ಆಷಾಢ ಮಾಸದ ಪ್ರಯುಕ್ತ ಚಾಮುಂಡಿ ಬೆಟ್ಟದಲ್ಲಿಬಿಗಿ ಪೊಲೀಸ್ ಬಂದೋಬಸ್ತ್
ತಾಂಡವಪುರ ಜುಲೈ 16 ಆಶಾಡ ಮಾಸ ಮೊದಲನೇ ಶುಕ್ರವಾರದ, ಪ್ರಯುಕ್ತ ಪೊಲೀಸ್ ಆಯುಕ್ತೆ ಶ್ರೀಮತಿ ಸೀಮಾ ಲಾಟ್ಕರ್ IPS ರವರ ನೇತೃತ್ವದಲ್ಲಿ ಸಿಬ್ಬಂದಿಗಳಿಗೆ ಕರ್ತವ್ಯ ಬ್ರಿಫಿಂಗ್ ಮಾಡಲಾಯಿತು.
ಮೊದಲನೇ ಶುಕ್ರವಾರದ ಪ್ರಯುಕ್ತ ಆದಿಶಕ್ತಿ ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಿನಯಪೂರ್ವಕವಾಗಿ ನೆರವಾಗಲು ಹಾಗೂ ಶಿಸ್ತು, ಪ್ರಾಮಾಣಿಕತೆಯಿಂದ ಜನಸ್ನೇಹಿ ಕರ್ತವ್ಯ ನಿರ್ವಹಿಸಲು ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು .
ಈ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.