--Ads--

ಡಾ. ಎಚ್ ಸಿ ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ  ವರುಣ ವಿಧಾನಸಭಾ ಕ್ಷೇತ್ರದ ದಲಿತ ಮುಖಂಡರ ಒತ್ತಾಯ

On: June 8, 2026 5:15 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್ …..

ಡಾ. ಎಚ್ ಸಿ ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ  ವರುಣ ವಿಧಾನಸಭಾ ಕ್ಷೇತ್ರದ ದಲಿತ ಮುಖಂಡರ ಒತ್ತಾಯ

ತಾಂಡವಪುರ ಜೂನ್ 8 :ಡಾ ಎಚ್ ಸಿ ಮಹದೇವಪ್ಪನವರಿಗೆ ಸಚಿವ ಸ್ಥಾನ ನೀಡುವಂತೆ ಕಾಂಗ್ರೆಸ್ ಪಕ್ಷದ ವರಿಷ್ಠರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ವರುಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ದಲಿತ ಸಮುದಾಯದ ಮುಖಂಡರುಗಳು ಒತ್ತಾಯಿಸಿ ಮನವಿ ಮಾಡಿದರು
ಮೈಸೂರು ಜಿಲ್ಲೆ, ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಗಡೂರು ಬ್ಯಾಂಕ್ ವರುಣಾ ಬ್ಲಾಕ್ ಕಾಂಗ್ರೆಸ್ ಮುಖಂಡರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹಾಗೂ ನಗರಾಭಿವೃದ್ಧಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ  ಸಮುದಾಯದ ಹಿರಿಯ ಮುಖಂಡರು ಹಾಗೂ ಮಾಜಿ ಸಚಿವರು ಆದ ಡಾ ಎಚ್ ಸಿ ಮಹದೇವಪ್ಪನವರಿಗೆ ಸಚಿವ ಸ್ಥಾನ ಕೊಡಿಸಬೇಕು ಎಂದು ಮನವಿ ಮಾಡಿ ಒತ್ತಾಯಿಸಿದರು.
ಮನವಿಯನ್ನು ಆಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ನಿಮ್ಮ ಬೇಡಿಕೆಯನ್ನು ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ ನಾನು ಕೂಡ ಈ ವಿಚಾರವಾಗಿ ಮಾತಾಡ್ತೀನಿ ಎಂದು ವರಹ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ದಲಿತ ಮುಖಂಡರುಗಳಿಗೆ ಭರವಸೆ ನೀಡಿದರು
ಈ ಸಂದರ್ಭದಲ್ಲಿ ರಾಜ್ಯ ಮೃಗಾಲಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಂಗಸ್ವಾಮಿ ಶ್ರೀಕಂಠೇಶ್ವರ ದೇವಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ದಲಿತ ಯುವ ಮುಖಂಡ ಹೆಜ್ಜೆಗೆ ಆರ್ ಇಂದನ್ ಬಾಬು ಅಹಿಂದ ಮುಖಂಡ ಜವರಪ್ಪ ಬೂತಗಳ್ಳಿ ಮಣಿ ಬಗರ್ ಹುಕುಂ ಸಮಿತಿಯ ಸದಸ್ಯ ರಾಜಣ್ಣ ಗುತ್ತಿಗೆದಾರ ಚಿನ್ನಂಬಳ್ಳಿ ಸಿಆರ್ ಮಹದೇವ್ ಸುತ್ತೂರು ಸೋಮಣ್ಣ ಆರೋಪುರ ಶಿವಣ್ಣ ಬೊಕ್ಕ ಹಳ್ಳಿ ಸೋಮಸುಂದರ್ ತೊರೆಮಾವು ಟಿಡಿ ಗಿರೀಶ್ ಕಲ್ಮಳ್ಳಿ ಬಾಬು ಟಿ ನರಸೀಪರ ಮಹಾದೇವ್ ಗುತ್ತಿಗೆದಾರ ಹೆಜ್ಜಿಗೆ ರವಿಕುಮಾರ್ ಗುರುಪಾದ ಪುರುಷೋತ್ತಮ್ ಕಿರಾಳು ಬಾಲು ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ ಪಕ್ಷದ ಮುಖಂಡರು ದಲಿತ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು

WhatsApp

Join Now

Telegram

Join Now

Instagram

Join Now