ಲಖನೌನ ವಿವಿಯೊಂದಿಗೆ ಜೆಎಸ್‌ಎಸ್‌ ಒಂಡಬಂಡಿಕೆ

ವಿಜಯ ದರ್ಪಣ ನ್ಯೂಸ್….

ಲಖನೌನ ವಿವಿಯೊಂದಿಗೆ ಜೆಎಸ್‌ಎಸ್‌ ಒಂಡಬಂಡಿಕೆ

ತಾಂಡವಪುರ ಫೆಬ್ರುವರಿ 24: ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯು ಲಖನೌನ ಸಿಎಸ್‌ಐಆರ್‌ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟಾಕ್ಸಿಕಾಲಜಿ ರಿಸರ್ಚ್ ಸಂಸ್ಥೆಯೊಂದಿಗೆ ಅನುವಾದಾತ್ಮಕ ವಿಷಶಾಸ್ತ್ರ, ಪರಿಸರ ಆರೋಗ್ಯ ಹಾಗೂ ಸಂಬಂಧಿತ ಜೀವವಿಜ್ಞಾನ ಕ್ಷೇತ್ರಗಳಲ್ಲಿ ಸಹಯೋಗಿ ಸಂಶೋಧನೆಯನ್ನು ಬಲಪಡಿಸಲು ಒಪ್ಪಂದ ಪತ್ರಕ್ಕೆ ಸಹಿ ಹಾಕಿತು.

ಈ ಒಪ್ಪಂದವು ಸಾರ್ವಜನಿಕ ಆರೋಗ್ಯ, ಸುರಕ್ಷತೆ ಹಾಗೂ ಶಾಶ್ವತತೆಯ ರಾಷ್ಟ್ರೀಯ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಸಂಯುಕ್ತ ಸಂಶೋಧನೆ, ಸಾಮರ್ಥ್ಯ ವೃದ್ಧಿ, ಅಧ್ಯಾಪಕ-ವಿದ್ಯಾರ್ಥಿ ವಿನಿಮಯ ಹಾಗೂ ನವೋದ್ಯಮ ಆಧಾರಿತ ಫಲಿತಾಂಶಗಳನ್ನು ಉತ್ತೇಜಿಸುವುದನ್ನು ಉದ್ದೇಶಿಸಿದೆ.

ಈ ಸಹಯೋಗವು ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ಕುಲಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದದೊಂದಿಗೆ ಹಾಗೂ ಪ್ರೋ ಚಾನ್ಸಲರ್ ಪ್ರೊ.ಬಿ.ಸುರೇಶ್ ಮಾರ್ಗದರ್ಶನದಲ್ಲಿ ಅಧಿಕೃತವಾಗಿ ರೂಪುಗೊಂಡಿತು.

ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿ ರಿಜಿಸ್ಟ್ರಾರ್ ಡಾ.ಬಿ.ಮಂಜುನಾಥ ಸ್ವಾಗತಿಸಿದರು. ಕುಲಪತಿ ಡಾ.ಹೆಚ್.ಬಸವನಗೌಡಪ್ಪ ಪ್ರಾರಂಭಿಕವಾಗಿ ಮಾತನಾಡಿದರು. ಸಿಎಸ್‌ಐಆರ್‌, ಐಐಟಿಆರ್‌ ನಿರ್ದೇಶಕ ಡಾ.ಭಾಸ್ಕರ್ ನಾರಾಯಣ ಸಮಾಜಮುಖಿ ಸಂಶೋಧನೆ ಬಗ್ಗೆ ಮಾತನಾಡಿದರು.

ಡಾ.ಪ್ರಶಾಂತ್, ಡೀನ್‌ ಎಂ.ವಿಶ್ವನಾಥ್, ಡಾ.ರವಿರಾಮ್ ಕ್ರಿಷ್ಟಿಪತಿ, ಡಾ.ನಂದಿನಿ ಶೆಟ್ಟಿ, ಡಾ.ಅನ್ಬರಸು ಕಣ್ಣನ್, ಡಾ.ಡಿ.ದೇವಾನಂದ, ಅಸಿಸ್ಟಂಟ್ ಡೀನ್ ಡಾ.ಸಿ.ಸರವಣ ಬಾಬು, ಸೆಂಟರ್ ಫಾರ್ ಎಕ್ಸ್‌ಪೆರಿಮೆಂಟಲ್ ಫಾರ್ಮಕಾಲಜಿ ಅಂಡ್ ಟಾಕ್ಸಿಕಾಲಜಿ ನಿರ್ದೇಶಕ ಡಾ.ವಿ.ಬಾಲಮುರಳಿಧರ, ಡೆಪ್ಯುಟಿ ಡೀನ್ ಡಾ.ಭಾಸ್ಕರ್ ನಾರಾಯಣ ಇನ್ನಿತರರು ಉಪಸ್ಥಿತರಿದ್ದರು.