--Ads--

ಬಂಡಿಕೊಡಿಗೇಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶನೈಶ್ಚರ ಲಕ್ಷದೀಪೋತ್ಸವ

On: September 7, 2026 2:09 AM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…..

ಬಂಡಿಕೊಡಿಗೇಹಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಶನೈಶ್ಚರ ಲಕ್ಷದೀಪೋತ್ಸವ

ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪವಿರುವ ಬಂಡಿಕೊಡಿಗೇಹಳ್ಳಿಯಲ್ಲಿ ಶ್ರೀ ಶನೈಶ್ಚರ ಸ್ವಾಮಿಗೆ 2ನೇ ವರ್ಷದ ಲಕ್ಷ ದೀಪೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಸಾವಿರಾರು ಭಕ್ತರು ಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು. ಅನ್ನಸಂತರ್ಪಣೆ ನಡೆಯಿತು

ಕೋಡಿಮಠ ಮಹಾಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರಮಹಾಸ್ವಾಮಿಗಳು ಮಾತನಾಡಿ, ಮನುಷ್ಯನಿಗೆ ನೆಮ್ಮದಿಯ ತಾಣವಾಗಿ ದೇವಾಲಯಗಳು ಇದೆ ಇಲ್ಲಿ ಬಂದು ದೇವರಿಗೆ ಭಕ್ತಿಯಿಂದ ನೆನೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ,  ಶ್ರೀ ಶನೈಶ್ಚರ   ಎಂದರೆ ಮನುಷ್ಯನಿಗೆ ಕಷ್ಟಕೊಡುವವನಲ್ಲಾ, ದುಷ್ಪರಿಗೆ ಶಿಕ್ಷಿಸಿ ಶಿಷ್ಟರಿಗೆ ರಕ್ಷಿಸುತ್ತಾನೆ.

ಮನುಷ್ಯ ಭೂಮಂಡಲವನ್ನು ಅಗೆದು ಬಗೆದು ತನಗೆ ಬೇಕಾದ್ದನ್ನು ಪಡೆಯುತ್ತಿದ್ದಾನೆ ಪ್ರಕೃತಿಯನ್ನು ನಾಶ ಮಾಡುತ್ತಿದ್ದಾನೆ ಅದಕ್ಕೆ ಭೂಮಂಡಲ ಸಡಿಲವಾಗಿ ಭೂಕಂಪನ ಇನ್ನಿತರೆ ತೊಂದರೆಗಳಾಗುತ್ತಿವೆ ಮುಂದೆಯೂ ಇದೇ ರೀತಿ ಯಾದರೆ ಆಪತ್ತು ಕಾದಿದೆ ಎಂದು ಭವಿಷ್ಯ ನುಡಿದರು.

ಶಶೈಶ್ಚರ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯ ರಾಜಣ್ಣ ಮಾತನಾಡಿ ದೇವಾಲಯ ಪ್ರಾರಂಭವಾದಾಗಿನಿಂದ ಅನೇಕ ಭಕ್ತರು ಹೊರರಾಜ್ಯಗಳಿಂದ ಬಂದು ದೇವರ ದರ್ಶನ ಪಡೆಯುತ್ತಿದ್ದಾರೆ. ಲಕ್ಷ ದಿಪೋತ್ಸವಕ್ಕೆ ಬೆಳಿಗ್ಗೆಯಿಂದಲೇ ಸಾವಿರಾರು ಜನ ಬಂದು ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತರಲ್ಲಿ ಪ್ರಾರ್ಥಿಸುತ್ತಾರೆ.

ಬಂದಂತಹ ಎಲ್ಲಾ ಭಕ್ತರಿಗೆ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದರು.

ಇದೆ ವೇಳೆ ದೇವಾಲಯ ಅಭಿವೃದ್ಧಿ ಸಮಿತಿಯ ನಾಗರಾಜ್, ನಾರಾಯಣಸ್ವಾಮಿ, ರಾಜಣ್ಣ, ಕೃಷ್ಣಪ್ಪ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಿ ದೇವರ ಆಶೀರ್ವಾದ ಪಡೆದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಭದ್ರಕಾಳಿ ಶಕ್ತಿ ಪೀಠದಲ್ಲಿ ಭೀಮನ ಅಮಾವಾಸ್ಯೆ 2ನೇ ದಿನದ ವಿಶೇಷ ಪೂಜೆ

ದಿನಾಂಕ: 17-07-2026 ಶುಕ್ರವಾರ *ದಕ್ಷಿಣಾಯಣ ಪುಣ್ಯಕಾಲ* : ಸೂರ್ಯನು ನಾಳೆ ಬೆಳಗ್ಗೆ 11.45ಕ್ಕೆ ಮಘಾ ನಕ್ಷತ್ರದಲ್ಲಿ ಕರ್ಕಾಟಕರಾಶಿ ಪ್ರವೇಶ

ಛಲ ಬಿಡದ ಲಕ್ಷ್ಮವ್ವ: 116ರ ಹರೆಯದಲ್ಲೂ ಅಲಿಪಿರಿ ಮಾರ್ಗದ 3,550 ಮೆಟ್ಟಿಲು ಹತ್ತಿ ತಿರುಮಲ ತಲುಪಿದ ಕರ್ನಾಟಕದ ಶತಾಯುಷಿ!

ಚೌಡಪ್ಪನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ಗಂಗಾದೇವಿ ದೇವಾಲಯದ ಅಭಿವೃದ್ಧಿಗೆ  ಧನಸಹಾಯ  ಮಾಡಿದ  ಶ್ರೀ ನಿಸರ್ಗ ನಾರಾಯಣಸ್ವಾಮಿ 

ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ  ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ : ಜಿಲ್ಲಾಧಿಕಾರಿ ಎಬಿ ಬಸವರಾಜು 

ಶ್ರೀಸೋಮೇಶ್ವರಸ್ವಾಮಿ ಜೀರ್ಣೋದ್ದಾರ ಮತ್ತು ಪುನ‌ರ್ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಸಕಲ ಸಿದ್ಧತೆ