ಚರ ಜಂಗಮವಾಗಿ….

ವಿಜಯ ದರ್ಪಣ ನ್ಯೂಸ್…. ಚರ ಜಂಗಮವಾಗಿ…. ಗುಡಿಯನೆಂದು ಕಟ್ಟದಿರು, ನೆಲೆಯನೆಂದು ನಿಲ್ಲದಿರು……. ಒಮ್ಮೆ ಬೆಳಕಾದೆ ನಾನು, ದೇಹ ಗಾಳಿಯಾಯಿತು, ಮನಸ್ಸು ವಿಶಾಲವಾಯಿತು, ವಿಶ್ವ ಪರ್ಯಟನೆ ಯಾತ್ರೆ ಹೊರಟಿತು……. ಅಗೋ ಅಲ್ಲಿ ಮಿನುಗುತ್ತಿವೆ ನಕ್ಷತ್ರಗಳು, ಉರಿಯುತ್ತಿವೆ ಧೂಮಕೇತುಗಳು, ಕೆಂಪಡರಿದ ಸೂರ್ಯ, ತಂಪಡರಿದ ಚಂದ್ರ, ಓ ಮೇಲೆ ನೋಡು ನೀಲಾಕಾಶ , ಕೆಳಗೆ ನೋಡು ಭೂಲೋಕ, ಕಣ್ಣಿನ ನೋಟಕ್ಕೂ ಸಿಗದಷ್ಟು ನೀರು, ಕಣ್ಣಂಚಿನಲ್ಲಿ ಕಾಣುವಷ್ಟು ಕಾಡು, ಅಲ್ಲಲ್ಲಿ ಪ್ರಾಣಿ ಪಕ್ಷಿಗಳು, ಎಲ್ಲೆಲ್ಲೂ ನರಮಾನವರು, ಒಂದು ಕಡೆ ಹಚ್ಚ ಹಸಿರು, ಇನ್ನೊಂದು…

Read More

ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು…….

ವಿಜಯ ದರ್ಪಣ ನ್ಯೂಸ್….. ಧರ್ಮದ ಜ್ವಾಲೆಗೆ ಪ್ರೀತಿಯ ತುಂತುರು……. ವಿಷದ ಹಾಲಿಗೆ ಅಮೃತ ಸಿಂಚನ……. ಕಾಲ್ಪನಿಕ ದೈವ ಶಕ್ತಿಗೆ ಮಾನವೀಯತೆಯ ವಾಸ್ತವ ಶಕ್ತಿ……. ಹಿಂಸೆಯ ದಳ್ಳುರಿಗೆ ಅಹಿಂಸೆಯ ಎಳ್ಳು ನೀರು….. ರಾಮ ರಹೀಮರ ಹೆಣಕ್ಕೆ ತಾಯಿ ಕರುಳೇ ಪಣಕ್ಕೆ……. ದುಷ್ಟರೆಲ್ಲಾ ಬಲಶಾಲಿಗಳೇ ಸತ್ತವರೆಲ್ಲಾ ಬಡವರೇ…… ಒಂದೇ ಬಳ್ಳಿಯ ಹೂವುಗಳು ಒಂದೇ ತಾಯಿಯ ಮಕ್ಕಳು ಒಂದೇ ದೋಣಿಯ ಪಯಣಿಗರು…….. ಅದಕ್ಕಾಗಿ ನಿಮ್ಮನ್ನು ಆಹ್ವಾನಿಸುತ್ತಿದ್ದೇವೆ ಬನ್ನಿ ಬನ್ನಿ……… ಸಿನಿಮಾ ಮಾಡೋಣ ಬನ್ನಿ ಹೊಡೆದಾಟಗಳಿಲ್ಲದ – ರಕ್ತ ಚೆಲ್ಲದ – ಕುತಂತ್ರಗಳಿಲ್ಲದ…

Read More

ಆಶಾಕಿರಣ… ( ರೇ ಆಫ್ ಹೋಪ್ )

