--Ads--

ಪಿಎಂ-ಕಿಸಾನ್ 23ನೇ ಕಂತು ಬಿಡುಗಡೆ : ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ

On: June 20, 2026 7:06 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಪಿಎಂ-ಕಿಸಾನ್ 23ನೇ ಕಂತು ಬಿಡುಗಡೆ : ರೈತರೊಂದಿಗೆ ಪ್ರಧಾನಿ ಮೋದಿ ಸಂವಾದ

ಗಾಂಧಿನಗರ (ಗುಜರಾತ್): ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೂನ್ 20ರ ನಾಳೆ ಪಶ್ಚಿಮ ಬಂಗಾಳದ ಹೂಗ್ಲಿ (ತಾರಕೇಶ್ವರ್) ಜಿಲ್ಲೆಯಿಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಯೋಜನೆಯ ಬಹುನಿರೀಕ್ಷಿತ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ.

ಈ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದೇಶದ ಕೋಟ್ಯಂತರ ರೈತರೊಂದಿಗೆ ವರ್ಚುವಲ್ (ವಿಡಿಯೋ ಕಾನ್ಸರೆನ್ಸ್) ಮೂಲಕ ಸಂವಾದ ನಡೆಸಲಿದ್ದಾರೆ ಹಾಗೂ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಈ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಪೂರಕವಾಗಿ ಗುಜರಾತ್‌ನ ಗಾಂಧಿನಗರದ ಟೌನ್ ಹಾಲ್‌ನಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ”ಪಿಎಂ ಕಿಸಾನ್ ಉತ್ಸವ ದಿವಸ್” ಅನ್ನು ಆಯೋಜಿಸಲಾಗಿದೆ.

ಈ ಸಮಾರಂಭದಲ್ಲಿ ಕೃಷಿ ಸಚಿವ ಜಿತು ವಘಾನಿ ಹಾಗೂ ರಾಜ್ಯ ಸಚಿವ ರಮೇಶ್ ಕಟಾರಾ ಭಾಗವಹಿಸಲಿದ್ದಾರೆ.

ರೂ.9.44 ಕೋಟಿ ರೈತ ಕುಟುಂಬಗಳಿಗೆ ಲಾಭ

ಈ 23ನೇ ಕಂತಿನ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ ಇರುವ ರೂ.9.44 ಕೋಟಿಗೂ ಅಧಿಕ ರೈತ ಕುಟುಂಬಗಳಿಗೆ ಒಟ್ಟು ರೂ.18,880 ಕೋಟಿಗೂ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡಲಿದ್ದಾರೆ.

ಇದರಲ್ಲಿ ಗುಜರಾತ್ ರಾಜ್ಯವೊಂದರದ್ದೇ ಸುಮಾರು 51.28 ಲಕ್ಷ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಒಟ್ಟು ರೂ.1,025 ಕೋಟಿಗೂ ಅಧಿಕ ಹಣ ನೇರವಾಗಿ ಡಿಬಿಟಿ ಮೂಲಕ ಜಮೆಯಾಗಲಿದೆ.

ರೂ.4.28 ಲಕ್ಷ ಕೋಟಿ ದಾಟಿದ ಒಟ್ಟು ಸಹಾಯಧನ “ಯೋಜನೆಯು ಪಿಎಂ-ಕಿಸಾನ್ ಆರಂಭವಾದಾಗಿನಿಂದ ಇದುವರೆಗೆ 22 ಕಂತುಗಳ ಮೂಲಕ ದೇಶದ 11 ಕೋಟಿಗೂ ಹೆಚ್ಚು ರೈತರಿಗೆ ರೂ.4.28 ಲಕ್ಷ ಕೋಟಿಗೂ ಅಧಿಕ ಆರ್ಥಿಕ ನೆರವನ್ನು ವಿತರಿಸಲಾಗಿದೆ. ಗುಜರಾತ್‌ನಲ್ಲಿ ಇದುವರೆಗೆ 69 ಲಕ್ಷಕ್ಕೂ

ಹೆಚ್ಚು ಫಲಾನುಭವಿ ರೈತ ಕುಟುಂಬಗಳು ರೂ.23,083 ಕೋಟಿಗೂ ಅಧಿಕ ನೇರ ಹಣಕಾಸು ಸಹಾಯವನ್ನು ಪಡೆದುಕೊಂಡಿವೆ. ರಾಜ್ಯಾದ್ಯಂತ ನೇರ ಪ್ರಸಾರಕ್ಕೆ ವ್ಯವಸ್ಥೆ: ಈ ಗುಜರಾತ್‌ನ ಸಂಭ್ರಮಾಚರಣೆಯನ್ನು ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿ ಆಯೋಜಿಸಲಾಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರಗಳು, ಮಾರುಕಟ್ಟೆ ಯಾರ್ಡ್‌ಗಳು (ಮಂಡಿ), ರೈತ ಉತ್ಪಾದಕ ಸಂಸ್ಥೆಗಳು, ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಧಾನಮಂತ್ರಿಯವರ ಭಾಷಣದ ನೇರ ಪ್ರಸಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

WhatsApp

Join Now

Telegram

Join Now

Instagram

Join Now