ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವ ನಮಗೆ ಸ್ಫೂರ್ತಿ

ವಿಜಯ ದರ್ಪಣ ನ್ಯೂಸ್…..

ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವ ನಮಗೆ ಸ್ಫೂರ್ತಿ

ಶಿಡ್ಲಘಟ್ಟ : ನಮ್ಮ ನಟ ಮೆಗಾಸ್ಟಾರ್ ಚಿರಂಜೀವಿ ಹಾಗೂ ನಟ ಪವನ್ ಕಲ್ಯಾಣ್ ಅವರ ಸಮಾಜಮುಖಿ ಚಿಂತನೆ ಮತ್ತು ಸೇವಾ ಮನೋಭಾವ ನಮಗೆ ಸ್ಫೂರ್ತಿ ಮುಂದೆಯೂ ಇಂತಹ ಉತ್ತಮ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತೇವೆ ಎಂದು
ಅಖಿಲ ಭಾರತ  ಚಿರಂಜೀವಿ ಯುವತ  ಸಂಘದ ರಾಷ್ಟ್ರೀಯ ಅಧ್ಯಕ್ಷ ಸತ್ಯನಾರಾಯಣಮಹೇಶ್ ತಿಳಿಸಿದರು.

ನಗರದ ಅಶೋಕ ರಸ್ತೆಯ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ ಆವರಣದಲ್ಲಿ ಅಖಿಲ ಕರ್ನಾಟಕ  ಚಿರಂಜೀವಿ ಯುವತ ಮತ್ತು ಅಖಿಲ ಕರ್ನಾಟಕ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘ ಶಿಡ್ಲಘಟ್ಟ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ವತಿಯಿಂದ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಅಭಿಮಾನಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸುಮಾರು 50 ಯೂನಿಟ್‌ಗಿಂತ ಹೆಚ್ಚು ರಕ್ತವನ್ನು ದಾನ ಮಾಡಿ ಮಾನವೀಯತೆ ಮೆರೆದರು, ರಕ್ತದಾನದಿಂದ ಅನೇಕ ರೋಗಿಗಳಿಗೆ ಜೀವದಾನ ಮಾಡುವ ಅವಕಾಶವನ್ನು ಸಂಘ ಕಲ್ಪಿಸಿದೆ ಎಂದರು.

ಚಿರಂಜೀವಿ ಅಭಿಮಾನಿಗಳ ನೇತೃತ್ವದಲ್ಲಿ ಶಿಡ್ಲಘಟ್ಟ ಸೇರಿ ದೇಶದಾದ್ಯಂತ ಈಗಾಗಲೇ 73 ಕ್ಕೂ ಹೆಚ್ಚು ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ ಹೀರೋಗಳ ಜನ್ಮದಿನ ಸಂದರ್ಭ ಮಾತ್ರವಲ್ಲದೆ, ಇತ್ತೀಚಿಗೆ ವಿಶ್ವ ರಕ್ತದಾನ ದಿನದ ಮಹತ್ವವನ್ನು ಜನರಿಗೆ ತಿಳಿಸಲು ಅಭಿಮಾನಿಗಳು ಮುಂದಾಗಿದ್ದು ಶಿಡ್ಲಘಟ್ಟದಲ್ಲಿಯೇ 53 ಕ್ಕೂ ಹೆಚ್ಚು ಯೂನಿಟ್ ರಕ್ತ ಸಂಗ್ರಹವಾಗಿದೆ 35–40 ವರ್ಷಗಳಿಂದ ಚಿರಂಜೀವಿ ಅವರ ಸಮಾಜಮುಖಿ ಚಟುವಟಿಕೆಗಳಿಂದ ನಮಗೆ ಪ್ರೇರಣೆ ದೊರಕಿದೆ. ಅವರ ಸೇವಾ ಮನೋಭಾವನೆ ನಮಗೆ ದಾರಿದೀಪವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಈ ಸೇವಾ ಚಟುವಟಿಕೆಯನ್ನು ಮುಂದುವರಿಸಲು ಚಿರಂಜೀವಿ ವಿಡಿಯೋ ಸಂದೇಶ ಕಳುಹಿಸಿ ರಕ್ತದಾನಿಗಳಿಗೂ ಸಂಘಟಕರಿಗೂ ಧನ್ಯವಾದ ಸಲ್ಲಿಸಿದ್ದಾರೆ ಎಂದು ಹೇಳಿದರು.

ಶಿಬಿರದಲ್ಲಿ ಸಂಘದ ಸದಸ್ಯರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಇದೇ ವೇಳೆ ಸ್ವಯಂಪ್ರೇರಿತವಾಗಿ  ರಕ್ತದಾನ ಮಾಡಿದ ಎಲ್ಲರಿಗೆ ಸಂಘದ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಚಿರಂಜೀವಿ ಯುವತ ತಾಲೂಕು ಅಧ್ಯಕ್ಷ ಕೆ.ನಾರಾಯಣಸ್ವಾಮಿ, ರಾಜ್ಯ ಜಂಟಿ ಕಾರ್ಯದರ್ಶಿ ದಿನೇಶ್ ಬಾಬು, ಅಖಿಲ ಕರ್ನಾಟಕ ಪವನ್ ಕಲ್ಯಾಣ್ ಅಭಿಮಾನಿಗಳ ಸೇವಾ ಸಂಘದ ಜಿಲ್ಲಾಧ್ಯಕ್ಷ ಬುಜ್ಜಿ ನಾಯಕ್, ಜಿಲ್ಲಾ ಸದಸ್ಯ ರಾಧಾಕೃಷ್ಣ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಾಮದಾಸ್, ಗಜೇಂದ್ರ ನಾಯಕ್, ವೆಂಕಟರಮಣ, ರವಿಚಂದ್ರ, ವೆಂಕಟರೆಡ್ಡಿ ಹಾಗು ಹಲವಾರು ಅಭಿಮಾನಿಗಳು ಪಾಲ್ಗೊಂಡಿದ್ದರು.