ವಿಜಯ ದರ್ಪಣ ನ್ಯೂಸ್….
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಕಾ ಭವನ ನಿರ್ಮಾಣಕ್ಕೆ ಅನುದಾನ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸನ್ಮಾನ

ತಾಂಡವಪುರ ಜುಲೈ 25 ಮೈಸೂರು ಜಿಲ್ಲಾ ಪತ್ರಕರ್ತರ ನಿಯೋಗ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಅಧಿಕಾರದ ಅವಧಿಯಲ್ಲಿ ಪತ್ರಿಕಾ ಭವನದ ನಿರ್ಮಾಣಕ್ಕೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದ ತಿಳಿಸಿ ಗೌರವ ಸಲ್ಲಿಸಿತು.
ಮಾಜಿ ಸಚಿವ ಡಾ. ಸುಧಾಕರ್, ನಿಕಟಪೂರ್ವ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಶಾಸಕ ರಿಜ್ವಾನ್ ಅರ್ಷದ್ , ಪತ್ರಕರ್ತರಾದ ಕೆ.ಪಿ. ನಾಗರಾಜ್, ದಿಲೀಪ್ ಚೌಡಹಳ್ಳಿ, ವಿನೋದ್ ಪಡುವಾರಹಳ್ಳಿ, ಎಂ.ಎನ್. ಸ್ವರೂಪ್, ವಕೀಲ ಬಿ.ಎಸ್. ಪೂರ್ಣೇಶ್, ಉದ್ಯಮಿಗಳಾದ ಅಜಿತ್, ಎಂ.ಕೆ. ಜಗದೀಶ್ ಗೌಡ ಹಾಜರಿದ್ದರು.











