ವಿಜಯ ದರ್ಪಣ ನ್ಯೂಸ್….
“ಜನಸೇವೆಯಿಂದ ದೇಶಸೇವೆ” ಎಂಬುದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನದ ಮೂಲ ಧ್ಯೇಯ :ನಿತಿನ್ ನಬಿನ್

“ಜನಸೇವೆಯಿಂದ ದೇಶಸೇವೆ” ಎಂಬುದು ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಜೀವನದ ಮೂಲ ಧ್ಯೇಯವಾಗಿದೆ. ಅವರು ದೇಶದ ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ಭಾರತ ಅನೇಕ ವಿಷಮ ಪರಿಸ್ಥಿತಿಗಳನ್ನು ಎದುರಿಸುತ್ತಿತ್ತು. ಆ ಸಮಯದಲ್ಲಿ ಅವರು ದೇಶದ ಹಿತದೃಷ್ಟಿಯಿಂದ ಹೊಸ ನೀತಿಗಳನ್ನು ರೂಪಿಸಿ, ಹೊಸ ಕಾರ್ಯಕ್ರಮಗಳನ್ನು ಆರಂಭಿಸಿ, ಜನಸಾಮಾನ್ಯರ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತಂದ ಅನೇಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರು.
ಸ್ಟಾರ್ಟ್ಅಪ್ ಇಂಡಿಯಾ ಯುವಜನತೆಗೆ ಸ್ವಾವಲಂಬಿಗಳಾಗಲು ಹೊಸ ಅವಕಾಶಗಳನ್ನು ಕಲ್ಪಿಸಿತು. ಶೌಚಾಲಯ ನಿರ್ಮಾಣ ಮಹಿಳೆಯರಿಗೆ ಗೌರವ ಮತ್ತು ಘನತೆಯ ಬದುಕನ್ನು ನೀಡಿದರೆ, ಲಖಪತಿ ದೀದಿ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದೆ. ಇಂದು ನಮ್ಮ ಮಹಿಳೆಯರು ಸ್ವಾವಲಂಬಿಗಳಾಗಿ ದೇಶದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ.

ದೇಶವು ದೀರ್ಘಕಾಲ ನಕ್ಸಲವಾದದ ಹಿಂಸೆಯನ್ನು ಅನುಭವಿಸಿದೆ. ಒಂದು ಕಾಲದಲ್ಲಿ ನಕ್ಸಲವಾದದ ಬೇರುಗಳು 200ಕ್ಕೂ ಹೆಚ್ಚು ಜಿಲ್ಲೆಗಳಿಗೆ ವ್ಯಾಪಿಸಿದ್ದವು. ಆದರೆ ಇಂದು ಭಾರತ ನಕ್ಸಲವಾದದ ವಿರುದ್ಧ ನಿರ್ಣಾಯಕ ಯಶಸ್ಸಿನತ್ತ ಮುನ್ನಡೆಯುತ್ತಿದೆ. ದೇಶವು ದೀರ್ಘಕಾಲ ಭಯೋತ್ಪಾದನೆಯಿಂದಲೂ ತತ್ತರಿಸಿತ್ತು. ಆದರೆ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಲಾಗಿದೆ. ಇಂದು ನಮ್ಮ ಗಡಿಗಳು ಮತ್ತಷ್ಟು ಸುರಕ್ಷಿತವಾಗಿದ್ದು, ದೇಶದತ್ತ ಕೆಟ್ಟ ದೃಷ್ಟಿ ಬೀರುವವರಿಗೆ ಮುಟ್ಟಿನೋಡುವಂತಹ ಪ್ರತ್ಯುತ್ತರ ನೀಡಲಾಗುತ್ತಿದೆ.
ಪ್ರಧಾನಿ ಮೋದಿ ಅವರ ಅಭಿವೃದ್ಧಿಯ ಗುರಿಯ ಮೇಲೆ ದೇಶದ ಜನತೆಗೆ ಸಂಪೂರ್ಣ ವಿಶ್ವಾಸವಿದೆ. ನಮ್ಮೆಲ್ಲರ ಸಾಮೂಹಿಕ ಪ್ರಯತ್ನದಿಂದ 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸೋಣ.
ದೇಶದ ಪ್ರಗತಿಯ ಪಯಣಕ್ಕೆ ಹಾಗೂ ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಯಶಸ್ವಿ ನಾಯಕತ್ವಕ್ಕೆ ಶುಭ ಹಾರೈಸುವ ಸಲುವಾಗಿ, ಮುಂಬರುವ ಸೆಪ್ಟೆಂಬರ್ 17ರಂದು ಪ್ರಧಾನಮಂತ್ರಿಗಳ ಜನ್ಮದಿನದ ಪ್ರಯುಕ್ತ ಸಂಜೆ 6ರಿಂದ 7 ಗಂಟೆಯ ನಡುವೆ ನಮ್ಮ-ನಮ್ಮ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸೋಣ. ಅವರ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ.
ಶ್ರೀ ನಿತಿನ್ ನಬಿನ್
ಸೇವಾ ಸಂಕಲ್ಪ ಅಭಿಯಾನ











