ವಿಜಯ ದರ್ಪಣ ನ್ಯೂಸ್…..
ನಗರಲೆ ಹಾಲು ಉತ್ಪಾದಕರ ಸಂಘದ 2025 -26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ

ಆಗಸ್ಟ್ 26 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ನಗರಲೆ ಗ್ರಾಮದ ಹಾಲು ಉತ್ಪಾದಕರ ಸಂಘದ 2025- 26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯಸಭೆ ಸಂಘದ ಸವಾಂಗಣದಲ್ಲಿ ನಡೆಯಿತು
ಸಭೆಯಲ್ಲಿ ಸಂಘದ ಅಧ್ಯಕ್ಷ ಏನ್ ಬಿ ವೀರೇಂದ್ರ ಅವರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂಘದ ಹಾಲು ಉತ್ಪಾದಕರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲನ್ನು ಪೂರೈಸುವ ಮೂಲಕ ಸಂಘದ ಅಭಿವೃದ್ಧಿ ಜೊತೆಗೆ ತಾವು ಕೂಡ ಸಂಘಕ್ಕೆ ಹೆಚ್ಚು ಹಾಲು ಹಾಕುವ ಮೂಲಕ ತಾವು ಕೂಡ ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಆ ದಿಕ್ಕಿನಲ್ಲಿ ಸದಸ್ಯರು ಶ್ರಮಿಸಬೇಕು ಎಂದರು
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಹಾಲು ವಿಸ್ತಾರಣಾಧಿಕಾರಿಗಳಾದ ಆರ್ ಶ್ರುತಿ ರವರು ಮಾತನಾಡಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದಿಂದ ಹಾಗೂ ಸರ್ಕಾರದಿಂದ ದೊರಕುವ ಸೌಲಭ್ಯಗಳನ್ನು ತಿಳಿಸುವ ಮೂಲಕ ಹಾಲು ಉತ್ಪಾದಕರು ದೊರಕುವಂತ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಂಜುಳಾ ನಿರ್ದೇಶಕರಗಳಾದ ಎನ್ ಈ ಗುರುಸ್ವಾಮಿ ಎನ್ಎಂ ರಾಜಶೇಖರ್ ಎನ್ ಎಂ ರಾಜು ನಾಗೇಗೌಡ ಎನ್ ಎಂ ಮಹಾದೇವಸ್ವಾಮಿ ಪಾಪಣ್ಣ ಜಯಕುಮಾರ್ ಚೆನ್ನ ಗೌರಮ್ಮ ಸ್ವಾಮಿ ಎನ್ ಎಸ್ ನಾಗೇಂದ್ರ ಸ್ವಾಮಿ ಸಂಘದ ಮುಖ್ಯ ಕಾರ್ಯನಿರ್ವಾಳಾಧಿಕಾರಿ ಎನ್ಎಂ ರಾಜೇಂದ್ರ ಹಾಗೂ ಸಂಘದ ಎಲ್ಲಾ ಸದಸ್ಯರುಗಳು ಉತ್ಪದಕರು ಸಭೆಯಲ್ಲಿ ಭಾಗಿಯಾಗಿದ್ದರು











