ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ.
ಗೋಕುಲಾಷ್ಟಮಿಗು ಇಮಾಮ್ ಸಾಬಿಗೂ ಸಂಬಂಧ ಕಲ್ಪಿಸಿಕೊಟ್ಟ ಕವಿ. ‘ಉತ್ಥಾನ’ ಮಾಸಪತ್ರಿಕೆಯಲ್ಲಿ ಕೆಲಸಮಾಡುತ್ತಿದ್ದ ದಿನಗಳವು. ತಿಂಗಳಿಗೆ ಸರಿ ಸುಮಾರು ೧೬೦೦ ರೂ ಸಂಬಳದ ನನಗೆ ಬೆಂಗಳೂರು ಮತ್ತು ಬೆಂಗಳೂರಿಗೆ ನಾನು ಅಪ್ಪಟ ಅಪರಿಚಿತರೇ ಬಿಡಿ. ಬೆಂಗಳೂರು ನನ್ನ ಪಾಲಿಗೆ ಅಗಾಧ ವಸ್ತು-ವಿಷಯ-ವ್ಯಕ್ತಿಗಳನ್ನು ಒಡಲೊಳಗಿಟ್ಟು ಕೊಂಡ ಮಾಯಾಗೋಳದಂತೆಯೇ ಭಾಸವಾಗುತ್ತಿದ್ದುದೂ ಕೂಡ ಇದೇ ಬೆಂದಕಾಳೂರು. ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಇಂಥಹ ಬೆಂಗಳೂರು ಎಂಬ ಊರು ಹಾಗೆ ಸೂರಿಲ್ಲದ ಎಲ್ಲರನ್ನು ತಳ ಊರಲು ಬಿಡುವುದೂ ಇಲ್ಲ ಎಂಬ ಸತ್ಯದ ನಡುವೆ ಸಿಕ್ಕದ್ದು…