--Ads--

ಪಾಲೀಶ್ ಮಾಡಿಕೊಡುವ ನೆಪದಲ್ಲಿ, 30 ಗ್ರಾಂ ಚಿನ್ನ ಕದ್ದ ಕಳ್ಳರು.

On: March 21, 2026 12:38 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್……

ಪಾಲೀಶ್ ಮಾಡಿಕೊಡುವ ನೆಪದಲ್ಲಿ, 30 ಗ್ರಾಂ ಚಿನ್ನ ಕದ್ದ ಕಳ್ಳರು.

ವಿಜಯಪುರ: ಪಾಲೀಶ್ ಮಾಡಿಕೊಡುವ ನೆಪದಲ್ಲಿ, ಬಂದಿದ್ದ ಕಳ್ಳರು, ಪಾತ್ರೆಗಳು, ಬೆಳ್ಳಿ ಚೈನುಗಳನ್ನು ಪಾಲೀಶ್ ಮಾಡಿಕೊಟ್ಟು, ಪಾಲೀಶ್ ಗಾಗಿ ಕೊಟ್ಟ 30 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಸಿದುಕೊಂಡು ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಪಟ್ಟಣದ 17 ನೇ ವಾರ್ಡಿನ ಪಂಚಮುಖಿ ಗಣಪತಿ ದೇವಾಲಯದ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯದ ಮನೆಯೊಂದಕ್ಕೆ ಬಂದಿರುವ ಕಳ್ಳರು, ಮೊದಲಿಗೆ, ನಿಮ್ಮ ಮನೆಯಲ್ಲಿನ ಪಾತ್ರೆಗಳನ್ನು ಸುಲಭವಾಗಿ ತೊಳೆಯುವ ಪೌಡರ್ ನಮ್ಮಲ್ಲಿದೆ. ಪರೀಕ್ಷಿಸಲು, ಯಾವುದಾದರೂ ಪಾತ್ರೆ ಕೊಡಿ ಎಂದು ಕೇಳಿದ್ದಾರೆ.

ಅವರ ಮಾತನ್ನು ನಂಬಿ ಪಾತ್ರೆಯನ್ನು ಕೊಟ್ಟ ಮಹಿಳೆ, ಪಾತ್ರೆಯನ್ನು ಶುಭ್ರವಾಗಿ ತೊಳೆದಿರುವುದನ್ನು ಕಂಡು, ತನ್ನ ಕಾಲಿನಲ್ಲಿದ್ದ ಬೆಳ್ಳಿ ಚೈನುಗಳು ಕೊಟ್ಟು, ಪಾಲೀಶ್ ಮಾಡಿಸಿದ್ದಾರೆ. ನಂತರ, ನಮ್ಮಲ್ಲಿ ಬಂಗಾರದ ಒಡವೆಗಳನ್ನೂ ಪಾಲೀಶ್ ಮಾಡುವ ಪೌಡರ್ ಇದೆ ಎಂದು ಹೇಳಿ, ಚೈನ್, ಡಾಲರ್, ಒಂದು ಜೊತೆ ಓಲೆ, ಜುಮುಕಿ ಒಟ್ಟು 30 ಗ್ರಾಂ ತೆಗೆದುಕೊಂಡು, ಪಾಲೀಶ್ ಮಾಡಿರುವ ನೆಪದಲ್ಲಿ, ಕವರೊಂದನ್ನು ಮಹಿಳೆಗೆ ಕೊಟ್ಟು, ಇದನ್ನು 5 ನಿಮಿಷ ನಂತರ ಹೊರಗೆ ತೆಗೆಯಿರಿ, ನಾವು ಮುಂದಿನ ವಾರ ಬರುತ್ತೇವೆ ಎಂದು ಹೇಳಿ ಹೋಗಿದ್ದಾರೆ.

ಮಹಿಳೆ, 5 ನಿಮಿಷದ ನಂತರ ಅವರು ಕೊಟ್ಟಿದ್ದ ಕವರ್ ತೆರೆದು ನೋಡಿದಾಗ, ಅದರಲ್ಲಿ ಪೌಡರ್ ತುಂಬಿದ್ದ ಒಂದು ಡಬ್ಬಿ ಇರುವುದನ್ನು ಕಂಡು, ಚೀರಾಡಿದ್ದಾರೆ. ತಕ್ಷಣ ಅಲ್ಲಿಗೆ ಬಂದ, ಸ್ಥಳೀಯರು, ತಕ್ಷಣ 112 ಗೆ ಕರೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ, ಕಳ್ಳರು, ಪರಾರಿಯಾಗಿದ್ದಾರೆ. ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಒಡವೆಗಳನ್ನು ಪಾಲೀಶ್ ಮಾಡಿಸಲು ಹೋಗಿ, ಚಿನ್ನಾಭರಣ ಕಳೆದುಕೊಂಡಿರುವ ಮಹಿಳೆ, ಒಡವೆಗಾಗಿ ಕಣ್ಣೀರಿಡುತ್ತಿದ್ದಾರೆ.

ವಿಜಯಪುರ ಪೊಲೀಸರು, ಸ್ಥಳಕ್ಕೆ ಬಂದು, ಘಟನೆಯ ಕುರಿತು, ಮಹಿಳೆಯರಿಂದ ಮಾಹಿತಿ ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡು, ಕಳ್ಳರಿಗಾಗಿ ಹುಡುಕಾಡುತ್ತಿದ್ದಾರೆ.

 

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ನಗದಿತ ಅವಧಿಯೊಳಗೆ ಬಡವರಿಗೆ ಸೂರು, ಸೈಟ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಿ: ಸಚಿವ ಕೆ.ಹೆಚ್ ಮುನಿಯಪ್ಪ

ಹೊಸಕೋಟೆಯಲ್ಲಿ ಮತದಾರರ ಜಾಗೃತಿ ಮ್ಯಾರಾಥಾನ್ ಹಾಗೂ SIR ವಿಶೇಷ ಆಂದೋಲನಕ್ಕೆ ಜಿ. ಪಂ. ಸಿಇಒ ಡಾ.ವಾಸಂತಿ ಅಮರ್ ಚಾಲನೆ

ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಶ್ರೀ ವಿಶ್ವಕರ್ಮ ಜಯಂತಿ ಆಚರಣೆ

ತಾವರೆಕೆರೆಯಲ್ಲಿ ಅದ್ಧೂರಿ ಗಣೇಶೋತ್ಸವ ಜೈ ಭೀಮ್ ವಿನಾಯಕ ಗೆಳೆಯರ ಬಳಗದಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ : ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು

ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗುವುದನ್ನು ಖಚಿತಪಡಿಸಿಕೊಳ್ಳಲು ವ್ಯಾಪಕ ಕ್ರಮಗಳನ್ನು ಕೈಗೊಳ್ಳಲಾಗಿದೆ: ಮತದಾರರ ನೋಂದಣಾಧಿಕಾರಿ (ERO) 

ಪ್ರಜಾಪ್ರಭುತ್ವ ಪ್ರತಿಯೊಬ್ಬರ ಆಶಯಗಳಿಗೆ ಧ್ವನಿ: ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