ವಿಜಯ ದರ್ಪಣ ನ್ಯೂಸ್…..
ನಾಯಕ ಸಮುದಾಯದ ವಿದ್ಯಾರ್ಥಿಗಳಿಂದ ಪುರಸ್ಕಾರಕ್ಕೆ ಆಹ್ವಾನ

ತಾಂಡವಪುರ ಜೂನ್ 10 ಮೈಸೂರು ತಾಲ್ಲೂಕು ನಾಯಕರ ಸಂಘವು ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಿದೆ ಎಂದು ಸಂಘದ ಅಧ್ಯಕ್ಷ ಉದ್ಬೂರು ಮಹದೇವಸ್ವಾಮಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತ ಸಂಘದ ಭವನದಲ್ಲಿ ಇಂದು ಸುದ್ದಿಗಾರರೊಡನೆ ಮಾತನಾಡಿ, ೨೦೨೫- ೨೬ನೇ ಸಾಲಿನ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಶೇ. ೮೦ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು ಜೂನ್ ೧೮ರೊಳಗೆ ಇಲ್ಲಿನ ಸರಸ್ವತಿಪುರಂನ ನಾಯಕರ ವಿದ್ಯಾರ್ಥಿ ನಿಲಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು ಎಂದರು.
ಅರ್ಹ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ, ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು. ಆಸಕ್ತರು ಅರ್ಜಿ ಹಾಗೂ ಮಾಹಿತಿಗೆ ಮೊ.ಸಂ.೮೬೬೦೪ ೩೧೮೪೨, ೯೯೪೫೯ ೦೧೯೧೨ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು. ಸಂಘದ ಪ್ರಧಾನ ಕಾರ್ಯದರ್ಶ ಕಡಕೊಳ ಕುಮಾರಸ್ವಾಮಿ, ಉಪಾಧ್ಯಕ್ಷ ರಮ್ಮನಹಳ್ಳಿ ವೆಂಕಟಯ್ಯ, ಖಜಾಂಚಿ ಮರಿಸ್ವಾಮಿ ನಾಯಕ, ನಿರ್ದೇಶಕ ರಮ್ಮನಹಳ್ಳಿ ರಾಜಶೇಖರ್, ಮುಖಂಡ ಕ್ಯಾತಮಾರನಹಳ್ಳಿ ವೆಂಕಟೇಶ್ ಮುಂತಾದವರು ಹಾಜರಿದ್ದರು.








