ವಿಜಯ ದರ್ಪಣ ನ್ಯೂಸ್….
ವಿಶ್ವ ಮೆದುಳು ದಿನಾಚರಣೆ ಹಾಗೂ ಫಿಸಿಯೋಥೆರಪಿ ಉಪಕರಣಗಳ ಉದ್ಘಾಟನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ , ಜು29:-
ಬೆಂಗಳೂರು ಗ್ರಾಮಾಂತರ ಜಿಲ್ಲೆಯ KABHI ತಂಡದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವ ಮೆದುಳು ದಿನಾಚರಣೆ ಹಾಗೂ ಫಿಸಿಯೋಥೆರಪಿ ಉಪಕರಣಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ನಾಗರಾಜ್ ಅವರು ಮೆದುಳಿನ ಆರೋಗ್ಯದ ಮಹತ್ವ, ನರ ಸಂಬಂಧಿತ ಕಾಯಿಲೆಗಳ ತಡೆ ಹಾಗೂ ಸಮಯೋಚಿತ ಚಿಕಿತ್ಸೆಯ ಅಗತ್ಯತೆಯ ಕುರಿತು ಅರಿವು ಮೂಡಿಸಿದರು.
ಅದೇ ವೇಳೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ವತಿಯಿಂದ ಸಾರ್ವಜನಿಕ ಆಸ್ಪತ್ರೆಗೆ ಫಿಸಿಯೋಥೆರಪಿ ಉಪಕರಣಗಳಿಗೆ ಕೃತಜ್ಞತೆ ಸಲ್ಲಿಸಿದರು. ಈ ಉಪಕರಣಗಳು ನರ ಸಂಬಂಧಿತ ಸಮಸ್ಯೆಗಳು ಹಾಗೂ ಇತರೆ ದೈಹಿಕ ತೊಂದರೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳ ಪುನರ್ವಸತಿ ಮತ್ತು ಶೀಘ್ರ ಚೇತರಿಕೆಗೆ ಸಹಕಾರಿಯಾಗಲಿವೆ.
ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಜಯ, ವೈದ್ಯ ಡಾ. ನಿರಂಜನ್, ಮೂಳೆ ಮತ್ತು ಮೂಳೆ ತಜ್ಞ ಡಾ. ಮಂಜುನಾಥ್, ಮಕ್ಕಳ ತಜ್ಞೆ ಡಾ. ಗಾಯತ್ರಿ, ಆಯುಷ್ ವೈದ್ಯ ಡಾ. ದತ್ತು ಸಿಂಗ್, ಆಸ್ಪತ್ರೆಯ ಸಿಬ್ಬಂದಿ, KABHI ತಂಡದ ಸದಸ್ಯರು ಉಪಸ್ಥಿತರಿದ್ದರು.








