ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಅದ್ದೂರಿ ಮೆರವಣಿಗೆ
ವಿಜಯ ದರ್ಪಣ ನ್ಯೂಸ್…..
ಮೈಸೂರಿನಲ್ಲಿ ಹಿಂದೂ ಸಮಾಜೋತ್ಸವ ಅದ್ದೂರಿ ಮೆರವಣಿಗೆ

ತಾಂಡವಪುರ ಫೆಬ್ರವರಿ 3 ಮೈಸೂರಿನ ಲಕ್ಷ್ಮಿಪುರಂ ವಸತಿ ಶಂಕರ ಮಠ ಭಾಗದಲ್ಲಿ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿ ಸಂಭ್ರಮಿಸಿದರು.
ರಾಮಾನುಜ ರಸ್ತೆಯಲ್ಲಿರುವ ವೀರ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಕಂಸಾಳೆ ನಂದಿ ಕುಣಿತ, ಕಲಾತಂಡಗಳು ಪ್ರದರ್ಶನ ಗಮನ ಸೆಳೆಯಿತು, ನಂತರ ಶಂಕರ ಮಠದ ಶ್ರೀ ಸಚ್ಚಿದಾನಂದ ವಿಲಾಸ್ ನಲ್ಲಿ ಸಭಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಹೇಶ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲ್ ರಾಜ್ ಅರಸ್, ನಗರ ಪ್ರಧಾನ ಕಾರ್ಯದರ್ಶಿ ವಿ.ಸೋಮಸುಂದರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಜೈ.ಶಂಕರ್, ಜೈರಾಮ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವುಕುಮಾರ್, ಬಿ.ವಿ.ಮಂಜುನಾಥ್, ಎಂ.ಡಿ.ಪಾರ್ಥಸಾರಥಿ, ಪ್ರಮೀಳಾ ಭರತ್, ಜಗದೀಶ್, ಬಿಜೆಪಿ ಮುಖಂಡರಾದ ಪ್ರದೀಪ್ ಕುಮಾರ್, ಜೋಗಿ ಮಂಜು, ರಾಕೇಶ್, ನಿಶಾಂತ್, ಟಿ.ಎಸ್.ಅರುಣ್, ಟಿ.ಪಿ.ಮಧುಸೂಧನ್, ಕಿಶೋರ್, ದೀಪಕ್, ಬದರಿ, ವಿ.ರವಿ, ಜ್ಯೋತಿ, ರೇಖಾ, ರವಿಶಂಕರ್, ನಾರಾಯಣ್ ಇನ್ನಿತರರು ಉಪಸ್ಥಿತರಿದ್ದರು.
