ವಿಜೃಂಭಣೆಯಿಂದ ಜರುಗಿದ ಗದ್ದೆ ಮಸಣಮ್ಮ ದೇವಿಯ  ಪೂಜಾ ಮಹೋತ್ಸವ: ಭಕ್ತರಿಗೆ ಅನ್ನ ಸಂತರ್ಪಣೆ

ವಿಜಯ ದರ್ಪಣ ನ್ಯೂಸ್….

ವಿಜೃಂಭಣೆಯಿಂದ ಜರುಗಿದ ಗದ್ದೆ ಮಸಣಮ್ಮ ದೇವಿಯ ಪೂಜಾ ಮಹೋತ್ಸವ: ಭಕ್ತರಿಗೆ ಅನ್ನ ಸಂತರ್ಪಣೆ

ತಾಂಡವಪುರ ಫೆಬ್ರವರಿ 14 ಮೈಸೂರು ಜಿಲ್ಲೆ, ನಂಜನಗೂಡು ತಾಲೂಕು ಚಿಕ್ಕಯ್ಯನ ಛತ್ರ ಹೋಬಳಿ ವರುಣ ವಿಧಾನಸಭಾ ಕ್ಷೇತ್ರಕ್ಕೆ ಸೇರುವ ಹದಿನಾರು ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧಿ ಉಳ್ಳ ಗದ್ದೆ ಮಸಣಮ್ಮ ದೇವಿಯ ನಾಲ್ಕನೇ ವರ್ಷದ ಪೂಜಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಪ್ರಸಾದ ವಿನಿಯೋಗ ಮಾಡಲಾಯಿತು

ಗ್ರಾಮದ ಗದ್ದೆ ಮಸಣಮ್ಮ ದೇವಿಯ ಭಕ್ತ ಮಂಡಳಿಯವರು ಈ ಪೂಜಾ ಮಹೋತ್ಸವ ಕಾರ್ಯಕ್ರಮ ಗ್ರಾಮದಿಂದ ಹಾಲರವಿ ಉತ್ಸವ ವೀರಗಾಸೆ ಕುಣಿತ ಮೂಲಕ ವಾದ್ಯಗೋಷ್ಠಿಯೊಡನೆ ದೇವರನ್ನು ತರುವ ಮೂಲಕ ದೇವಾಲಯಕ್ಕೆ ತಲುಪಿಸಿದರು ದೇವಾಲಯದಲ್ಲಿ ಬೆಳಿಗ್ಗೆಯಿಂದ ವಿಶೇಷ ಪೂಜೆ ಅಭಿಷೇಕ ಮುಂತಾದ ದೇವತಾ ಕಾರ್ಯಗಳು ಬಹಳ ವಿಜೃಂಭಣೆಯಿಂದ ಜರುಗದವುಳಿ ಎಂದು ತಿಳಿಸಿದರು

ಗದ್ದೆಮಸಣಮ್ಮ ದೇವಿಯ ನಾಲ್ಕನೇ ವರ್ಷದ ಪೂಜಾ ಮಹೋತ್ಸವ ಅಂಗವಾಗಿ ಗ್ರಾಮದಿಂದ ದೇವಸ್ಥಾನದವರೆಗೆ ಹಾಲರವಿ ಉತ್ಸವದಲ್ಲಿ ಗ್ರಾಮದ ಬಾಲಕಿ ತಲೆಯ ಮೇಲೆ ಗಡುಗೆ ಒತ್ತು ಬರುವಾಗ ಬಾಲಕಿಯ ಮೇಲೆ ಮತ್ತೊಂದು ದೇವಾಲಯದ ಪಟ್ಟಣದಮ್ಮ ಎಂಬ ಹೆಣ್ಣು ದೇವರು ಆಕೆ ಮೈಮೇಲೆ ಬಂದು ಆ ದೇವಾಲಯದಲ್ಲಿ ಯಾವುದೇ ಪೂಜೆ ಕಾರ್ಯ ಮಾಡಿದ ಕಾರಣ ಅಲ್ಲಿಗೆ ಆ ಬಾಲಕಿ ಭಕ್ತರನ್ನು ಕರಗ ಇದು ಅಲ್ಲಿಗೆ ಪೂಜೆ ಪುನಸ್ಕಾರಗಳನ್ನು ಮಾಡಿಸಿ ನಂತರ ಗದ್ದೆ ಮಸಣಮನ ದೇವಾಲಯಕ್ಕೆ ವಾಪಸ್ ಬಂದಳು ಈ ಒಂದು ಘಟನೆ ಭಕ್ತರ ಗಮನ ಸೆಳೆಯಿತು