ವಿಜಯ ದರ್ಪಣ ನ್ಯೂಸ್…. ಆಶಾಕಿರಣ… ( ರೇ ಆಫ್ ಹೋಪ್ ) ***************** ಕಿರು ಚಿತ್ರ…… ದೃಶ್ಯ ಒಂದು ************** ಕತ್ತಲ ಕೋಣೆಯೊಳಗೆ ದೃಶ್ಯಗಳು ಗೋಡೆಯ ಮೇಲೆ ಮೂಡುತ್ತದೆ. ಆ ದೃಶ್ಯಗಳಲ್ಲಿ ಕ್ರಮವಾಗಿ ಜೀಸಸ್, ಬುದ್ಧ, ರೂಮಿ, ಗಿಬ್ರಾನ್, ಗಾಂಧಿ, ಮಾರ್ಟಿನ್ ಲೂಥರ್ ಕಿಂಗ್, ಅಬ್ರಾಹಂ ಲಿಂಕನ್, ಬಸವಣ್ಣ, ಅಂಬೇಡ್ಕರ್, ನೆಲ್ಸನ್ ಮಂಡೇಲಾ ಚಿತ್ರಗಳು ಇರುತ್ತದೆ‌. ಆ ದೃಶ್ಯಗಳನ್ನು ಒಬ್ಬ 18 ವರ್ಷದ ಯುವಕ ತದೇಕಚಿತ್ತದಿಂದ ನೋಡುತ್ತಿರುತ್ತಾನೆ. ಈ ದೃಶ್ಯದಲ್ಲಿ ಆತನ ಮುಖದ ಮೇಲೆ ಮಾತ್ರ ದೀಪದ…

Read More

ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ……….

ವಿಜಯ ದರ್ಪಣ ನ್ಯೂಸ್… ನೀರಿನ ಗುಣಲಕ್ಷಣದಂತೆ ಮನುಷ್ಯ ಸಂಬಂಧಗಳ ಸ್ಥಿತಿಸ್ಥಾಪಕತ್ವ………. ಹೌದು, ಮನುಷ್ಯ ಸಂಬಂಧಗಳು ಸಹ ಪರಿಸ್ಥಿತಿ ಗುಣಲಕ್ಷಣಗಳನ್ನು ಅವಲಂಬಿಸಿ ನೀರಿನಂತೆ ತನ್ನ ಸ್ಥಾನವನ್ನು ತಾನೇ ಕಂಡುಕೊಳ್ಳುತ್ತವೆ…. ಗಂಡ ಹೆಂಡತಿ ಅಪ್ಪ ಮಕ್ಕಳು ಇತರೆ ಸಂಬಂಧಗಳು, ಗೆಳೆತನ, ಗುರು ಶಿಷ್ಯರು, ಗ್ರಾಹಕ ಮಾರಾಟಗಾರರು ಸೇರಿ ಎಲ್ಲಾ ಸಂಬಂಧಗಳು ಈ ಸ್ಥಿತಿ ಸ್ಥಾಪಕ ಗುಣ ಹೊಂದಿರುತ್ತವೆ….. ಅನುಭವದ ಆಧಾರದ ಮೇಲೆ ಹೇಳುವುದಾದರೆ…. ಬದುಕೊಂದು ದೀರ್ಘಕಾಲದ ಬಹುದೂರದ ಒಂದು ಅನಂತ ಪಯಣ. ಈ ಪಯಣದ ಹಾದಿಯಲ್ಲಿ ರಕ್ತ ಸಂಬಂಧಗಳೆಂಬ ಶಾಶ್ವತ…

Read More

ಯುದ್ದ ಮತ್ತು ಜೀವನ……

ವಿಜಯ ದರ್ಪಣ ನ್ಯೂಸ್… ಯುದ್ದ ಮತ್ತು ಜೀವನ…… ಬದುಕೊಂದು ಯುದ್ದ ಭೂಮಿ…………… ಗೆಲ್ಲಬಹುದು – ಸೋಲಬಹುದು – ಅನಿರೀಕ್ಷಿತವಾಗಿ ಸಾಯಬಹುದು……….. ರಣರಂಗದ ಎಲ್ಲಾ ಸಾಧ್ಯತೆಗಳು ಜೀವನದಲ್ಲೂ ಸಂಭವಿಸುವ ಅವಕಾಶ ಇದ್ದೇ ಇದೆ………‌ ಯುದ್ದದಲ್ಲಿ ಕತ್ತಿ, ಬಂದೂಕು, ಬಾಂಬು, ಗುಂಡುಗಳು ಯಾವ ಸಮಯದಲ್ಲಾದರೂ ನಮ್ಮನ್ನು ಗಾಯ ಮಾಡಬಹುದು ಅಥವಾ ಸಾಯಿಸಬಹುದು ಅಥವಾ ನಮ್ಮನ್ನು ಮುಟ್ಟದೇ ಹೋಗಬಹುದು….. ಯುದ್ದದಂತೆ ಬದುಕಿನಲ್ಲಿ ನಮ್ಮೊಂದಿಗೆ ಹಲವಾರು ಜನರಿರುತ್ತಾರೆ. ಕೆಲವೊಮ್ಮೆ ಮುಂದೆ, ಮತ್ತೆ ಕೆಲವರು ಹಿಂದೆ, ಹಲವರು ಆಗಾಗ ಜೊತೆಯಾಗುತ್ತಾರೆ ಅಥವಾ ಸಂದರ್ಭ ಸನ್ನಿವೇಶದ…

Read More

ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ……..

