--Ads--

ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರಿಗೆ ಸಲ್ಲುತ್ತದೆ

On: July 3, 2026 12:16 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್….

ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರಿಗೆ ಸಲ್ಲುತ್ತದೆ

 

ಹಾರೋಹಳ್ಳಿ : ಚೀಲಗಳಲ್ಲಿ ತುಂಬಿದ್ದ ತಾಳೆಗರಿಯ ವಚನ ಸಾಹಿತ್ಯವನ್ನು ಜಗತ್ತಿಗೆ ಪಸರಿಸಿದ ಕೀರ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ವಿಕಾಸರ ರಂಗದ ಜಿಲ್ಲಾಧ್ಯಕ್ಷ ಆರ್ ವಿ ನಾರಾಯಣ ತಿಳಿಸಿದರು.
ತಾಲೂಕಿನ ಮರಳವಾಡಿ ಹೋಬಳಿಯ ಪಡುವಣಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನಕಪುರ ಹಾಗೂ ಕರ್ನಾಟಕ ವಿಕಾಸರಂಗ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಚನ ಸಾಹಿತ್ಯದ ಪಿತಾಮಹ ಡಾ. ಫ. ಗು.ಹಳಕಟ್ಟಿ ರವರ ಜನ್ಮದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕಾಗದಗಳಿಲ್ಲದ ಕಾಲದಲ್ಲಿ ತಾಳೆಗರಿಗಳಲ್ಲಿ ವಚನ ಸಾಹಿತ್ಯಗಳನ್ನು ಬರೆಯುತ್ತಿದ್ದರು.
ಆ ತಾಳೆಗರಿಯ ವಚನ ಸಾಹಿತ್ಯವನ್ನು ಚೀಲಗಳಲ್ಲಿ ತುಂಬಿದ್ದರು ಕೆಲವೇ ಕೆಲವು ವಚನಕಾರರ ಹೆಸರು ಮಾತ್ರವೇ ಜನರಿಗೆ ತಿಳಿದಿತ್ತು ಆದರೆ ಹಳಕಟ್ಟಿ ರವರು ಸುಮಾರು 250 ವಚನಕಾರರನ್ನು ಜಗತ್ತಿಗೆ ಪರಿಚಯಿಸಿದವರು ಎಂದು ಹೇಳಿದರು.
ಹಳಗನ್ನಡದಲ್ಲಿದ್ದ ವಚನಗಳನ್ನು ಜನರ ಆಡು ಭಾಷೆಯಲ್ಲಿ ತಂದವರು ಜೊತೆಗೆ ಬಡವರಿಗೆ ಶಿಕ್ಷಣವನ್ನು ನೀಡಲು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದವರು ಅವರ ಸಾಧನೆ ಬದುಕು ನಾವೆಲ್ಲರೂ ಅನುಸರಿಸಬೇಕು ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಸಾಧಿಸುವ ಛಲವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ ನಾವು ಕನ್ನಡ ಭಾಷೆಗೆ ಮೊದಲ ಆದ್ಯತೆ ಕೊಡಬೇಕು ಮಾತೃಭಾಷೆಗೆ ಗೌರವವನ್ನು ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಕನ್ನಡತನವನ್ನು ಉಳಿಸಬೇಕು ಬೇರೆ ಭಾಷೆಯವರಿಗೆ ಕನ್ನಡ ಕಲಿಸಲು ನಾವು ಪ್ರೇರೇಪಣೆಯಾಗಬೇಕು ಎಂದು ಹೇಳಿದರು.
ವಚನ ಸಾಹಿತ್ಯದ ಪಿತಾಮಹ ಹಳಕಟ್ಟಿರವರು ಕನ್ನಡ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರ ವಕೀಲ ವೃತ್ತಿಯಲ್ಲಿ ಇದ್ದುಕೊಂಡು ಏನಾದರೂ ಸಾಧನೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ವಚನಗಳ ಸಾಹಿತ್ಯವನ್ನು ಪರಿಚಯಿಸಿ ನೀಡಿದ್ದು ಜನಮಾನಸದಲ್ಲಿದ್ದಾರೆ ಎಂದು ಹೇಳಿದರು.
ಪಡವಣಗೆರೆ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿ ಎಸ್ ರಾಜು ಮಾತನಾಡಿ ವಚನ ಸಾಹಿತ್ಯದ ಪಿತಾಮಹರಾದ ಡಾಕ್ಟರ್ ಫಗು ಹಳಕಟ್ಟಿ ರವರು ಒಬ್ಬ ವ್ಯಕ್ತಿಯಲ್ಲ ಅವರ ಒಂದು ಶಕ್ತಿ ವಚನ ಸಾಹಿತ್ಯದಲ್ಲಿ ಕ್ರಾಂತಿಯನ್ನು ಮಾಡಿ ಬದಲಾವಣೆ ತಂದವರು ಜಾತಿಯ ಉತ್ತುಂಗ ಕಾಲದಲ್ಲಿದ್ದ ಸಂದರ್ಭದಲ್ಲಿ ಬಸವಣ್ಣನವರು ಜಾತಿಯತೆಯನ್ನು ತೊಡೆದು ಹಾಕಲು ಎಲ್ಲರೂ ಒಂದೆಡೆ ಸೇರಿ ವಚನ ಸಾಹಿತ್ಯದ ಮೂಲಕ ಜನ ಸಾಮಾನ್ಯರಿಗೆ ಮೌಲ್ಯಗಳನ್ನು ರೂಢಿಸಲು ಮಾನವೀಯತೆ ಮೆರೆಯಲು ಸಮಾಜಮುಖಿ ಕೆಲಸಗಳ ಮೂಲಕ ಕ್ರಾಂತಿಯನ್ನು ಮಾಡಿದ ಅವರ ಸಾಹಿತ್ಯವನ್ನು ಜನರಿಗೆ ತಲುಪಿಸಿ ಮನೆಮಾತಾದವರು ಎಂದು ಹೇಳಿದರು.
ಪಿ ಹೊಸಳ್ಳಿ ಗ್ರಾಮ ಪಂಚಾಯತಿ ಪಿಡಿಒ ಭಾಗೀರಥಿ, ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ,ಕರ ವಸೂಲಿಗಾರ ಮಲ್ಲಪ್ಪ, ಶಿಕ್ಷಕರಾದ ಪ್ರದೀಪ್, ಸಯ್ಯದ್ ಜುಬೇರ್, ಶಿವರಾಜು, ಸಂಗಪ್ಪ ಹಿರೇಕುರುಬರ ಪ್ರತೀಪ್ ರಾವ್, ಲಕ್ಷ್ಮಿ , ಆರ್  ವಿ ನಾರಾಯಣ್, ಸಂತೋಷ ರಾವ್, ರಾಜು ಸಿ ಎಸ್, ಇತರರು ಇದ್ದರು.

WhatsApp

Join Now

Telegram

Join Now

Instagram

Join Now