” ಭಾರತೀಯರಾದ ನಾವು…”

ವಿಜಯ ದರ್ಪಣ ನ್ಯೂಸ್ ….. ” ಭಾರತೀಯರಾದ ನಾವು…” ಯಾರಿಗೆ ಇಷ್ಟ ಇದೆಯೋ ಇಲ್ಲವೋ, ಒಪ್ಪಿಗೆ ಇದೆಯೋ ಇಲ್ಲವೋ, ಸಂತೋಷವೋ ಬೇಸರವೋ ಒಟ್ಟಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಬಹುತೇಕ ಯುದ್ಧ ಪ್ರಾರಂಭವಾಗಿದೆ, ಇಡೀ ರಾತ್ರಿ ಬಾಂಬು, ಮೀಸೈಲುಗಳ ದಾಳಿ ನಡೆಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಯಾವ ಪರಿಣಾಮ ಬೀರುತ್ತದೆ ಏನೋ ಊಹಿಸುವುದು ಕಷ್ಟ..‌.‌ ನಮ್ಮ ಕಾಲಘಟ್ಟದಲ್ಲಿ ಯುದ್ಧ ತಡೆಯಲು ನಮ್ಮಂತ ಸಾಮಾನ್ಯರಿಗೆ ಸಾಧ್ಯವಾಗಲಿಲ್ಲ. ಅದಕ್ಕೆ ಕ್ಷಮೆಯಾಚಿಸುತ್ತಾ, ಇಂತಹ ಸಂದರ್ಭದಲ್ಲಿ ಭಾರತೀಯ ನಾಗರಿಕರಾದ ನಮ್ಮ ಜವಾಬ್ದಾರಿ ಬಹಳ…

Read More

ಮೂಕ ಹಕ್ಕಿಯ ರೋಧನೆ…

ವಿಜಯ ದರ್ಪಣ ನ್ಯೂಸ್…. ಮೂಕ ಹಕ್ಕಿಯ ರೋಧನೆ… ಮೂಕ ಹಕ್ಕಿಯು ಹಾಡುತಿದೆ….. ಹಾಡುತಿದೆ……. ಹಾಡುತಿದೆ……. ಭಾಷೆಗೂ ನಿಲುಕದ ಭಾವ ಗೀತೆಯ ಹಾರಿ ಹಾರಿ ಹಾಡುತಿದೆ…. ಹಾಡುತಿದೆ……. ಹಾಡುತಿದೇ…….. ಹಕ್ಕಿಯ ರೆಕ್ಕೆ ಮುರಿದು ಬೀಳುವವರೆಗೂ….. ಒಂದು ಸಣ್ಣ ಕೆಮ್ಮಿಗೆ, ನೆಗಡಿಗೆ, ಗಂಟಲು ನೋವಿಗೆ, ಹೊಟ್ಟೆ ನೋವಿಗೆ, ಜ್ವರಕ್ಕೆ ಮನುಷ್ಯ ಭಯಪಡುತ್ತಾನೆ, ಬಿಪಿ, ಶುಗರ್, ಕ್ಯಾನ್ಸರ್, ಅಲ್ಸರ್, ಹಾರ್ಟ್ ಅಟ್ಯಾಕ್ ಗೆ ಪತರಗುಟ್ಟಿ ಹೋಗುತ್ತಾನೆ, ಎಷ್ಟೋ ಜನರು ಸಣ್ಣ ಸೂಜಿಯ ಇಂಜೆಕ್ಷನ್ ತೆಗೆದುಕೊಳ್ಳಲೂ ಹೆದರುತ್ತಾರೆ, ಬಹಳಷ್ಟು ಹೆಣ್ಣು ಮಕ್ಕಳು ಜಿರಳೆ…

Read More

ಪಂಥಗಳಾಚೆಯ ನೋಟ……. ಎಲ್ಲೋ ಎಡವುತ್ತಿದ್ದೇವೆಯೆ ನಾವು ?

ವಿಜಯ ದರ್ಪಣ ನ್ಯೂಸ್… ಪಂಥಗಳಾಚೆಯ ನೋಟ……. ಎಲ್ಲೋ ಎಡವುತ್ತಿದ್ದೇವೆಯೆ ನಾವು ? ಬಹುಶಃ, ಯಾವುದೋ ಸಿದ್ಧಾಂತಗಳಿಗೆ ದಾಸರಾಗುತ್ತಿದ್ದೇವೆಯೇ ? ಅಥವಾ, ಬದಲಾವಣೆಗಳನ್ನು ತಪ್ಪಾಗಿ ಗ್ರಹಿಸುತ್ತಿದ್ದೇವೆಯೇ ? ಅಥವಾ, ತಾಂತ್ರಿಕ ಪ್ರಗತಿಯಿಂದ ಗೊಂದಲಕ್ಕೊಳಗಾಗುತ್ತಿದ್ದೇವೆಯೇ ? ಅಥವಾ, ಬದುಕಿನ ಅರ್ಥವೇ ಬದಲಾಗುತ್ತಿದೆಯೇ ? ಅಥವಾ, ನಾವೇ ಭ್ರಮೆಗೊಳಗಾಗುತ್ತಿದ್ದೇವೆಯೇ ? ಅಥವಾ, ಅಭಿವೃದ್ಧಿ ಎಂದರೆ ಏನೆಂದೇ ತಿಳಿಯುತ್ತಿಲ್ಲವೇ ? ಅಥವಾ, ಎಲ್ಲೋ ಕಳೆದುಹೋದ ಅನುಭವವಾಗುತ್ತಿದೆಯೇ ? ಅಥವಾ, ನಿಜಕ್ಕೂ ಒಳ್ಳೆಯ ಮಾರ್ಗದಲ್ಲಿ ಸಾಗುತ್ತಿದ್ದೇವೆಯೇ ? ಅಥವಾ, ಇದೇ ಬದುಕಿನ ಸಹಜ ಕ್ರಮವೇ…

Read More

ಸೈನಿಕರು……

ವಿಜಯ ದರ್ಪಣ ನ್ಯೂಸ್…  ಸೈನಿಕರು…… ಯುದ್ಧದ ಕಾರ್ಮೋಡ ಕವಿಯುತ್ತಿರುವ ಸನ್ನಿವೇಶದಲ್ಲಿ ಕಾಡುತ್ತಿರುವ ನನ್ನ ಸೈನಿಕ ಜೀವಗಳು ಮತ್ತು ಅವರ ಕುಟುಂಬ……. ಸೈನಿಕರೆಂಬ ಅನಿವಾರ್ಯ ಬಲಿಪಶುಗಳು….. ಹೌದು, ಇಡೀ ವಿಶ್ವದಲ್ಲಿ ಸುಮಾರು 200 ದೇಶಗಳಿವೆ ಮತ್ತು ಸುಮಾರು 700 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ನನ್ನ ಒಂದು ಸಣ್ಣ ಅಂದಾಜಿನ ಪ್ರಕಾರ ಸುಮಾರು 6/7 ಕೋಟಿಗೂ ಹೆಚ್ಚು ಸೈನಿಕರಿದ್ದಾರೆ. ಮುಖ್ಯವಾಗಿ ತಮ್ಮ ದೇಶವನ್ನು ವಿದೇಶಿ ಆಕ್ರಮಣಕಾರರಿಂದ ರಕ್ಷಿಸಲು, ದೇಶದ ಆಂತರಿಕ ದುಷ್ಟ ಶಕ್ತಿಗಳನ್ನು ಅನಿವಾರ್ಯವಾದಾಗ ತಡೆಯಲು, ಪ್ರಾಕೃತಿಕ ವಿಕೋಪಗಳ…

Read More

ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ………

ವಿಜಯ ದರ್ಪಣ ನ್ಯೂಸ್… ದಾರ ಪವಿತ್ರ, ಮನುಷ್ಯ ಅಸ್ಪೃಶ್ಯ……… ಜನಿವಾರದ ವಿಷಯ ಇನ್ನೂ ಚರ್ಚೆಯಾಗುತ್ತಲೇ ಇದೆ. ಭಾರತದ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ರಚನೆಯ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಮೇಲ್ಪದರದಲ್ಲಿರುವವರು ಬ್ರಾಹ್ಮಣ ಸಮುದಾಯದವರು. ಜನಸಂಖ್ಯೆಯ ದೃಷ್ಟಿಯಿಂದ ಎಲ್ಲಾ ಕಾಲಘಟ್ಟದಲ್ಲೂ ಶೇಕಡ ಮೂರರಿಂದ ಆರರಷ್ಟು ಕಡಿಮೆ ಸಂಖ್ಯೆಯಲ್ಲಿದ್ದರೂ ಸಹ ಇಡೀ ವ್ಯವಸ್ಥೆಯನ್ನು ಬಹುತೇಕ ತಮ್ಮ ನಿಯಂತ್ರಣಕ್ಕೆ ಪಡೆದು ಮುನ್ನಡೆಸುತ್ತಿರುವವರು ಬ್ರಾಹ್ಮಣರೇ. ಸ್ವಾತಂತ್ರ್ಯ ನಂತರ ಸಂವಿಧಾನಾತ್ಮಕ ಆಡಳಿತ ಪ್ರಾರಂಭವಾದ ಮೇಲೆ ಸುಮಾರು 78 ವರ್ಷಗಳ ನಂತರ ಈಗ ತಮ್ಮ ನಿಯಂತ್ರಣ…

Read More

ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ………

ವಿಜಯ ದರ್ಪಣ ನ್ಯೂಸ್  ಭಾರತ ಸಾಗುತ್ತಿರುವ ದಿಕ್ಕು ಸರಿ ಇದೆಯೇ……… ದೇಶದ ಒಟ್ಟು ವ್ಯವಸ್ಥೆ ಸಾಗುತ್ತಿರುವ ದಿಕ್ಕು ಅಷ್ಟೇನೂ ಒಳ್ಳೆಯ ಮುನ್ಸೂಚನೆ ನೀಡುತ್ತಿಲ್ಲ. ನೀರ ಮೇಲಿನ ಗುಳ್ಳೆಯಂತೆ ಯಾವ ಕ್ಷಣದಲ್ಲಾದರೂ ಒಡೆದು ಹೋಗಬಹುದು ಎನ್ನುವ ಆತಂಕಕಾರಿ ಪರಿಸ್ಥಿತಿ ಕಂಡುಬರುತ್ತಿದೆ. ಇತಿಹಾಸದ ಎಲ್ಲಾ ಕಾಲಘಟ್ಟದಲ್ಲೂ ಉಗಮ, ಬೆಳವಣಿಗೆ, ಘರ್ಷಣೆ, ವಿನಾಶ ಹೀಗೆ ನಡೆದುಕೊಂಡೇ ಬಂದಿದೆ. ಮಾನವ ಇತಿಹಾಸ ನಿಂತ ನೀರಲ್ಲ. ಆದರೆ ನಾವಿರುವ ಸಮಕಾಲೀನ ಸಮಾಜ ಒಂದಷ್ಟು ಸಹನೀಯವಾಗಿ ಇರುವಂತೆ ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಇತ್ತೀಚಿನ ನಮ್ಮ ದೇಶದ…

Read More

ದೇವರ ಆಟ ಬಲ್ಲವರಾರು…….. ಕೊಲ್ಲುವ ಆಟದಲ್ಲಿ ಕಾಯುವ ದೇವರೆಲ್ಲಿ ?……

ವಿಜಯ ದರ್ಪಣ ನ್ಯೂಸ್….. ದೇವರ ಆಟ ಬಲ್ಲವರಾರು…….. ಕೊಲ್ಲುವ ಆಟದಲ್ಲಿ ಕಾಯುವ ದೇವರೆಲ್ಲಿ ?…… ಜಗತ್ತಿನ ಬಹುತೇಕ ಜನ ಈ ಜಗತ್ತನ್ನು ದೇವರೆಂಬ ವ್ಯಕ್ತಿ – ಶಕ್ತಿ ಸೃಷ್ಟಿಸಿದೆ, ಆತನ ಮೂಲಕವೇ ಎಲ್ಲವೂ ನಡೆಯುತ್ತಿದೆ. ಆತನಿಲ್ಲದೆ ಹುಲ್ಲು ಕಡ್ಡಿಯೂ ಅಲುಗಾಡುವುದಿಲ್ಲ ಎಂಬ ಅಭಿಪ್ರಾಯವನ್ನು, ಭಕ್ತಿಯನ್ನು, ಆರಾಧನೆಯನ್ನು, ನಂಬಿಕೆಯನ್ನು, ಪೂಜನೀಯ ಭಾವನೆಯನ್ನು ಹೊಂದಿದ್ದಾರೆ. ಎಲ್ಲೋ ಕೆಲವರು ಮಾತ್ರ ಆ ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಅಲುಗಾಡಿಸುವ ಶಕ್ತಿಯೂ ಇಲ್ಲ, ಏಕೆಂದರೆ ದೇವರೇ ಇಲ್ಲ ಎನ್ನುವ ಅಭಿಪ್ರಾಯವನ್ನು ಹೊಂದಿದ್ದಾರೆ. ಇರಲಿ,…

