--Ads--

ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ

On: July 5, 2026 11:30 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಬಸವಾಪಟ್ಟಣ ಬಳಿ ಜೂಜಾಟ 7ಮಂದಿ ಬಂಧನ,2 ಲಕ್ಷ ರೂ.ಗಳ ಜಪ್ತಿ 

ಶಿಡ್ಲಘಟ್ಟ : ತಾಲ್ಲೂಕಿನ ಬಸವಾಪಟ್ಟಣ ಬಳಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌.ಪಿ.)ಅವರ ವಿಶೇಷ ತಂಡ ಗುಪ್ತ ಮಾಹಿತಿ ಸಂಗ್ರಹಿಸಿ ದಿಢೀ‌ರ್ ದಾಳಿ ನಡೆಸಿ,7 ಮಂದಿಯನ್ನು ಬಂಧಿಸಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಸವಾಪಟ್ಟಣದ ಬಳಿ ಜೂಜಾಟದ ಅಡ್ಡೆಯಲ್ಲಿ ಪಣಕ್ಕೆ ಇಟ್ಟಿದ್ದ 2,02,800 ರೂ.ಗಳ ನಗದು, 7ಮೊಬೈಲ್‌ ಫೋನ್ ಹಾಗೂ 3 ದ್ವಿಚಕ್ರವಾಹನ ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಹಾಗೂ ಜಪ್ತಿ ಮಾಡಿದ ಮಾಲನ್ನು ಮುಂದಿನ ಕ್ರಮಕ್ಕಾಗಿ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಲಾಗಿದೆ.
ಬಂಧಿತರನ್ನು ಶಿಡ್ಲಘಟ್ಟ ತಾಲ್ಲೂಕಿನ ಹನುಮಂತಪುರದ ಮನೋಜ್ (27),ಬಸವಾಪಟ್ಟಣದ ನಿಖಿಲ್ (31) ,
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣದ ಕೆ.ದೇವರಾಜ್(43),ಚಿಂತಾಮಣಿ ತಾಲ್ಲೂಕಿನ ಕೊನಂಪಲ್ಲಿಯ ಕೆ.ಆರ್‌.ಮಂಜುನಾಥರೆಡ್ಡಿ(46),
ಚಿಕ್ಕಬಳ್ಳಾಪುರ ತಾಲ್ಲೂಕಿನ ಕಸಗುಟ್ಟಹಳ್ಳಿಯ ಕೆ.ಎಂ. ಮುನಿಕೃಷ್ಣ (53), ಗುಡಿಬಂಡೆ ತಾಲ್ಲೂಕಿನ ದಿನ್ನಹಳ್ಳಿಯ ಶ್ರೀನಿವಾಸ (27), ದೇವನಹಳ್ಳಿ ತಾಲ್ಲೂಕಿನ ವೆಂಕಟಗಿರಿಕೋಟೆಯ ಗೋವಿಂದಪ್ಪ(65),ಎಂದು ಗುರುತಿಸಲಾಗಿದೆ.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು ಅವರ) ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ  ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿಚರಣೆ 

ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಎರಡನೇ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ 

“ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಗುದ್ದಲಿ ಪೂಜೆ : ಕೊತ್ತನೂರು ಪಂಚಾಕ್ಷರಿರೆಡ್ಡಿ

ಸೆಪ್ಟೆಂಬ‌ರ್-4ರಂದು ತಾಲ್ಲೂಕಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿ ಕಾರ್ಯಕ್ರಮ

ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ಕಂದಾಯ ಗ್ರಾಮದ ಅಭಿಯಾನದ ಪ್ರಯುಕ್ತ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿ.ಪ್ರಭು.