಂದಿಗೂ ಪರಿಹಾರ ಸಿಗುವುದಿಲ್ಲ,” ಎಂದರು.

ಈ ದುರಂತದ ಪ್ರಮಾಣವು ಊಹೆಗೂ ಮೀರಿದ್ದಾಗಿದೆ ಮತ್ತು ಇದರ ನಂತರದ ಪರಿಸ್ಥಿತಿಯನ್ನು ನೇಪಾಳವೊಂದೇ ನಿಭಾಯಿಸಲು ಸಾಧ್ಯವಿಲ್ಲ, ಇದಕ್ಕೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ ಎಂದು ವಿವರಿಸಿದರು.

“ಹಿಮನದಿಯ ಮಂಜುಗಡ್ಡೆಯ ಮುಕ್ಕಾಲು ಭಾಗವು ಶಿಖರದಿಂದ ನಾಲ್ಕು ಸಾವಿರ ಅಡಿಗಳಷ್ಟು ಕೆಳಗೆ ಬೀಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇಂತಹದ್ದನ್ನು ಯಾರೂ ಮುಂಚಿತವಾಗಿ ಲೆಕ್ಕಾಚಾರ ಮಾಡಲು ಸಾಧ್ಯವಿಲ್ಲ. ಆದರೆ ಈಗ ಇದು ಸಂಭವಿಸಿರುವುದರಿಂದ, ನಾವು ಗಂಭೀರವಾಗಿ ಪರಿಗಣಿಸಬೇಕು; ಏಕೆಂದರೆ ಇದು ನೇಪಾಳದಂತಹ ಸಣ್ಣ ರಾಷ್ಟ್ರವೊಂದೇ ಪರಿಹರಿಸಬಹುದಾದ ವಿಷಯವಲ್ಲ,” ಎಂದು ಸದ್ಗುರುಗಳು ಹೇಳಿದರು.

ಇದಲ್ಲದೆ, ಈ ದುರಂತವನ್ನು “ದೈವಿಕ ಕಾರಣ” ಅಥವಾ “ಅತೀಂದ್ರಿಯ ಸಾಧ್ಯತೆ”ಗಳೆಂದು ಹೇಳುವುದು ಸೂಕ್ತವಲ್ಲವೆಂದು ಜನರಲ್ಲಿ ಮನವಿ ಮಾಡಿದರು. ಇಂತಹ ವಿವರಣೆಗಳು ಜನರ ನೈಜ ಸಂಕಟವನ್ನು ಕಡೆಗಣಿಸುವಂತೆ ಮಾಡುತ್ತವೆ ಎಂದರು. ಜೀವನದ ಆಧ್ಯಾತ್ಮಿಕ ಆಯಾಮಗಳು ಮತ್ತು ಪ್ರಾಕೃತಿಕ ವಿದ್ಯಮಾನಗಳನ್ನು ನಿಯಂತ್ರಿಸುವ ಭೌತಿಕ ನಿಯಮಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು.

“ಇಂತಹ ವಿಷಯಗಳಲ್ಲಿ ನಾವು ಸಮಯ ವ್ಯರ್ಥ ಮಾಡಬಾರದು. ದಿವ್ಯತೆಯು ಮತ್ತೊಂದು ಆಯಾಮ. ಭೌತಿಕ ವಿದ್ಯಮಾನಗಳು ಭೌತಿಕ ನಿಯಮಗಳಿಂದ ನಿಯಂತ್ರಿಸಲ್ಪಡುವ ಭೌತಿಕ ಪ್ರಕ್ರಿಯೆಗಳಾಗಿವೆ. ಆದ್ದರಿಂದ ತತ್ವಗಳು, ಸಿದ್ಧಾಂತಗಳು ಅಥವಾ ಅತೀಂದ್ರಿಯ ವಿವರಣೆಗಳನ್ನು ನೀಡಿ ಮಾನವನ ಸಂಕಟವನ್ನು ಕೀಳಾಗಿ ಕಾಣಬೇಡಿ. ‘ಇದೆಲ್ಲವೂ ದೇವರ ಇಚ್ಛೆ ಇರಬಹುದು’ ಎನ್ನಬೇಡಿ. ಇಲ್ಲ, ಇದೊಂದು ಭೌತಿಕ ಪ್ರಕ್ರಿಯೆ.”

ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗಾಗಿ, ಪ್ರಾಕೃತಿಕ ಮತ್ತು ಅಸ್ವಾಭಾವಿಕವಾದ ಸಾವನ್ನಪ್ಪಿದವರಿಗಾಗಿ ನಿರಾಳ ಮತ್ತು ಸುಗಮವಾದ ಮುಂದಿನ ಹಾದಿಗಾಗಿ ನಡೆಸಲಾಗುವ ಪವಿತ್ರ ಆಚರಣೆಯಾದ ‘ಕಾಲಭೈರವ ಕರ್ಮ’ವನ್ನು ಸೆಪ್ಟೆಂಬರ್ 3ರಂದು ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ನೆರವೇರಿಸಲಾಗುವುದು ಎಂದು ಸದ್ಗುರುಗಳು ತಿಳಿಸಿದರು.

 

WhatsApp

Join Now

Telegram

Join Now

Instagram

Join Now