--Ads--

ನರೇಂದ್ರ ಮೋದಿ ಪ್ರದಾನಿಯಾಗಿ ೧೨ ವರ್ಷಗಳು ಪೂರೈಸಿದ್ದರಿಂದ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

On: June 10, 2026 4:50 PM
Follow ಮಾಡಿ
--Ads--

Whatsapp Channel

Join Now

Telegram Group

Join Now
ವಿಜಯ ದರ್ಪಣ ನ್ಯೂಸ್…..

ನರೇಂದ್ರ ಮೋದಿ ಪ್ರದಾನಿಯಾಗಿ 12 ವರ್ಷಗಳು ಪೂರೈಸಿದ್ದರಿಂದ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಶಿಡ್ಲಘಟ್ಟ : ಭಾರತದಲ್ಲಿರುವ ಕೆಲ ಮುಸ್ಲಿಂರಿಗೆ ಪಾಕಿಸ್ತಾನದ ಬಗ್ಗೆ ಅಂಧ ಪ್ರೇಮವಿದೆ ಅಂತಹವರು ಭಾರತವನ್ನು ಬಿಟ್ಟು ತೊಲಗಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿ ಇಲ್ಲಿದ್ದ ಮೇಲೆ ಎಲ್ಲರೂ ವಿಕಸಿತ ಭಾರತಕ್ಕಾಗಿ ಕೈ ಜೋಡಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಯಶಸ್ವಿ ೧೨ ವರ್ಷ ಪೂರೈಸಿ ಮುಂದುವರೆದಿರುವ ಅಂಗವಾಗಿ ನಗರದ ಕೋಟೆ ಶ್ರೀರಾಮ ದೇವಾಲಯದಲ್ಲಿ ವಿಶೇಷ ಪೂಜೆ, ಸ್ವಚ್ಚತಾ ಕಾರ್ಯ, ಸಸಿ ನೆಟ್ಟು ಅವರು ಮಾತನಾಡಿದರು.

ಎಲ್ಲಾ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದೆ ಆದರೆ ಕೆಲವರು ಭಾರತದಲ್ಲಿ ನೆಲೆಸಿ ಇಲ್ಲಿನ ನೀರು ಕುಡಿದು ಗಾಳಿ ಸೇವಿಸಿ ಅನ್ನ ತಿಂದ ಮೇಲೆ ಭಾರತಕ್ಕೆ ತಲೆ ಬಾಗಬೇಕು, ಭಾರತವನ್ನು ಪ್ರೀತಿಸಬೇಕು, ಭಾರತದ ಕಾನೂನನ್ನು ಗೌರವಿಸಬೇಕು ಎಂದು ಹೇಳಿದರು.

ಕೆಲವರಿಗೆ ಪಾಕಿಸ್ತಾನದ ಮೇಲೆ ಎಲ್ಲಿಲ್ಲದ ಮಮಕಾರ, ಪ್ರೀತ, ಅಂಧ ಪ್ರೇಮ ಇರುತ್ತದೆ ಅಂತಹವರು ಭಾರತ ಬಿಟ್ಟು ಪಾಕಿಸ್ತಾನಕ್ಕೆ ಹೋಗಿ ಅಲ್ಲೇ ನೆಲೆಸಲಿ ನಮ್ಮದೇನು ಅಭ್ಯಂತರ ಇಲ್ಲ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಲ್ಲ ನಾಯಕರು ಒಗ್ಗೂಡಿ ಕೃಷ್ಣಾ ನದಿ ನೀರನ್ನು ಈ ಭಾಗಕ್ಕೆ ಹರಿಸಿ ಕೃಷಿಕರಿಗೆ ಅನುಕೂಲ ಮಾಡಿಕೊಡುವುದು ಶತಸಿದ್ಧ ಎಂದರು.

ನಮ್ಮ ನೆರೆಯ ಆಂಧ್ರದ ಗಡಿಯಲ್ಲಿ ಕೃಷ್ಣಾ ನದಿ ನೀರು ಹರಿಯುತ್ತಿದ್ದು ಕೃಷ್ಣಾ ನದಿ ನೀರನ್ನು ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೃಷಿಗೆ ಹರಿಸಬೇಕಿದೆ ಆದರೆ ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಹಿತಾಸಕ್ತಿಯೆ ಇಲ್ಲವಾಗಿದೆ ಎಂದು ಅವರು ದೂರಿದರು.

ಈಗ ರಾಜ್ಯದಲ್ಲಿರುವ ಮತ್ತು ಈ ಹಿಂದೆ ಕೇಂದ್ರದಲ್ಲಿ ಅದಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಜನ ಹಿತಕ್ಕಿಂತಲೂ ಸ್ವಾರ್ಥ, ಪಕ್ಷದ ಹಿತ ಮುಖ್ಯವಾಗಿತ್ತು , ಹಾಗಾಗಿ ದೇಶದ ಅಭಿವೃದ್ದಿ ಮಾಡಿದ್ದಕ್ಕಿಂತ ಸ್ವಂತ ಅಭಿವೃದ್ದಿ ಆಗಿದ್ದೇ ಹೆಚ್ಚು ಎಂದು ವ್ಯಂಗ್ಯವಾಡಿದರು.

ಪ್ರಧಾನಿ ಮೋದಿ ಅವರ ಪರಿಶ್ರಮ, ದೇಶ ಪ್ರೇಮ ದೇಶ ಭಕ್ತಿಯಿಂದ ಪ್ರಧಾನ ಮಂತ್ರಿಯ ಸ್ಥಾನಕ್ಕೇರಿ ಸತತ ೧೨ ವರ್ಷಗಳ ಕಾಲ ಸುದೀರ್ಘ, ಸುರಕ್ಷತೆಯ, ಸುಭದ್ರತೆಯ ಆಡಳಿತ ನೀಡುತ್ತಾ ೧೨ ವರ್ಷ ಪೂರೈಸಿ ಪ್ರಧಾನಿಯಾಗಿ ಮುಂದುವರೆದ ಕೀರ್ತಿ ವಿಶ್ವ ಗುರು ನರೇಂದ್ರ ಮೋದಿ ಅವರದ್ದಾಗಿದೆ. ಇದಕ್ಕೆ ನಾವೆಲ್ಲರೂ ಕಾರಣ ಎಂದು ಹೆಮ್ಮೆ ಪಡಬೇಕು ಎಂದರು.

ಇದೇ ವೇಳೆ ಶ್ರೀರಾಮನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದವನ್ನು ವಿನಿಯೋಗಿಸಲಾಯಿತು, ಸ್ವಚ್ಚತಾ ಕಾರ್ಯ ಮಾಡಿ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರಳೀಧರ್, ಕೆ.ಬಿ.ಮುರಳಿ, ಗ್ರಾಮಾಂತರ ಮಂಡಲ ಅದ್ಯಕ್ಷ ಸೀಕಲ್ ಆನಂದಗೌಡ, ಮಧು, ಕಂಬದಹಳ್ಳಿ ಸುರೇಂದ್ರಗೌಡ, ನರೇಶ್, ರಮೇಶ್ ಬಾಯರಿ, ಪಿ.ವಿ.ಶ್ರೀನಿವಾಸ್,ಆಂಜನೇಯ, ರವಿಚಂದ್ರ,ಕೆ. ಜಗದೀಶ್ ರೆಡ್ಡಿ,ಪ್ರಕಾಶ್, ಮತ್ತಿತರರು ಹಾಜರಿದ್ದರು.

WhatsApp

Join Now

Telegram

Join Now

Instagram

Join Now