ವಿಜಯ ದರ್ಪಣ ನ್ಯೂಸ್….
ಕೃಷ್ಣರಾಜ ಕ್ಷೇತ್ರದಲ್ಲಿ 45 ಕೋಟಿ ರೂ. ವೆಚ್ಚದ ಕಾಮಗಾರಿಗೆ ಶಾಸಕ ಶ್ರೀವತ್ಸ ಚಾಲನೆ

ತಾಂಡವಪುರ ಮೇ 29 ಕೃಷ್ಣರಾಜ ಕ್ಷೇತ್ರದ ಬಾಕ್ಸ್ ಡ್ರೈನ್ ಹಾಗೂ ರಸ್ತೆ ಕಾಮಗಾರಿಗೆ ಬಿಜೆಪಿ ಪಕ್ಷದ ಶಾಸಕ ಶ್ರೀವತ್ಸ ರವರು ಚಾಲನೆ ನೀಡಿದರು.
ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆ ಅಡಿ ಕೆ.ಆರ್. ಕ್ಷೇತ್ರದ ವಲಯ ಕಚೇರಿ ಎರಡು ಹಾಗೂ ಮೂರರ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂಬರ್ 57, 59, 60, 62, 64, 65ರಲ್ಲಿ ಬಾಕ್ಸ್ ಟ್ರೈನ್ ಮತ್ತು ರಸ್ತೆ ಡಾಂಬರೀಕರಣ ಸುಮಾರು 20 ಕೋಟಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು.
ಈ ಸಂದರ್ಭದಲ್ಲಿ ನಗರ ಪಾಲಿಕೆ ಮಾಜಿ ಸದಸ್ಯರಾದ ಶಾರದಮ್ಮ ಈಶ್ವರ್, ರಮೇಶ್, ಜಯರಾಮ್ ಮುಖಂಡರಾದ ವಿಶ್ವೇಶ್ವರಯ್ಯ, ನಾಗರಾಜ್, ಬಿಲ್ಲಯ್ಯ, ಪಿ.ಟಿ.ಕೃಷ್ಣ ರವಿ, ಪ್ರದೀಪ್ ಕುಮಾರ್, ಮಧುಸೂದನ್, ದೀಪಕ್, ದೇವರಾಜೇಗೌಡ, ರಾಘವೇಂದ್ರ, ಅಕ್ಷಯ್, ಚಂದ್ರು, ಹೇಮಂತ್, ರಾಜೇಶ್, ರವಿ, ಮಂಜು, ಸತೀಶ, ಮನೋಜ್, ರೂಪ ರೇಣುಕಾ, ವಲಯ ಕಚೇರಿ 2 ಮತ್ತು 3 ರ ಸಹಾಯಕ ಆಯುಕ್ತರಾದ ಗಿರೀಶ್, ಸಂದೀಪ್ ಅಭಿವೃದ್ಧಿ ಅಧಿಕಾರಿಗಳಾದ ಚೇತನ್ ಬಾಬು, ಸತ್ಯಮೂರ್ತಿ ಇದ್ದರು.











