ವಿಜಯ ದರ್ಪಣ ನ್ಯೂಸ್…..
ತಾಂಡವಪುರ ಡೈರಿಗೆ ಹೆಚ್ಚು ಹಾಲು ಹಾಕಿದ ಉತ್ಪಾದಕರಿಗೆ ಸಂಘದ ವತಿಯಿಂದ ಸನ್ಮಾನ

ತಾಂಡವಪುರ ಜುಲೈ 21 ಮೈಸೂರು ಜಿಲ್ಲೆ ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ತಾಂಡವಪುರ ಹಾಲು ಉತ್ಪಾದಕರ ಸಹಕರ ಸಂಘದ ವತಿಯಿಂದ ಡೈರಿಗೆ ಹೆಚ್ಚು ಹಾಲು ಹಾಕಿರುವ ಐದು ಮಂದಿ ಉತ್ಪಾದಕರಿಗೆ ಸಂಘದ ಆವರಣದಲ್ಲಿ ಏರ್ಪಡಿಸಿದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಬಹುಮಾನ ನೀಡಿ ಸನ್ಮಾನಿಸಿ ಗೌರವಿಸಲಾಯಿತು
ಬಳಿಕ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ನಿರ್ದೇಶಕರು ಆದ ಕೆಜಿ ಮಹೇಶ್ ಹಾಗೂ ಸದಾನಂದ ಅವರು ಮಾತನಾಡಿ ತಾಂಡವಪುರ ಹಾಲ ಉತ್ಪಾದಕರ ಸಹಕಾರ ಸಂಘವು ನಂಜನಗೂಡು ತಾಲೂಕಿಗೆ ಮಾದರಿ ಸಂಘವಾಗಿ ಹೊರಗೊಮ್ಮೆದೆ ನಮ್ಮ ಮೈಸೂರು ಜಿಲ್ಲಾ ಹಾಲುಒಕ್ಕೂಟವು ನಷ್ಟದಲ್ಲಿ ಸಾಗುತ್ತಿದೆ.
ಆದರೂ ತಾಂಡವಪುರ ಹಾಲು ಉತ್ಪಾದಕರ ಸಹಕಾರ ಸಂಘ ಉತ್ತಮ ಲಾಭದಲ್ಲಿ ನಡೆಯುತ್ತಿರುವುದು ಎಲ್ಲರೂ ಮೆಚ್ಚುವ ವಿಚಾರ ಅದೇ ರೀತಿ ಹಾಲು ಉತ್ಪಾದಕರು ಸಂಘಕ್ಕೆ ಉತ್ತಮ ಗುಣಮಟ್ಟದ ಹಾಲು ಪೂರೈಸಿದರೆ ಸಂಘವು ಪ್ರಗತಿ ಕಾಣಲು ಸಾಧ್ಯ ಆ ನಿಟ್ಟಿನಲ್ಲಿ ಸಂಘದ ಎಲ್ಲಾ ಸದಸ್ಯರು ಶ್ರಮಿಸುವ ಮೂಲಕ ಸಂಘವನ್ನು ಇನ್ನೂ ಉನ್ನತಮಠಕ್ಕೆ ಕೊಂಡುಯಿರಿ ಎಂದು ಸಲಹೆ ನೀಡಿದರು ರೈತರ ನೆರವಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ರೂ.3 ಪ್ರೋತ್ಸಾಹ ಧನ ಸಹಾಯ ಮಾಡಿದರು ಅದೇ ರೀತಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದಾಗ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಐದು ರೂಪಾಯಿ ಪ್ರೋತ್ಸಾಹ ಧನ ನೀಡುವ ಮೂಲಕ ರೈತರಿಗೆ ನೆರವಾಗಿದ್ದಾರೆ ಅವರಿಗೆ ರೈತರ ಪರವಾಗಿ ನಾವು ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಮಹೇಶ್ ಸದಾನಂದ ,ಸಂಘದ ಅಧ್ಯಕ್ಷ ಟಿ ಪಿ ಮಹೇಶ್ ಉಪಾಧ್ಯಕ್ಷ ಮಾಲಯ್ಯ ಮಾಜಿ ಅಧ್ಯಕ್ಷರಾದ ಪ್ರಕಾಶ್ ಬಿ ಪುಟ್ಟಯ್ಯ ಮಹಾದೇವಯ್ಯ ಹಾಗೂ ನಿರ್ದೇಶಕರಾದ ಪುಟ್ಟೇಗೌಡ ನಾಗರಾಜು ಟಿ ಕೆ ಬಸವರಾಜು ಎಂ ಶಿವಯ್ಯ ಕೆಂಪಣ್ಣ ಗೋವಿಂದ ನಾಯಕ ಶಿವಮ್ಮ ಶೋಭಾ ಹಾಗೂ ಹಾಲು ವಿಸ್ತರಣಾಧಿಕಾರಿ ವೀಣಾ ಮುಖಂಡರಾದ ಯಶವಂತ ನಾಗರಾಜು ರವಿ ಮಲ್ಲಪ್ಪ ಸಂಘದ ಕಾರ್ಯದರ್ಶಿ ರಾಧಾ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು











