--Ads--

ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ

On: August 24, 2026 4:41 PM
Follow ಮಾಡಿ
--Ads--

Whatsapp Channel

Join Now

Telegram Group

Join Now

ವಿಜಯ ದರ್ಪಣ ನ್ಯೂಸ್….

ಸೊಣ್ಣೇನಹಳ್ಳಿಯಲ್ಲಿ ನವಗ್ರಹ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ವಿಜೃಂಭಣೆ 

ಶಿಡ್ಲಘಟ್ಟ : ಶ್ರೀಸೀತಾರಾಮಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ನವಗ್ರಹಗಳ ಪ್ರತಿಷ್ಠಾಪನೆ, ಅಶ್ವತ್ಥಕಟ್ಟೆ ಮಹೋತ್ಸವ ಹಾಗೂ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮಗಳು ಅತ್ಯಂತ ವಿಜೃಂಭಣೆಯಿಂದ ನೆರವೇರಿದವು.

ದೇವಾಲಯದ ಆವರಣದಲ್ಲಿದ್ದ ಹಳೆಯ ಅಶ್ವತ್ಥಕಟ್ಟೆಯ ಶಿಲೆಯು ಶಿಥಿಲಗೊಂಡ ಹಿನ್ನೆಲೆಯಲ್ಲಿ, ಹಳೆಯ ಶಿಲೆಯನ್ನು ಬದಲಾಯಿಸಿ ಕಾಂಕ್ರೀಟ್ ಕಾಮಗಾರಿಯೊಂದಿಗೆ ಅಶ್ವತ್ಥಕಟ್ಟೆಯನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.

ಗ್ರಾಮದಲ್ಲಿದ್ದ ನವಗ್ರಹ ಮೂರ್ತಿಗಳ ಕೊರತೆಯನ್ನು ನೀಗಿಸಲು ನವಗ್ರಹಗಳ ನೂತನ ಮೂರ್ತಿಗಳನ್ನು ಭಕ್ತಿಯಿಂದ ಪ್ರತಿಷ್ಠಾಪಿಸಲಾಯಿತು.

ಆಗಸ್ಟ್ 23 ರಿಂದ 24 ರವರೆಗೆ ಎರಡು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.ಆಗಸ್ಟ್ 24 ರಂದು ಮಧ್ಯಾಹ್ನ 12:00 ರಿಂದ 12:45 ರವರೆಗೆ ಶುಭ ಮುಹೂರ್ತದಲ್ಲಿ ಮಹಾಕುಂಭ ಪ್ರೋಕ್ಷಣೆ ಹಾಗೂ ಮಹಾಮಂಗಳಾರತಿ ಜರುಗಿತು.

​ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಸ್ಥರೆಲ್ಲರ ಸಹಕಾರದಿಂದ ವಿನಾಯಕ ದೇವಸ್ಥಾನವನ್ನು ನಿರ್ಮಿಸಲಾಗಿತ್ತು ,ಇದೀಗ ನವಗ್ರಹ ಹಾಗೂ ಅಶ್ವತ್ಥಕಟ್ಟೆ ಪುನರ್ ಪ್ರತಿಷ್ಠಾಪನೆಯೊಂದಿಗೆ ಶ್ರೀ ಸೀತಾರಾಮಾಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಸಂಪೂರ್ಣಗೊಂಡಂತಾಗಿದೆ,
ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಗ್ರಾಮದ ಮುಖಂಡರು, ಮಹಾದಾನಿಗಳು ಹಾಗೂ ಸಮಸ್ತ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

WhatsApp

Join Now

Telegram

Join Now

Instagram

Join Now

ಇದನ್ನೂ ಓದಿ

ಕಾಂಗ್ರೆಸ್ ಮುಖಂಡ ಆಂಜಿನಪ್ಪ (ಪುಟ್ಟು ಅವರ) ಹುಟ್ಟು ಹಬ್ಬ ಆಚರಣೆಯ ಪ್ರಯುಕ್ತ  ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಹಂಪಲು ವಿಚರಣೆ 

ಶ್ರೀಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಎರಡನೇ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜೆ 

“ಕಲಾ ನ್ಯಾಚುರಲ್ ಫುಡ್ ಜ್ಯೂಸ್ ಫ್ಯಾಕ್ಟರಿ”ಗೆ ಗುದ್ದಲಿ ಪೂಜೆ : ಕೊತ್ತನೂರು ಪಂಚಾಕ್ಷರಿರೆಡ್ಡಿ

ಸೆಪ್ಟೆಂಬ‌ರ್-4ರಂದು ತಾಲ್ಲೂಕಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅದ್ಧೂರಿ ಕಾರ್ಯಕ್ರಮ

ನಮ್ಮ ಊರು, ನಮ್ಮ ಸುತ್ತ ಮುತ್ತಲಿನ ಇತಿಹಾಸ, ನಾಡಿನ ಇತಿಹಾಸ ಪರಂಪರೆಯನ್ನು ತಿಳಿದುಕೊಳ್ಳುವ ಕೆಲಸ ಆಗಬೇಕಿದೆ : ಹಿರಿಯ ಸಿವಿಲ್ ನ್ಯಾಯಾಧೀಶ ಮೊಹಮ್ಮದ್ ರೋಷನ್ ಷಾ

ಕಂದಾಯ ಗ್ರಾಮದ ಅಭಿಯಾನದ ಪ್ರಯುಕ್ತ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಮಾಹಿತಿ ಪಡೆದ ಜಿಲ್ಲಾಧಿಕಾರಿ ಜಿ.ಪ್ರಭು.