ವಿಜಯ ದರ್ಪಣ ನ್ಯೂಸ್…
ರಮ್ಮನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಭೂಮಿ ಮಾರಾಟದ ಅಕ್ರಮ: ಸ್ನೇಹಮಯಿ ಕೃಷ್ಣ
ತಾಂಡವಪುರ ಏಪ್ರಿಲ್ 18 ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಸೇರುವಮೈಸೂರು ತಾಲ್ಲೂಕು ಕಸಬಾ ಹೋಬಳಿಯ ರಮ್ಮನಹಳ್ಳಿ ಗ್ರಾಮದಲ್ಲಿ ಆಶ್ರಯ ನಿವೇಶನ ಹಂಚಲು ಖರೀದಿ ಮಾಡಿದ ಜಮೀನಿಗೆ ಸಂಬಂಧಿಸಿದ ವ್ಯಾಜ್ಯದ ಆದೇಶ ಬಳಿಕ ನ್ಯಾಯಾಲಯ ತಿಳಿಸಿದ ೧೦ ಗುಂಟೆ ಜೊತೆಗೆ, ಇನ್ನಿತರ ೨೦ ಗುಂಟೆ ಜಾಗವನ್ನೂ ಅಕ್ರಮವಾಗಿ ಇತರರಿಗೆ ಪಾಲಿಕೆ ಅಧಿಕಾರಿಗಳು ಬರೆದುಕೊಡುವ ಮೂಲಕ ಅಕ್ರಮ ಎಸಗಿದ್ದಾರೆ ಎಂದು ಸಾಮಾಜಿಕ ಹೋರಾಟಗಾರರಾದ ಸ್ನೇಹಮಯಿ ಕೃಷ್ಣ ಆರೋಪಿಸಿದರು.