Read More

ಬಸವ ಜಯಂತಿ,……

ವಿಜಯ ದರ್ಪಣ ನ್ಯೂಸ್ ….. ಬಸವ ಜಯಂತಿ,…… ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ ಸಮಯ…… ಈ ಬಸವ ಜಯಂತಿ ಬಸವಣ್ಣನವರನ್ನು ವಿಜೃಂಭಿಸುವುದು, ಆರಾಧಿಸುವುದು, ಭಕ್ತಿ ಪೂರ್ವಕವಾಗಿ ಪೂಜಿಸುವುದು, ಅತಿಮಾನುಷ ವ್ಯಕ್ತಿಯಂತೆ ಭಾವಿಸುವುದು, ಪವಾಡ ಪುರುಷರಂತೆ ಹರಕೆ ಹೊರುವುದು, ಸಂಘಟನಾತ್ಮಕವಾಗಿ ಒಗ್ಗೂಡಲು ಅವರ ಹೆಸರನ್ನು ಉಪಯೋಗಿಸಿಕೊಳ್ಳುವುದು, ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದು, ಪ್ರತಿಮೆಗಳನ್ನು ಸ್ಥಾಪಿಸುವುದು, ಅಧ್ಯಯನ…

Read More

ಜೀವನದ ಪಯಣ ಅತ್ಯಂತ ದೀರ್ಘವೇ ………..

ವಿಜಯ ದರ್ಪಣ ನ್ಯೂಸ್… ಜೀವನದ ಪಯಣ ಅತ್ಯಂತ ದೀರ್ಘವೇ ……….. ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ……………… Life is Short , Make it Sweet………….. ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ. ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ. ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?……… ಭಾರತದ ಈಗಿನ ಸರಾಸರಿ…

Read More

ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ……

ವಿಜಯ ದರ್ಪಣ ನ್ಯೂಸ್… ಊಹೆಗೂ ಮೀರಿದ ಮಾನವ ಇತಿಹಾಸ ಮತ್ತು ಭವಿಷ್ಯ…… ವರ್ತಮಾನದ ನಾವು ಅದೃಷ್ಟಶಾಲಿಗಳಲ್ಲವೇ…… ಪ್ರಾಣಿಗಳಿಗೂ ದಯಾ ಸಂಘಗಳು ಪ್ರಬಲವಾಗಿರುವ ಈ ಸಂಧರ್ಭದಲ್ಲಿ ಮನುಷ್ಯನೂ ಮಾರಾಟವಾಗುತ್ತಿದ್ದ ದಿನಗಳನ್ನು ನೆನಪಿಸಿಕೊಂಡಾಗ……… ಬಹಳ ಹಿಂದೆ ಏನೂ ಅಲ್ಲ. ಕೇಲವೇ ಶತಮಾನಗಳ ಹಿಂದೆ ಕುರಿ ಕೋಳಿ ಹಸು ನಾಯಿ ಕತ್ತೆ ಕುದುರೆಗಳ ರೀತಿಯಲ್ಲಿ ಮನುಷ್ಯನನ್ನು ಸಹ ಬೀದಿ ಬದಿಯಲ್ಲಿ ಮಾರಾಟಕ್ಕೆ ನಿಲ್ಲಿಸಲಾಗುತ್ತಿತ್ತು. ನಮ್ಮ ಗ್ರಾಮೀಣ ಪ್ರದೇಶದ ದನಗಳ ಜಾತ್ರೆಯಲ್ಲಿ ಅವುಗಳನ್ನು ಕೊಳ್ಳುವವರು ಅದರ ಹಲ್ಲಿನಿಂದ ಹಿಡಿದು ದೇಹದ ಸಂಪೂರ್ಣ ಅಂಶಗಳನ್ನು…

Read More