ವಿಜಯ ದರ್ಪಣ ನ್ಯೂಸ್…. ಒಳ ಮೀಸಲಾತಿ ಒಡೆದ ಮೀಸಲಾತಿ ಆಗುವ ಮುನ್ನ ಎಚ್ಚರವಹಿಸಿ…….. ಈ ಕ್ಷಣದ ಎಲ್ಲಾ ಶೋಷಿತ ಸಮುದಾಯಗಳ ನಾಯಕರು ದಯವಿಟ್ಟು ಗಂಭೀರವಾಗಿ ಯೋಚಿಸಿ. ಒಳ ಮೀಸಲಾತಿ ಖಂಡಿತವಾಗಲೂ ನ್ಯಾಯಯುತವಾದ ಬೇಡಿಕೆ. ಇಂದಲ್ಲ ನಾಳೆ ಬಹುಶಃ ಇನ್ನೇನು ಕೆಲವೇ ತಿಂಗಳುಗಳಲ್ಲಿ ಅದು ಜಾರಿಯಾಗಬಹುದು. ಅದಕ್ಕಾಗಿ ಹೋರಾಟ ನಿರಂತರವಾಗಿರಲಿ….. ಅದರಿಂದ ಅಂತಹ ಬಹುದೊಡ್ಡ ಕ್ರಾಂತಿಕಾರಕ ಬದಲಾವಣೆ ಏನು ಸಾಧ್ಯವಾಗುವುದಿಲ್ಲ. ಒಂದಷ್ಟು ಜನರಿಗೆ ಅದರಲ್ಲೂ ಇಲ್ಲಿಯವರೆಗೂ ಮೀಸಲಾತಿ ಮುಟ್ಟಲಾಗದ ಅರ್ಹರಿಗೆ ಸ್ವಲ್ಪಮಟ್ಟಿಗೆ ತಲುಪಬಹುದು. ಈಗಾಗಲೇ ಖಾಸಗಿಕರಣ ಮತ್ತು ಕಾರ್ಪೊರೇಟ್…

Read More

ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ…….

ವಿಜಯ ದರ್ಪಣ ನ್ಯೂಸ್….. ರಂಜಾನ್, ಶಾಂತಿ, ಭಾವೈಕ್ಯತೆ, ಹಿಂಸೆ ಇತ್ಯಾದಿ ಆರೋಪಗಳ ಸುತ್ತಾ……. ಜಗತ್ತಿನ ಎರಡನೆಯ ಅತಿ ದೊಡ್ಡ ಜನಸಂಖ್ಯೆ ಹೊಂದಿರುವ ಸಮುದಾಯ ಮುಸ್ಲಿಮರದು. ಸ್ವಲ್ಪ ಯುರೋಪ್ ಮತ್ತು ಹೆಚ್ಚಾಗಿ ಏಷ್ಯಾದ ಮಧ್ಯಪ್ರಾಚ್ಯದಲ್ಲಿ ನೆಲೆಸಿರುವ ಮೂಲ ನಿವಾಸಿಗಳು, ಸೌದಿ ಅರೇಬಿಯಾದ ಮೆಕ್ಕಾವನ್ನು ಧಾರ್ಮಿಕ ಕೇಂದ್ರವಾಗಿ ಇಡೀ ಜಗತ್ತಿನಾದ್ಯಂತ ಪ್ರಸರಿಸಿದ್ದಾರೆ. ಕ್ರಿಶ್ಚಿಯನ್, ಮುಸ್ಲಿಂ, ಬೌದ್ಧ, ಹಿಂದೂಗಳು ಜನಸಂಖ್ಯೆಯ ಆಧಾರದ ಮೇಲೆ ಅತಿ ಹೆಚ್ಚು ಸಂಖ್ಯೆಯಲ್ಲಿ ಈ ಭೂಮಿಯ ಮೇಲೆ ವಾಸಿಸುತ್ತಿದ್ದಾರೆ. ಮುಸ್ಲಿಂ ಸಮುದಾಯದ ಅತ್ಯಂತ ಮಹತ್ವದ ಹಬ್ಬ ರಂಜಾನ್….

