ವಿಜಯ ದರ್ಪಣ ನ್ಯೂಸ್….
ದಲಿತ ಸಮುದಾಯದ ರಾಜಕೀಯ ಹಕ್ಕಿಗಾಗಿ ಧ್ವನಿಯಾಗೋಣ: ಪ್ರತಿಭಟನಾ ಸಮಾವೇಶಕ್ಕೆ ಭಾಗವಹಿಸುವಂತೆ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಕರೆ

ತಾಂಡವಪುರ ಜೂನ್ 9ಪ್ರತಿಭಟನಾ ಜಾಗೃತಿ: ದಲಿತ ಸಮುದಾಯದ ರಾಜಕೀಯ ಹಕ್ಕಿಗಾಗಿ ಧ್ವನಿಯಾಗೋಣ!* 11 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನಾ ಸಮಾವೇಶಕ್ಕೆ ಭಾಗವಹಿಸುವಂತೆ ದಲಿತ ಸಮುದಾಯದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಯವರ ಕರೆ ನೀಡಿದ್ದಾರೆ
ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಯವರ ನೇತೃತ್ವದಲ್ಲಿ, ದಲಿತ ಸಮುದಾಯದ ನಾಯಕರ ಮೇಲೆ ನಡೆಯುತ್ತಿರುವ ಅನ್ಯಾಯಗಳ ವಿರುದ್ಧ ಮತ್ತು ರಾಜಕೀಯವಾಗಿ ಅವರನ್ನು ತುಳಿಯುವ ಹುನ್ನಾರಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಪ್ರತಿಭಟನೆಯ ಪ್ರಮುಖ ಉದ್ದೇಶಗಳು:
*ರಾಜಕೀಯ ಕುತಂತ್ರಗಳ ಖಂಡನೆ:* ಹಳೆ ಮೈಸೂರು ಭಾಗದ ಪ್ರಬಲ ದಲಿತ ನಾಯಕರಾದ ಡಾ. ಹೆಚ್. ಸಿ. ಮಹದೇವಪ್ಪನವರಂತಹ ಹಿರಿಯ ಮುತ್ಸದ್ಧಿಗಳನ್ನು ರಾಜಕೀಯವಾಗಿ ತೆರೆಮರೆಗೆ ಸರಿಸುವ ದುಷ್ಟತಂತ್ರಗಳನ್ನು ವಿರೋಧಿಸುವುದು.
*ರಾಜಕೀಯ ಪ್ರಾತಿನಿಧ್ಯ:* ಈ ಬಾರಿಯ ಸಚಿವ ಸಂಪುಟದಲ್ಲಿ ದಲಿತ ಸಮುದಾಯಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಚಿವ ಸ್ಥಾನಗಳನ್ನು ನೀಡಬೇಕೆಂದು ಆಗ್ರಹಿಸುವುದು.
*ಮಠದ ಶಕ್ತಿವರ್ಧನೆ: ಇತರ ಸಮುದಾಯಗಳ ಮಠಗಳು ರಾಜಕೀಯ ಶಕ್ತಿ ಕೇಂದ್ರಗಳಾಗಿ ಬೆಳೆದಿರುವಂತೆ, ನಮ್ಮ ಸಮುದಾಯದ ಮಠವನ್ನೂ ಒಂದು ಪ್ರಬಲ ರಾಜಕೀಯ ಶಕ್ತಿ ಕೇಂದ್ರವನ್ನಾಗಿ ರೂಪಿಸಲು ಬದ್ಧರಾಗೋಣ.*
ಕರೆ:
ಸಮಸ್ತ ದಲಿತ ಬಂಧುಗಳು ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿಯವರ ಕೈ ಬಲಪಡಿಸಬೇಕೆಂದು ವಿನಂತಿಸುತ್ತೇವೆ. ನಮ್ಮ ಸಮುದಾಯದ ನಾಯಕರ ರಕ್ಷಣೆ ಮತ್ತು ರಾಜಕೀಯ ಅಸ್ತಿತ್ವಕ್ಕಾಗಿ ನಾವೆಲ್ಲರೂ ಒಗ್ಗೂಡಿ ಹೋರಾಡೋಣ. ಎಂದು ದಲಿತ ಸಮುದಾಯದ ಮುಖಂಡರಾದ ಪುರುಷೋತ್ತಮ್ ಹಾಗೂ ಮುಂತಾದವರು ಈ ಪ್ರತಿಭಟನ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದ್ದಾರೆ










