--Ads--

ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ಶಾಲಾ ಸಂಸತ್ ಚುನಾವಣೆ

On: July 11, 2026 5:06 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್,….

ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳಿಂದ ಶಾಲಾ ಸಂಸತ್ ಚುನಾವಣೆ

ಶಿಡ್ಲಘಟ್ಟ : ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ತೊಡಗಿಸುವುದರಿಂದ ಮಕ್ಕಳಿಗೆ ಹೆಚ್ಚಿನ ಅರಿವು ಮೂಡಿರುವುದರಿಂದ ಪಠ್ಯದ ಜತೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವುದು ನಮ್ಮ ಉದ್ದೇಶ
ಮುಖ್ಯಶಿಕ್ಷಕ ಎಚ್‌.ಎಂ.ಭಾಸ್ಕರ್ ತಿಳಿಸಿದರು.

ತಾಲ್ಲೂಕಿನ ಮೇಲೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಶಾಲಾ ಸಂಸತ್ ಚುನಾವಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಧಾನಸಭೆ, ವಿಧಾನಪರಿಷತ್‌, ಲೋಕಸಭೆ ಹಾಗೂ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆ, ಒಂದು ಮತದ ಮಹತ್ವ, ಮತದಾನ, ಮತ ಎಣಿಕೆ, ಸಚಿವ ಸಂಪುಟ ರಚನೆ ಮತ್ತು ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಮಾಹಿತಿ ನೀಡಲಾಗಿದೆ ,ವಿದ್ಯಾರ್ಥಿಗಳು ಪ್ರಣಾಳಿಕೆ ಮಂಡಿಸಿ, ಮತ ಯಾಚಿಸಿ, ಭಾಷಣ ಮಾಡುವ ಮೂಲಕ ಆತ್ಮವಿಶ್ವಾಸ ಬೆಳೆಸಿಕೊಂಡಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆ, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶದಿಂದ ಚುನಾವಣೆ ಆಯೋಜಿಸಲಾಗಿತ್ತು ಬೆಳಿಗ್ಗೆ 8.30ರಿಂದ 10 ಗಂಟೆಯವರೆಗೆ ಮತದಾನ ನಡೆಯಿತು. 8ರಿಂದ 10ನೇ ತರಗತಿಯ 170 ವಿದ್ಯಾರ್ಥಿಗಳು ಆರು ಕ್ಷೇತ್ರಗಳ 12 ಅಭ್ಯರ್ಥಿಗಳ ಆಯ್ಕೆಗಾಗಿ ಮತ ಚಲಾಯಿಸಿದರು.

ಪ್ರಧಾನಮಂತ್ರಿ, ಶಿಕ್ಷಣ, ಕ್ರೀಡಾ ಹಾಗೂ ಸಾಂಸ್ಕೃತಿಕ ಸಚಿವ ಸ್ಥಾನಗಳಿಗೆ ಸ್ಪರ್ಧೆ ನಡೆದಿದ್ದು, ನೈಜ ಚುನಾವಣೆಯ ಮಾದರಿಯಲ್ಲಿ ಇವಿಎಂ ಮೂಲಕ ಮತದಾನ ವ್ಯವಸ್ಥೆ ಮಾಡಲಾಗಿತ್ತು, ಮತದಾರರಿಗೆ ಶಾಯಿ ಗುರುತು ಹಾಕಲಾಗಿದ್ದು, ಶಿಕ್ಷಕರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದರು.

ಎಂಟನೇ ತರಗತಿಯ ವಿದ್ಯಾರ್ಥಿನಿ ಎಂ.ಪ್ರಿಯಾ ಮಾತನಾಡಿ,ಮೊದಲ ಬಾರಿಗೆ ಮತ ಚಲಾಯಿಸಿದ್ದು ಸಂತಸ ತಂದಿದೆ ಜನಪ್ರತಿನಿಧಿಗಳನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಗೆ ಆಯ್ಕೆ ಮಾಡುತ್ತಾರೆ ಎಂಬುದನ್ನು ಶಿಕ್ಷಕರು ತಿಳಿಸಿಕೊಟ್ಟರು ಮತದಾನ ಹೊಸ ಅನುಭವ ನೀಡಿತು ಎಂದರು.

ಈ ವೇಳೆ ಚುನಾವಣೆಯ ಬಳಿಕ ಶಾಲಾ ಸಂಸತ್ತಿನ ಪದಾಧಿಕಾರಿಗಳನ್ನು ಘೋಷಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಆರ್.ಕ್ರಿಷ್ಕ್ರಿತಾ ,ಸ್ಪೀಕ‌ರ್, ಎಂ.ಎ.ಚೇತನ್ ಕುಮಾರ್ ಪ್ರಧಾನಮಂತ್ರಿಯಾಗಿ, ಚಂದನಾ ಗೃಹ ಸಚಿವೆ, ಭಾವನಾ ತೋಟಗಾರಿಕೆ ಸಚಿವೆ, ಮೇಘನಾ ಶಿಕ್ಷಣ ಸಚಿವೆ, ಹೇಮಶ್ರೀ ಪರಿಸರ ಸಚಿವೆ, ನಂದೀಶ್‌ ಕಾನೂನು
ಸಚಿವ, ಘನಕೀರ್ತನ್ ಆಹಾರ ಸಚಿವ,ಹೆಚ್.ಆರ್.ಹರ್ಷ ಕ್ರೀಡಾ ಸಚಿವ, ಮದನ್ ನೀರಾವರಿ ಸಚಿವ, ಹಾರಿಕಾ ಸಾಂಸ್ಕೃತಿಕ ಸಚಿವೆ,ಲಿಖಿತ್‌ ಆರೋಗ್ಯ ಸಚಿವ ಹಾಗೂ ಅಭಿನವ್ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರು.

ವಿದ್ಯಾರ್ಥಿಗಳು ಉತ್ಸಾಹದಿಂದ ಮತದಾನ ಮಾಡಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅನುಭವಾತ್ಮಕವಾಗಿ ಅರಿತುಕೊಂಡರು.

ಶಾಲಾ ಸಂಸತ್ ಚುನಾವಣೆ ಮಕ್ಕಳಲ್ಲಿ ನಾಯಕತ್ವ, ಜವಾಬ್ದಾರಿ ಹಾಗೂ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬೆಳೆಸುವಲ್ಲಿ ಯಶಸ್ವಿಯಾಗಿದೆ ಎಂದು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು ,ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

WhatsApp

Join Now

Telegram

Join Now

Instagram

Join Now