Read More

ನಿಮ್ಮ ವಾರ್ಷಿಕ ಭವಿಷ್ಯ……

ವಿಜಯ ದರ್ಪಣ ನ್ಯೂಸ್… ನಿಮ್ಮ ವಾರ್ಷಿಕ ಭವಿಷ್ಯ…… ಯಾವುದೇ ರಾಶಿಯವರಾಗಿದ್ದರೂ, ಮನುಷ್ಯರಾಗಿರುವವರಿಗೆ ಮಾತ್ರ…….. ಇಂದು ಮಾರ್ಚ್ 30, 2025/2026 ರವರೆಗೆ ಇಂದಿನ ಯುಗಾದಿಯಿಂದ ಪ್ರಾರಂಭವಾಗುವ ಹೊಸ ಸಂವತ್ಸರದ ವಾರ್ಷಿಕ ಭವಿಷ್ಯ… ಇದು ಎಲ್ಲಾ ಭಾರತೀಯರಿಗೂ, ಜಾತಿ ಮತ ಧರ್ಮ ಭಾಷೆ ಎಲ್ಲವೂ ಮೀರಿ ಅನ್ವಯವಾಗುತ್ತದೆ… ಮಾಧ್ಯಮಗಳಲ್ಲಿ ಅದರಲ್ಲೂ ಟೆಲಿವಿಷನ್ ಮತ್ತು ಪತ್ರಿಕಾ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರಾಶಿಯ ಜನರು ಮುಖ್ಯವಾಗಿ ತುಂಬಾ ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯ ಹೆಣ್ಣು ಮಕ್ಕಳು ತೀವ್ರ ಕುತೂಹಲದಿಂದ ತಮ್ಮ ತಮ್ಮ…

Read More

ಯುಗಾದಿ…..

ವಿಜಯ ದರ್ಪಣ ನ್ಯೂಸ್…. ಯುಗಾದಿ….. ” ಉಳ್ಳವರು ಶಿವಾಲಯ ಮಾಡುವರು, ನಾನೇನ ಮಾಡಲಿ ಬಡವನಯ್ಯ, ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ, ಕೂಡಲಸಂಗಮದೇವ ಕೇಳಯ್ಯ, ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ……..” ಎಂಬ ಬಸವಣ್ಣನವರ ವಚನದ ಸಾಲುಗಳನ್ನು ನೆನಪು ಮಾಡಿಕೊಳ್ಳುತ್ತಾ… “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ……” ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರ ಕವನದ ಸಾಲುಗಳನ್ನು ಗುನುಗುತ್ತಾ……. ಭಾರತದ ಪ್ರಾಕೃತಿಕ ಸಂಸ್ಕೃತಿಗೆ ಈ ವಸಂತ ಋತುವಿನ…

Read More

ಅಪಾಯ – ಎಚ್ಚರ – ಸ್ವಲ್ಪ ಜಾಗೃತರಾಗಿ……

ವಿಜಯ ದರ್ಪಣ ನ್ಯೂಸ್… ಅಪಾಯ – ಎಚ್ಚರ – ಸ್ವಲ್ಪ ಜಾಗೃತರಾಗಿ…… ಎಲ್ಲೆಲ್ಲೂ ರಮ್ಮಿ ಸರ್ಕಲ್, ಡ್ರೀಮ್ ಇಲೆವೆನ್ ಮುಂತಾದ ಜೂಜಾಟಗಳದೇ ಅಬ್ಬರ. ಬಸ್ಸು, ರೈಲು, ಯಾವುದೇ ನಿಲ್ದಾಣಗಳು, ಪಾರ್ಕ್, ಸೋಮಾರಿ ಕಟ್ಟೆಗಳಲ್ಲಿ ಸಾಕಷ್ಟು ಜನ ಈ ಬೆಟ್ಟಿಂಗ್ ದಂಧೆಯಲ್ಲಿ ಮುಳುಗಿ ಹೋಗಿದ್ದಾರೆ. ದೇಶದ ಅತ್ಯಂತ ಪ್ರಖ್ಯಾತ ಜನಪ್ರಿಯ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು ಈ ಬೆಟ್ಟಿಂಗ್ ದಂಧೆಯ ರೋಲ್ ಮಾಡೆಲ್ ಗಳಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ಈ ಜೂಜಿನಾಟದಿಂದ ಯಥೇಚ್ಛ ಹಣ ಹರಿದು ಬರುತ್ತಿದೆ. ಸಾಮಾನ್ಯ ಜನರ…

Read More