--Ads--

ಪತ್ರಿಕೆ ವಿತರಿಸುವ ಯುವಕರಿಗೆ ಆಹಾರ ಕಿಟ್ ವಿತರಣೆ ಮಾಡಿದ ಜೆಡಿಎಸ್‌ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ 

On: May 24, 2026 3:15 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್…

ಪತ್ರಿಕೆ ವಿತರಿಸುವ ಯುವಕರಿಗೆ ಆಹಾರ ಕಿಟ್ ವಿತರಣೆ ಮಾಡಿದ ಜೆಡಿಎಸ್‌ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ 

ರಾಮನಗರ: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಸಕ್ರಿಯವಾಗಿ ತೊಡಗಿಸಿಕೊಂಡಿರುವ ವಕೀಲರು ಹಾಗೂ ಜೆಡಿಎಸ್ ಪದವೀಧರರ ಘಟಕದ ರಾಜ್ಯಾಧ್ಯಕ್ಷ ರಾಜಶೇಖರ್ ಅವರು ತಮ್ಮ ಜನ್ಮದಿನವನ್ನು  ವಿಶಿಷ್ಟ ಹಾಗೂ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಜನ್ಮದಿನದ ಅಂಗವಾಗಿ ನಗರದ ಜಿಲ್ಲಾ ಜೆಡಿಎಸ್ ಕಾರ್ಯಾಲಯದಲ್ಲಿ ಪತ್ರಿಕೆ ವಿತರಣೆ ಮಾಡುವ ಹುಡುಗರಿಗೆ ಆಹಾರ ಸಾಮಗ್ರಿಗಳ ಕಿಟ್ ಹಾಗೂ ಮಳೆಗಾಲದ ಹಿನ್ನೆಲೆ ಯಲ್ಲಿ ರೈನ್‌ ಕೋಟ್‌ಗಳನ್ನು ವಿತರಿಸುವ ಮೂಲಕ ಸಮಾಜಸೇವೆಯ ಸಂದೇಶವನ್ನು ಸಾರಿದರು. ಸಾಮಾನ್ಯವಾಗಿ ಜನ್ಮದಿನಗಳನ್ನು ಕೇಕ್ ಕತ್ತರಿಸುವುದು. ಶುಭಾಶಯ ಸ್ವೀಕರಿಸುವುದು ಹಾಗೂ ವೈಯಕ್ತಿಕ ಸಂಭ್ರಮಾಚರಣೆಗಳ ಮೂಲಕ ಆಚರಿಸಲಾಗುತ್ತದೆ. ಆದರೆ, ರಾಜಶೇಖರ್ ಅವರು ತಮ್ಮ ಜನ್ಮದಿನವನ್ನು ಸಮಾಜದ ಶ್ರಮಜೀವಿಗಳೊಂದಿಗೆ ಹಂಚಿಕೊಳ್ಳುವ ಮೂಲಕ ವಿಭಿನ್ನ ಮಾದರಿಯನ್ನು ಮೂಡಿಸಿದರು. ಪ್ರತಿದಿನ ಬೆಳಗ್ಗಿನ ಜಾವ ಎದ್ದು ಮನೆ ಮನೆಗೆ ಪತ್ರಿಕೆ ತಲುಪಿಸುವ ಪತ್ರಿಕಾ ವಿತರಕರ ಶ್ರಮವನ್ನು ಗೌರವಿಸುವ ಉದ್ದೇಶದಿಂದ ಅವರಿಗೆ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು.

ಈ ವೇಳೆ ಮಾತನಾಡಿದ ರಾಜಶೇಖರ್, ಸಮಾಜದಲ್ಲಿ ಅನೇಕ ವರ್ಗಗಳ ಜನರು ತಮ್ಮ ಕರ್ತವ್ಯಗಳನ್ನು ಮೌನವಾಗಿ ನಿರ್ವಹಿಸುತ್ತಿದ್ದು, ಅವರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಪತ್ರಿಕೆ ವಿತರಕರು ಯಾವುದೇ ಹವಾಮಾನ ಪರಿಸ್ಥಿತಿಯಲ್ಲಿಯೂ ತಮ್ಮಕೆಲಸವನ್ನು ನಿಷ್ಠೆಯಿಂದ ನಿರ್ವಹಿಸುತ್ತಾರೆ. ಅವರ ಶ್ರಮದಿಂದಲೇ ಜನರಿಗೆ ಪ್ರತಿದಿನದ ಸುದ್ದಿ ತಲುಪುತ್ತದೆ. ಇಂತಹ ಶ್ರಮಜೀವಿಗಳಿಗೆ ನೆರವಾಗುವ ಸದಾವಕಾಶ ತಮಗೆ ಸಿಕ್ಕಿರುವುದು ಸಂತಸದ ಸಂಗತಿ ಎಂದರು.

ಸಮಾಜಸೇವೆ ಎಂಬುದು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ ನಿರಂತರ ಪ್ರಕ್ರಿಯೆಯಾಗಬೇಕು. ಜನ್ಮದಿನ, ವಾರ್ಷಿಕೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳನ್ನು ಸಮಾಜದ ಹಿತಕ್ಕಾಗಿ ಬಳಸಿಕೊಂಡಾಗ ಅವುಗಳಿಗೆ ನಿಜವಾದ ಅರ್ಥ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮುಂದೆಯೂ ಸಮಾಜದ ವಿವಿಧ ವರ್ಗಗಳ ಜನರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ರಾಮನಗರ ತಾಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಜಯಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರು, ಕಾರ್ಯಕರ್ತರು ಹಾಗೂ ಪತ್ರಿಕೆ ವಿತರಕರು ಉಪಸ್ಥಿತರಿದ್ದು, ರಾಜಶೇಖರ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮವು ಸಮಾಜದ ಬಗ್ಗೆ ಕಾಳಜಿ. ಮಾನವೀಯ ಮೌಲ್ಯಗಳು ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ದೊರೆಸ್ವಾಮಿ, ವಕ್ತಾರ ನರಸಿಂಹಮೂರ್ತಿ, ಕಾಂತರಾಜು, ಮಾವಿನಸಸಿ ವೆಂಕಟೇಶ್, ಬಾಲಗೆರೆ ರವಿ, ಕೃಷ್ಣಗೌಡ, ಸಿ.ಎಸ್.ಜಯಕುಮಾರ್, ಕೆಂಪರಾಜು, ಆಡಿಟರ್ ಕುಮಾರ್, ನವೀನ್, ನರೇಂದ್ರ, ಯೋಗೇಶ್ ಕುಮಾರ್, ಜಯರಾಮ್, ಶೋಭ, ಸರಸ್ವತಿ, ಪೂರ್ಣಿಮ ವಾಸು, ರಮೇಶ್, ಸುರೇಶ್ ಮುಂತಾದವರು ಇದ್ದರು.

WhatsApp

Join Now

Telegram

Join Now

Instagram

Join Now